ಯಾವ ಒಬ್ಬ ವ್ಯಕ್ತಿ ತನ್ನ ಜೀವನದಲ್ಲಿ ಅವಮಾನ, ಬಡತನ, ಸೋಲು ಹಾಗೂ ಕಣ್ಣೀರು ಹೀಗೆ ಹತ್ತಾರು ನೋವುಗಳನ್ನು ಕಂಡು ಯಾವುದಕ್ಕೂ ಕೂಡ ಜಗ್ಗದೆ ತನ್ನ ಗುರಿಯನ್ನು ಮಾತ್ರ ಫೋಕಸ್ ಮಾಡುತ್ತಾರೋ ಅಂತವರು ಯಾವುದಾದರೊಂದು ಕ್ಷೇತ್ರದಲ್ಲಿ ದೊಡ್ಡ ಸಾಧಕರಾಗುತ್ತಾರೆ. ಇದಕ್ಕೆ ಕನ್ನಡ ಚಿತ್ರರಂಗದ ನಮ್ಮ ಹೆಮ್ಮೆಯ ನಟ ಡಿ ಬಾಸ್, ಯಜಮಾನ, ಚಕ್ರವರ್ತಿ ಹೀಗೆ ಇನ್ನೂ ಹಲವಾರು ಬಿರುದುಗಳನ್ನು ಅಭಿಮಾನಿಗಳಿಂದ ಪಡೆದುಕೊಂಡಿರುವ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರೇ ಸಾಕ್ಷಿ.
ದಚ್ಚು ಸುಖ ಸುಮ್ಮನೇ ಚಾಲೆಂಜಿಂಗ್ ಸ್ಟಾರ್ ದರ್ಶನ್ ಆಗಲಿಲ್ಲ, ತಮ್ಮ ಜೀವನವನ್ನು ಚಾಲೆಂಜ್ ಆಗಿ ಸ್ವೀಕರಿಸಿ ಚಾಲೆಂಜಿಂಗ್ ಸ್ಟಾರ್ ಆಗಿ ಬೆಳೆದು ನಿಂತಿದ್ದಾರೆ. ಜೀವನದಲ್ಲಿ ಪಟ್ಟ ಕಷ್ಟ ಅಷ್ಟಿಷ್ಟಲ್ಲ, ಇಂದು ಅವರು ಕನ್ನಡ ಚಿತ್ರರಂಗದ ನಂಬರ್ ಒನ್ ನಾಯಕನಾಗಿರಬಹುದು ಹಗಾೂ ಹತ್ತಾರು ಕೋಟಿ ಹಣ ಆಸ್ತಿ ಮಾಡಿರಬಹುದು, ಆದರೆ ಇದೆಲ್ಲದರ ಹಿಂದೆ ಹತ್ತಾರು ವರ್ಷಗಳ ಕಠಿಣ ಪರಿಶ್ರಮವಿದೆ, ತ್ಯಾಗವಿದೆ ಹಾಗೂ ಅವಾಮಾನಗಳ ನೋವಿದೆ.
ಇತ್ತೀಚಿಗೆ ಶಿವಣ್ಣ ನೀಡಿರುವ ನಟ ದರ್ಶನ್ ಅವರ ಬಗ್ಗೆ ಕೂಡ ಪ್ರಶ್ನೆ ಕೇಳಲಾಗಿದ್ದು ಅದಾಗ ದರ್ಶನ್ ಅವರ ಬಗ್ಗೆ ಶಿವಣ್ಣ ಹೇಳಿದ್ದೇನೆಂದೆರೆ ದರ್ಶನ್ ಅವರದ್ದೇ ಒಂದು ಸ್ಟೈಲ್ ಇದೆ. ಎತ್ತರದ ಮನುಷ್ಯ ಒಂದು ಆಟಿಟ್ಯೂಡ್ ಇದ್ದು ಅವರು ಬೇರೆ ಥರದ ವ್ಯಕ್ತಿ. ಅವರಿಗೆ ಅವರದ್ದೇ ಆದ ಒಂದು ಸ್ಟೈಲ್ ಇದ್ದು ಅವರು ಯಾರನ್ನು ಕೂಡ ಇಮಿಟೇಟ್ ಮಾಡುವುದಿಲ್ಲ. ಅದು ನನಗೆ ಬಹಳ ಇಷ್ಟವಾಗುತ್ತದೆ.
ದರ್ಶನ್ ಅವರನ್ನ ನಾನು ಚಿಕ್ಕವಯಸ್ಸಿನಿಂದ ಕೂಡ ನೋಡಿದ್ದು ತೂಗುದೀಪ ಶ್ರೀನಿವಾಸ್ ಅವರ ಮಗ ಅವರ ಫ್ಯಾಮಿಲಿ ನಮಗೆ ತುಂಬಾ ಕ್ಲೋಸ್ ಎಂದು ಹೇಳಿದ್ದಾರೆ ಶಿವಣ್ಣ. ಇನ್ನು ಚಿಕ್ಕ ವಯಸ್ಸಿನಿಂದಲೂ ಕೂಡ ದರ್ಶನ್ ನ ನೋಡಿದ್ದೀನಿ ಹಾಗಾಗಿ ಆತನ ಮೇಲೆ ಒಂದು ವಿಶೇಷವಾದ ಪ್ರೀತಿ ಕಾಳಜಿ ನನಗೆ ಇದೆ. ದರ್ಶನ್ ಸ್ವಲ್ಪ ವಿವಾದಗಳಿಂದ ದೂರ ಉಳಿಯಬೇಕಾಗಿದ್ದು ಎಲ್ಲರನ್ನೂ ಎದುರು ಹಾಕಿ ಕೊಳ್ಳಬಾರದು ಇದು ನನ್ನ ಸಲಹೆ ಎಂದು ಶಿವಣ್ಣ ಹೇಳಿದ್ದಾರೆ.
ಇನ್ನು ಅವರಿಗೆ ಒಂದು ಸಲಹೆ ಕೊಡುವುದಾದರೆ ಏನೆಂದು ಸಲಹೆ ಕೊಡ್ತೀರಾ ಎಂದು ಕೇಳಿದ್ದಾಗ ಪ್ರಾಮಾಣಿಕವಾಗಿ ಮಾಡಿ ಎಲ್ಲರನ್ನು ಪ್ರೀತಿಸಿ ಎಂದು ಸಲಹೆ ನೀಡಿದ್ದಾರೆ ಶಿವಣ್ಣ. ಹೌದು ಇದರಿಂದ ದರ್ಶನ್ ಅವರ ಕುಟುಂಬ ದೊಡ್ಮನೆಗೆ ಎಷ್ಟು ಹತ್ತಿರವಾಗಿದೆ ಎಂದು ಗೊತ್ತಾಗುತ್ತದೆ. ಇನ್ನು ಇತ್ತೀಚಿಗೆ ದರ್ಶನ್ ಅವರನ್ನು ಕನ್ನಡ ಚಿತ್ರರಂಗದಿಂದ ಬ್ಯಾನ್ ಮಾಡಬೇಕು ಎಂದು ಸಾಕಷ್ಟು ವಿಷಯಗಳು ಬಂದಿದ್ದು ಇದರ ಬಗ್ಗೆ ಕೂಡ ಮಾತನಾಡಿದ ಶಿವಣ್ಣ ದರ್ಶನ್ ಮನ್ನಸ್ಸಿನಿಂದ ಬಹಳ ಒಳ್ಳೆಯ ವ್ಯಕ್ತಿ ಇದುದ್ದನ್ನ ಇದ್ದಂಗೆ ಹೇಳುವ ವ್ಯಕ್ತಿಯಾಗಿದ್ದು ಸ್ವಲ್ಪ ಹುಷಾರಾಗಿ ಮಾತನಾಡಬೇಕು ಎಂದು ಶಿವಣ್ಣ ಅವರು ಹೇಳಿದ್ದಾರೆ.