ಕೆಜಿಎಫ್ ಸಿನಿಮಾದ ಬಳಿಕ ಯಶ್ ಕಾಲ್ ಶೀಟ್ ಗಾಗಿ ಪರಭಾಷೆಯ ನಿರ್ಮಾಪಕರು ಕ್ಯೂನಲ್ಲಿ ನಿಂತಿದ್ದಾರೆ. ಕೆಜಿಎಫ್ ಚಿತ್ರ ಬಿಡುಗಡೆಯಾದ ಬಳಿಕ ಬಾಕ್ಸ್ ಆಫೀಸ್ ಕಿಂಗ್ ಎನಿಸಿಕೊಂಡಿರುವ ರಾಕಿ ಬಾಯ್ ಸದ್ಯಕ್ಕೆ ಒಪ್ಪಿಕೊಂಡಿರೋದು ಒಂದೇ ಸಿನಿಮಾವನ್ನ. ಇದೀಗ ಯಶ್ ಕಡೆಯಿಂದ ಮತ್ತೊಂದು ಸುದ್ದಿ ಹೊರ ಬಿದ್ದಿದೆ.
ಯಶ್ ಮುಂದಿನ ಸಿನಿಮಾಗೆ ಮಫ್ತಿ ಚಿತ್ರದ ನಿರ್ದೇಶಕನ ನರ್ತನ್ ಆಕ್ಷನ್ ಕಟ್ ಹೇಳ್ತಿದ್ದಾರೆ. ಈ ಚಿತ್ರದ ಬಳಿಕ ಯಶ್ ತೆಲುಗಿನ ಖ್ಯಾತ ನಿರ್ಮಾಪಕ ದಿಲ್ ರಾಜು ಜೊತೆ ಕೈ ಜೋಡಿಸ್ತಿದ್ದಾರೆ ಎನ್ನಲಾಗ್ತಿದೆ. ಅಂದ್ಹಾಗೆ ಈ ದಿಲ್ ರಾಜು ಕೆಜಿಎಫ್ ಚಿತ್ರವನ್ನು ತೆಲುಗಿನಲ್ಲಿ ಬಿಡುಗಡೆ ಮಾಡಿದ್ದ ಖ್ಯಾತ ನಿರ್ಮಾಪಕ.ದಿಲ್ ರಾಜು ಸೂಪರ್ ಹಿಟ್ ಸಿನಿಮಾಗಳಾದ ಆರ್ಯ, ಪರುಗು, ಡಿ ಜೆ, ಮುನ್ನ, ಮಿಸ್ಟರ್ ಪರ್ಫೆಕ್ಟ್, ಬೃಂದಾವನಂ, ರಾಮಯ್ಯ ವಸ್ತವಯ್ಯಾ ಸೇರಿದಂತೆ ಸಾಕಷ್ಟು ಸಿನಿಮಾಗಳಿಗೆ ಬಂಡವಾಳ ಹೂಡಿದ್ದಾರೆ.
ಕೆಜಿಎಫ್ ಸಿನಿಮಾದ ಬಿಡುಗಡೆ ಸಂದರ್ಭದಲ್ಲಿ ಹೊಂಬಾಳೆ ಬ್ಯಾನರ್ ಜೊತೆ ಕೈ ಜೋಡಿಸಿದ್ದ ದಿಲ್ ರಾಜು ಇದೀಗ ಯಶ್ ಗಾಗಿ ದುಬಾರಿ ಬಜೆಟ್ ನ ಸಿನಿಮಾವೊಂದನ್ನ ನಿರ್ಮಾಣ ಮಾಡ್ತಿದ್ದಾರೆ. ಈ ಸಿನಿಮಾ ಪ್ಯಾನ್ ಇಂಡಿಯಾ ಸಿನಿಮಾವಾಗಿರಲಿದ್ದು, ಎರಡು ಭಾಗಗಳಲ್ಲಿ ತೆರೆಗೆ ಬರಲಿದೆಯಂತೆ. ಈ ಚಿತ್ರಕ್ಕಾಗಿ ಯಶ್ ಗೆ 100 ಕೋಟಿ ಸಂಭಾವನೆ ನೀಡಲಾಗಿದೆಯಂತೆ.
ಟಾಲಿವುಡ್ ನಲ್ಲಿ ಕೋಟಿ ನಿರ್ಮಾಪಕ ಎಂದು ಗುರುತಿಸಿಕೊಂಡಿರುವ ದಿಲ್ ರಾಜು ಹಾಗೂ ಕೆಜಿಎಫ್ ಯಶ್ ಕಾಂಬಿನೇಷನ್ ನಲ್ಲಿ ಮತ್ತೊಂದು ಬಿಗ್ ಬಜೆಟ್ ಸಿನಿಮಾ ತೆರೆಗೆ ಬರುವ ಸಾಧ್ಯತೆ ಇದೆ.ಇಷ್ಟೇ ಅಲ್ಲದೆ ಇನ್ನೊಂದು ಸುದ್ದಿ ಕೂಡ ಹೊರಬಿದ್ದಿದೆ ಅದೇನೆಂದರೆ ಯಶ್ ರೋಬೋಟ್ ಮೂವಿ ಶಂಕರ್ ಜೊತೆ 800 ಕೋಟಿ ರೂನ ಬಜೆಟ್ ನಲ್ಲಿ ಸಿನೆಮಾ ಮಾಡುತ್ತಿದ್ದಾರೆ ಎಂದು. ಹೌದು ಸದ್ಯ ಕೆಲವೇ ದಿನಗಲ್ಲಿ ಈ ಎಲ್ಲಾ ಪ್ರಶ್ನೆಗೂ ಉಹಾಪೋಹಕ್ಕೂ ಉತ್ತರ ಸಿಗಲಿದೆ.