Darshan Case: ಜೈಲು ಸೇರಿದ ದರ್ಶನ್ ಗೆ ಇನ್ನೊಂದು ಸಂಕಷ್ಟ, ಆದಾಯ ತೆರಿಗೆ ಇಲಾಖೆಯಿಂದ ಶಾಕ್.
ಜೈಲು ಸೇರಿದ ದರ್ಶನ್ ಗೆ ಇನ್ನೊಂದು ಸಂಕಷ್ಟ
Darshan Case New Update: ಸದ್ಯ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದರ್ಶನ್ ಜೈಲು ಸೇರಿರುವ ಬಗ್ಗೆ ಎಲ್ಲರಿಗು ತಿಳಿದೇ ಇದೆ. ಇನ್ನು ದರ್ಶನ್ ಜೈಲು ಸೇರಿದ ಬಳಿಕ ದರ್ಶನ್ ಅವರ ವಿಚಾರವಾಗಿ ಸಾಕಷ್ಟು ಮಾಹಿತಿ ಹೊರಬಿದ್ದಿದೆ.
ದರ್ಶನ್ ಒಂದಾದರ ಮೇಲೆ ಮತ್ತೊಂದು ಸಂಕಷ್ಟಕ್ಕೆ ಗುರಿಯಾಗುತ್ತಿದ್ದಾರೆ. ಸದ್ಯ ಜೈಲು ಸೇರಿದ ದರ್ಶನ್ ಗೆ ಇನ್ನೊಂದು ತೊಂದರೆ ಎದುರಾಗಿದೆ. ಹೌದು, ದರ್ಶನ್ ಅವರಿಗೆ ಆದಾಯ ತೆರಿಗೆ ಇಲಾಖೆಯಿಂದ ನೋಟಿಸ್ ಬಂದಿದೆ ಎನ್ನಲಾಗುತ್ತಿದೆ.
![Darshan Case New Updates](https://nadunudi.in/wp-content/uploads/2024/06/Darshan-Case-New-Updates-1.png)
ಜೈಲು ಸೇರಿದ ದರ್ಶನ್ ಗೆ ಇನ್ನೊಂದು ಸಂಕಷ್ಟ
ಇತ್ತೀಚೆಗಷ್ಟೇ ನಟ ದರ್ಶನ್ ಪ್ರಕರಣವನ್ನು ಮುಚ್ಚಿಹಾಕಲು ಆರೋಪಿಗಳಿಗೆ 30 ಲಕ್ಷ ರೂಪಾಯಿ ನೀಡಿದ್ದರು ಎನ್ನಲಾಗಿದ್ದು, ಈ ಹಣವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಹಾಗೆಯೆ ದರ್ಶನ್ ಅವರ ಮನೆಯ ಬೆಡ್ ರೂಮ್ ನಲ್ಲಿರುವ ಕಬೋರ್ಡ್ ನಿಂದ 37,40,000 ರೂಪಾಯಿಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ವರದಿಯಾಗಿದೆ. ಈ ಹಣವನ್ನು ಪೊಲೀಸರು ಬ್ಯಾಗ್ ನಿಂದ ವಶಪಡಿಸಿಕೊಂಡಿದ್ದಾರೆ ಎನ್ನಲಾಗಿದೆ. ಇದಲ್ಲದೇ ವಿಜಯಲಕ್ಷ್ಮಿ ಅಪಾರ್ಟ್ ಮೆಂಟ್ ನಲ್ಲಿ ಪೊಲೀಸರು 3 ಲಕ್ಷ ರೂಪಾಯಿ ವಶಪಡಿಸಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.
ಆದಾಯ ತೆರಿಗೆ ಇಲಾಖೆಯಿಂದ ಶಾಕ್
ಈಗಾಗಲೇ ದರ್ಶನ್ ಆಪ್ತನೊಬ್ಬನ ಮನೆ ಮೇಲೆ ದಾಳಿ ನಡೆಸಿರುವ ಪೊಲೀಸರು ಡೀಲ್ ಗೆ ನೀಡಿದ್ದರು ಎನ್ನಲಾದ 30,00,000 ರೂ.ಗಳನ್ನು ವಶಪಡಿಸಿಕೊಂಡಿದ್ದು, ದರ್ಶನ್ ಅವರ ಮನೆಯಿಂದಲೂ 37 ಲಕ್ಷ 40 ಸಾವಿರ ರೂ.ಗಳನ್ನು ವಶಪಡಿಸಿಕೊಂಡಿದ್ದಾರೆ. ಪೊಲೀಸರು ಈ ಪ್ರಕರಣದಲ್ಲಿ ಈವರೆಗೆ 70,40,000 ರೂ.ಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ತಿಳಿದುಬಂದಿದೆ. ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ 78 ಲಕ್ಷ ರೂಪಾಯಿ ಭಾಗಿಯಾಗಿರುವ ಬಗ್ಗೆ ತನಿಖೆ ನಡೆಸುವಂತೆ ಆದಾಯ ತೆರಿಗೆ ಇಲಾಖೆಯನ್ನು ಕೇಳಲು ಕರ್ನಾಟಕ ಪೊಲೀಸರು ನಿರ್ಧರಿಸಿದ್ದಾರೆ. ನಟ ದರ್ಶನ್ ಗೆ ಗೆ ಇನ್ನೇನು ಕೆಲವೇ ದಿನಗಳಲ್ಲಿ ತೆರಿಗೆ ಇಲಾಖೆಯಿಂದ ಸಂಕಷ್ಟ ಎದುರಾಗಲಿದೆ.
![Actor Darshan Case Latest](https://nadunudi.in/wp-content/uploads/2024/06/Actor-Darshan-Case-Latest.png)