Ambareesh Memorial: ಅಂಬರೀಷ್ ಸ್ಮಾರಕದ ಬಗ್ಗೆ ಸುಮಲತಾಗೆ ಪ್ರಶ್ನೆ ಮಾಡಿದ ಚೇತನ್, ಸುಮಲತಾ ಅವರೇ ಇದು ನ್ಯಾಯವೇ.

ಅಂಬರೀಷ್ ಸ್ಮಾರಕ ನಿರ್ಮಾಣಕ್ಕೆ ಸರ್ಕಾರದಿಂದ ಹಣ ಪಡೆದಿರುವುದು ತಪ್ಪು ಎಂದು ಹೇಳಿದ ನಟ ಚೇತನ್ ಅಹಿಂಸಾ.

Actor Chetan Ahimsa About Sumalatha Ambareesh: ನಟ ಚೇತನ್ ಕುಮಾರ್ (Chetan Kumar) ಇತ್ತೀಚಿಗೆ ವಿವಾದಗಳಲ್ಲಿಯೇ ಹೆಚ್ಚು ಸುದ್ದಿಯಲ್ಲಿದ್ದಾರೆ ಎನ್ನಬಹುದು.

ಸೋಶಿಯಲ್ ಮೀಡಿಯಾದಲ್ಲಿ ಅದೇನೇ ಚರ್ಚೆ ಆದರೂ ಸಹ ಆ ವಿಷಯದ ಕುರಿತು ಏನಾದರೂ ಒಂದು ಮಾತನಾಡಿ ಅವರು ವಿವಾದಲ್ಲಿ ಸಿಲುಕುತ್ತಾರೆ. ಆದ್ದರಿಂದ ನಟ ಚೇತನ್ ಅಹಿಂಸಾ ಅವರು ಹೆಚ್ಚು ಹೆಚ್ಚು ವಿವಾದಗಳ ಮೂಲಕ ಸುದ್ದಿಯಾಗಿದ್ದಾರೆ.

Actor Chetan Ahimsa said that Sumalatha had built the memorial with her own money, but it was wrong for her to reach out to the government for money.
Image Credit: news18

ಅಂಬರೀಷ್ ಸ್ಮಾರಕ ಉದ್ಘಾಟನೆಯಲ್ಲಿ ಭಾವುಕರಾದ ನಟಿ ಸುಮಲತಾ
ಕನ್ನಡ ಚಿತ್ರರಂಗದ ಹೆಮ್ಮೆಯ ನಟ ಸೂಪರ್ ಸ್ಟಾರ್ ಅಂಬರೀಷ್ (Ambareesh) ವಿಧಿವಶರಾಗಿ ಸತತ ನಾಲ್ಕು ವರ್ಷಗಳು ಕಳೆದಿದೆ. ನಟ ಅಂಬರೀಷ್ ನಿಧನರಾಗಿದ್ದರು ಸಹ ಅಭಿಮಾನಿಗಳ ಮನದಲ್ಲಿ ಕನ್ನಡ ಚಿತ್ರರಂಗದಲ್ಲಿ, ಅಭಿಮಾನಿಗಳ ಮನದಲ್ಲಿ ಎಂದಿಗೂ ಸಹ ಚಿರಋಣಿ ಆಗಿದ್ದಾರೆ.

Actor Chetan Ahimsa said that it was wrong to receive money from the government for the construction of Ambarish's memorial. Currently, Chetan Ahimsa's tweet has gone viral.
Image Credit: instagram

ಇದೀಗ ಇವರ ಸ್ಮಾರಕ ನಿರ್ಮಾಣವಾಗಿದೆ. ಮುಖ್ಯಮಂತ್ರಿ ಬೊಮ್ಮಾಯಿ, ಸಂಸದೆ ಸುಮಲತಾ ಹಾಗು ಇತರ ಗಣ್ಯರು ಇದರ ಉದ್ಘಾಟನೆ ಮಾಡಿದ್ದಾರೆ. ಈ ಕಾರ್ಯಕ್ರಮದಲ್ಲಿ ನಟಿ ಸುಮಲತಾ ಅಂಬರೀಷ್ (Sumlatha Ambareesh) ಅವರನ್ನು ನೆನೆದು ಭಾವುಕರಾಗಿ ಮಾತನಾಡಿದ್ದರು. ಅಂಬರೀಷ್ ಅವರು ಬದುಕಿದ್ದಾಗ ಯಾರ ಬಳಿಯೂ ಕೈ ಚಾಚಿಲ್ಲ ಎಂದಿದ್ದರು. ಇದೀಗ ಇದೆ ಮಾತಿಗೆ ನಟ ಚೇತನ್ ಮಾತನಾಡಿದ್ದಾರೆ.

Join Nadunudi News WhatsApp Group

ಅಂಬರೀಷ್ ಸ್ಮಾರಕಕಕ್ಕೆ ಖರ್ಚಾದ ವೆಚ್ಚಗಳ ಬಗ್ಗೆ ತಮ್ಮ ಅಭಿಪ್ರಾಯ ಹಂಚಿಕೊಂಡ ನಟ ಚೇತನ್
ನಟ ಚೇತನ್ ಸುಮಲತಾ ಅವರ ಮಾತನ್ನು ಕೇಳಿ ಅಂಬರೀಷ್ ಯಾರ ಬಳಿಯೂ ಕೈಚಾಚಿರಲಿಲ್ಲ ಆದರೆ ಸ್ಮಾರಕ ನಿರ್ಮಾಣಕ್ಕಾಗಿ ಸುಮಲತಾ ಅವರು ಸರ್ಕಾರದ ಬಳಿ ಕೈಚಾಚಿದ್ದಾರೆ ಎಂದು ಹೇಳಿದ್ದಾರೆ.

ಅಂಬರೀಷ್ ಸ್ಮಾರಕದ ಬಗ್ಗೆ ಹಾಗು ಅದಕ್ಕೆ ಖರ್ಚಾಗಿರುವ ಹಣದ ಬಗ್ಗೆ ನಟ ಚೇತನ್ ಸೋಶಿಯಲ್ ಮೀಡಿಯಾದಲ್ಲಿ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಅನಗತ್ಯವಾಗಿ ಸುಮಲತಾ ಅವರು ಅಂಬರೀಷ್ ಸ್ಮಾರಕ ನಿರ್ಮಾಣಕ್ಕೆ ಎರಡು ಎಕರೆ ಜಾಗ ಮತ್ತು 12ಕೋಟಿ ರೂಪಾಯಿ ಹಣವನ್ನು ಸರ್ಕಾರದಿಂದ ಕೈಚಾಚಿ ಪಡೆದುಕೊಂಡಿದ್ದಾರೆ.

Actor Chetan Ahimsa said it was wrong to receive donations from the government for the construction of Ambareesh's memorial.
Image Credit: deccanherald

ತೆರಿಗೆದಾರರಿಂದ ಹೀಗೆ ಹಣವನ್ನು ದುರುಪಯೋಗ ಮಾಡಿಕೊಳ್ಳುವ ಬದಲು ಸುಮಲತಾ ಅವರು ತಮ್ಮ ಸ್ವಂತದ 23.4 ಕೋಟಿ ರೂಪಾಯಿಗಳನ್ನು ಖರ್ಚು ಮಾಡಲು ಸಾದ್ಯವಾಗಲಿಲ್ಲವೇ, ಎಲ್ಲಾ ಉಳ್ಳವರಿಗೆ ಮತ್ತೆ ಸವಲತ್ತು ಒದಗಿಸುವುದು ನ್ಯಾಯವೇ, ಎಂದು ಚೇತನ್ ಪ್ರಶ್ನೆ ಮಾಡಿದ್ದಾರೆ.

Join Nadunudi News WhatsApp Group