Guaranty Card: ಗ್ಯಾರಂಟಿ ಯೋಜನೆಗೆ ತಿರುಗೇಟು ನೀಡಲು ಬಂತು ಕೇಂದ್ರದ ಹೊಸ ಯೋಜನೆ, ಅರ್ಜಿ ಸಲ್ಲಿಸಲು ರೆಡಿಯಾಗಿ
ಇ-ಶ್ರಮ್ ಕಾರ್ಡ್ ಪೋರ್ಟಲ್ ನಲ್ಲಿ ನೋಂದಾಯಿಸಿಕೊಳ್ಳುವ ಮೂಲಕ ಪಡೆಯಿರಿ 1000 ರೂಪಾಯಿ ಲಾಭ.
E-Shram Card: ದೇಶದಲ್ಲಿ ಸಾಮಾನ್ಯ ಜನರಿಗಾಗಿ ಹಲವು ಯೋಜನೆಗಳು ಜಾರಿಯಲ್ಲಿದೆ. ಆರ್ಥಿಕವಾಗಿ ದುರ್ಬಲರಾಗಿರುವ ಜನರನ್ನು ಸಮರ್ಥರನ್ನಾಗಿಸಲು ಕೇಂದ್ರ ಸರ್ಕಾರ ಹಲವು ಯೋಜನೆಗಳನ್ನು ಆರಂಭಿಸಿದೆ. ಅದೇ ರೀತಿ ಲೇಬರ್ ಕಾರ್ಡ್ ಪೋರ್ಟಲ್ ಸಹ ಆರಂಭಿಸಲಾಗಿದೆ. ಇದರಿಂದ ಸಂಘಟಿತ ವಲಯದಲ್ಲಿ ದುಡಿಯುತ್ತಿರುವ ಕಾರ್ಮಿಕರು ಕಾಲಕಾಲಕ್ಕೆ ಸರ್ಕಾರದ ಯೋಜನೆಗಳ ಲಾಭ ಪಡೆಯಬಹುದು.
![Join e-shrum card portal and get 1000 rupees benefit.](https://nadunudi.in/wp-content/uploads/2023/07/e-shram-card.png)
ಇ-ಶ್ರಮ್ ಕಾರ್ಡ್ ಪೋರ್ಟಲ್ ಗೆ ಸೇರಿ ಲಾಭ ಪಡೆಯಿರಿ
ಲೇಬರ್ ಕಾರ್ಡ್ ಪೋರ್ಟಲ್ ಮೂಲಕ ಲಾಭ ಪಡೆಯಲು ಅಸಂಘಟಿತ ವಲಯಗಳಲ್ಲಿ ಕೆಲಸ ಮಾಡುವ ಜನರು ಇ-ಶ್ರಮ್ ಕಾರ್ಡ್ ಪೋರ್ಟಲ್ ನಲ್ಲಿ ನೋಂದಾಯಿಸಿಕೊಳ್ಳಬೇಕು. ಉತ್ತರ ಪ್ರದೇಶ ಸರ್ಕಾರವು ಈ ಯೋಜನೆಯ ಬಗ್ಗೆ ದೊಡ್ಡ ಘೋಷಣೆ ಮಾಡಿದೆ. ಅಂತಹ 3 ಕೋಟಿಗೂ ಹೆಚ್ಚು ಕಾರ್ಮಿಕರ ಬ್ಯಾಂಕ್ ಖಾತೆಗಳಿಗೆ ರಾಜ್ಯ ಸರ್ಕಾರ 500 ರೂಪಾಯಿ ಜಮೆ ಮಾಡಲಿದೆ.
ನೀವು ಉತ್ತರ ಪ್ರದೇಶದಲ್ಲಿ ವಾಸಿಸುತ್ತಿದ್ದರೆ ಮತ್ತು ಇ-ಲೇಬರ್ ಪೋರ್ಟಲ್ ನಲ್ಲಿ ನೋಂದಾಯಿಸಿದ್ದರೆ, ನೀವು ಈ ಮೊತ್ತವನ್ನು ಪಡೆಯಬಹುದು. ಮಾಹಿತಿಯ ಪ್ರಕಾರ ಈಗ 14 ಕೋಟಿ ಜನರು ಈ ಯೋಜನೆಯಲ್ಲಿ ನೋಂದಾಯಿಸಿಕೊಂಡಿದ್ದಾರೆ. ಈ ಯೋಜನೆಯು ಜನರಿಗೆ 2 ಲಕ್ಷದ ವರೆಗೆ ಅಪಘಾತ ವಿಮೆಯನ್ನು ಸಹ ಒದಗಿಸುತ್ತದೆ.
![Join e-shrum card portal and get 1000 rupees benefit.](https://nadunudi.in/wp-content/uploads/2023/07/e-shram-card-latest.png)
ನಿಮ್ಮ ನೋಂದಣಿಯನ್ನು ನೀವು ಮಾಡಿದ್ದರೆ ಇದು ನಿಮಗೆ ತುಂಬಾ ಒಳ್ಳೆಯ ಸುದ್ದಿಯಾಗಿದೆ. ಉತ್ತರ ಪ್ರದೇಶದಲ್ಲಿ ಚುನಾವಣೆಗೂ ಮುನ್ನ ಸರ್ಕಾರ ಜನರಿಗೆ ಹಣ ಬಿಡುಗಡೆ ಮಾಡಲು ಹೊರಟಿದೆ. ಅರ್ಹರ ಖಾತೆಗೆ ಹಣ ಜಮಾ ಮಾಡಲಾಗುವುದು.
ಮಾಹಿತಿಯ ಪ್ರಕಾರ ಇ-ಶ್ರಮ್ ಪೋರ್ಟಲ್ ನಲ್ಲಿ ಇ-ಶ್ರಮ್ ಕಾರ್ಡ್ ಹೊಂದಿರುವವರ ಖಾತೆಗೆ ಹಣವನ್ನು ಜಮಾ ಮಾಡಲಾಗುತ್ತಿದೆ. ಈ ಯೋಜನೆಯಡಿ ಕಾರ್ಮಿಕರು 1000 ರೂಪಾಯಿ ಲಾಭವನ್ನು ಪಡೆಯಬಹುದು ಸರ್ಕಾರ ಇದುವರೆಗೂ 2 ಕೋಟಿ ಜನರ ಖಾತೆಗೆ ಹಣ ಜಮಾ ಮಾಡಿದೆ. ಈ ಹಣವನ್ನು ಡಿಬಿಟಿ ಅಡಿಯಲ್ಲಿ ಜನರಿಗೆ ವರ್ಗಾಯಿಸಲಾಗಿದೆ.