ಸದ್ಯ ಇದೀಗ ನಮ್ಮ ಕನ್ನಡ ಸಿನಿಮಾ ರಂಗ ಈ ಹಿಂದಿನಂತಲ್ಲ. ಹೌದು ಬೇರೆ ಬೇರೆ ಸಿನಿಮಾ ಕ್ಷೇತ್ರಗಳು ಒಂದು ಕಾಲದಲ್ಲಿ ಕನ್ನಡ ಸಿನಿಮಾ ರಂಗವನ್ನು ಕೀಳಾಗಿ ನೋಡುತ್ತಿತ್ತು. ಹೌದು ಹಾಗೆ ನೋಡೋದಾದರೆ ನಮ್ಮ ಚಂದನವನದಲ್ಲಿ ಇದ್ದಂತಹ ಚಂದನವನ್ನು ಆಳಿದಂತಹ ಮಹಾನಟರಂತೆ ಉಳಿದ ಸಿನಿಮಾ ಕ್ಷೇತ್ರದಲ್ಲಿ ಯಾರೂ ಕೂಡ ಇರಲಿಲ್ಲ. ಅಂತಹ ದಿಗ್ಗಜರು ನಮ್ಮ ಕನ್ನಡ ಚಿತ್ರರಂಗದಲ್ಲಿದ್ದರು. ಆದರೆ ಅದ್ದೂರಿ ಸಿನಿಮಾಗಳ ಕೊರತೆ ಸ್ವಲ್ಪ ಎದ್ದು ಕಾಣುತಿತ್ತು ಎನ್ನಬಹುದು.
ಆದರೆ ಇದೀಗ ಭಾರತೀಯ ಸಿನಿಮಾ ರಂಗವೆಲ್ಲಾ ಕನ್ನಡ ಸಿನಿಮಾ ಅಂದ ಕೂಡಲೇ ತಿರುಗಿ ನೋಡುತ್ತಿದ್ದಯ ಇದಕ್ಕೆ ಕಾರಣ ಕೆಜಿಎಫ್ ಎಂಬ ಸಿನಿಮಾ. ಹೌದು ನಟ ರಾಕಿಂಗ್ ಸ್ಟಾರ್ ಯಶ್ ನಟನೆಯ ಕೆಜಿಎಫ್ ಮೊದಲ ಭಾಗದಲ್ಲಿಯೇ ಕನ್ನಡ ಸಿನಿಮಾ ರಂಗವನ್ನು ಉತ್ತುಂಗಕ್ಕೆ ಏರಿಸಿದ್ದು ಇದೀಗ ಕೆಜಿಎಫ್ ಎರಡನೆ ಭಾಗ ರಿಲೀಸ್ ಗೆ ಸಿದ್ಧವಾಗಿದ್ದು ಸಿನಿಮಾಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.
ಈ ಬೆನ್ನಿಗೆನೇ ಇದೀಗ ಯೂ ಟ್ಯೂಬ್ ನಲ್ಲಿ ಯಶ್ ಅವರ ಹೊಸ ಸಿನಿಮಾದ ಟೀಸರ್ ಒಂದು ಭಾರೀ ಕುತೂಹಲಕ್ಕೆ ಕಾರಣವಾಗಿದ್ದು ಈ ಟೀಸರ್ ಎಷ್ಟು ನಿಜ ಎಷ್ಟು ಸುಳ್ಳು ಅನ್ನುವುದೇ ಎಲ್ಲರ ತಲೆ ಕೆಡಿಸಿದೆ. ಹೌದು ಯಶ್ ರವರು ಛತ್ರಪತಿ ಶಿವಾಜಿ ಯಾಗಿ ಹೊಸ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರಾ ಅನ್ನುವ ಪ್ರಶ್ನೆ ಎಲ್ಲರನ್ನೂ ಕಾಡಲು ಪ್ರಾರಂಭವಾಗಿದೆ. ಹೌದು ಇದು ಈ ಶಿವಾಜಿ ಟ್ರೇಲರ್ ಹಾಕಿರುವುದು ಬೇರೆ ಯಾರು ಅಲ್ಲ ಬದಲಿಗೆ ಯಶ್ ನಟನೆ ನೋಡಿರುವ ಮಹಾರಾಷ್ಟ್ರದ ಮರಾಠಿ ಅಭಿಮಾನಿಗಳು.
ಹೌದು ಯಶ್ ಗಡ್ಡ ಹಾಗು ಲುಕ್ ಗೆ ಫಿದಾ ಆಗಿರುವ ಇವರು ತಮ್ಮ ನೆಚ್ಚಿನ ನಾಯಕ ಶಿವಾಜಿ ಮಹಾರಾಜರ ಪಾತ್ರ ಮಾಡುವಂತೆ ಬೇಡಿಕೆ ಇಟ್ಟಿದ್ದಾರೆ. ಹಾಗೆಯೆ ರಾಜಮೌಳಿಯನ್ನು ನಿರ್ದೇಶನ ಮಾಡುವಂತೆ ಕೋರಿದ್ದಾರೆ. ಸಾಮಾನ್ಯವಾಗಿ ಒಂದು ಸಿನಿಮಾ ಪ್ರೇಕ್ಷಕನನ್ನು ಸುಮಾರು ಮೂರು ಗಂಟೆಗಳ ಕಾಲ ಹಿಡಿದುಕೊಟ್ಟುಕೊಳ್ಳುತ್ತದೆ ಎಂದರೆ ಅದು ಚಿತ್ರ ಜಗತ್ತಿಗಿರುವ ಮಾಂತ್ರಿಕ ಶಕ್ತಿ ಎನ್ನಹುದು.
ಹೌದು ಒಬ್ಬ ಪಾತ್ರಧಾರಿಯನ್ನು ನೋಡುವಾಗ ತನ್ನೊಳಗೆ ಆವಾಹಿಸಿಕೊಳ್ಳುವಂತೆ ಸಿನಿಮಾ ರೂಪುಗೊಳ್ಳುವುದು ತಮಾಷೆಯ ಮಾತಲ್ಲ ಬಿಡಿ.ಆ ಯಶಸ್ಸಿನಲ್ಲಿ ತೆರೆ ಮೇಲೆ ಕಾಣುವ ನಟರ ಪಾಲು ಎಷ್ಟಿರುತ್ತದೋ ಅದಕ್ಕಿಂತ ಒಂದು ಪಟ್ಟು ಹೆಚ್ಚು ತೂಕ ಎನ್ನಬಹುದಾದ ಪಾಲು ನಿರ್ದೇಶಕನಿಗಿರುತ್ತದೆ.ಹೌದು ಈಗೀಗ ಸಾಮಾಜಿಕ ಜಾಲತಾಣಗಳಲ್ಲಂತೂ ನಿಮ್ಮ ಜೀವನ ಒಂದು ಸಿನಿಮಾವೆಂದಾದರೆ ಅದನ್ನು ಯಾರು ನಿರ್ದೇಶಿಸಬೇಕು ಎಂಬ ಪ್ರಶ್ನೆಗಳೆಲ್ಲಾ ತೂರಿಬರುತ್ತಿರುತ್ತವೆ.
ಹಾಗರಯೇ ಈ ಪ್ರಶ್ನೆ ಎದುರಾದಾಗಲೆಲ್ಲಾ ಜನರು ಸಹಜವಾಗಿಯೇ ಸ್ಟಾರ್ ನಿರ್ದೇಶಕರೆಡೆಗೆ ಬೆರಳು ತೋರಿಸುತ್ತಾರೆ. ಭಾರತೀಯ ಚಿತ್ರರಂಗದಲ್ಲಿ ಅಂತಹ ಸ್ಟಾರ್ ನಿರ್ದೇಶಕರ ಪಟ್ಟಿ ತೆಗೆದರೆ ಅದರಲ್ಲಿ ಕಾಣಬಹುದಾದ ಪ್ರಮುಖ ಹೆಸರು ತೆಲುಗಿನ ರಾಜಮೌಳಿ. ಹೌದು ರಾಜಮೌಳಿಯವರ ಸಿನಿಮಾಗಳೆಂದರೆ ಜನ ಹುಚ್ಚೆದ್ದು ನೋಡಲು ಕಾರಣ ಅವುಗಳಲ್ಲಿರುವಂತಹ ವಿಭಿನ್ನತೆಗಳು. ಒಟ್ಟಾರೆ ಈ ಇಬ್ಬರೂ ಒಪ್ಪಿದರೆ ಸಿನೆಮಾ ಸೆಟ್ಟೇರುವುದು ಗ್ಯಾರಂಟಿ.