Komal: ಕೋಮಲ್ ಮಾಡಿದ ಆ ಒಂದು ತಪ್ಪಿಗೆ ಕೋಮಲ್ ಜೊತೆ ಮಾತು ಬಿಟ್ಟಿದ್ದರಂತೆ ವಿಷ್ಣು ದಾದಾ.
ಕೋಮಲ್ ಅವರ ಮೇಲೆ ಕೋಪ ಮಾಡಿಕೊಂಡ ವಿಷ್ಣುವರ್ಧನ್ ಅವರು ಎರಡು ದಿನ ಮಾತು ಬಿಟ್ಟಿದ್ದರಂತೆ.
Actor Komal Kumar And Vishnuvardhan: ಹಾಸ್ಯ ನಾಯಕ ನಟ ಕೋಮಲ್ ಕುಮಾರ್ (Komal Kumar) ಸಾಕಷ್ಟು ಸಿನಿಮಾದಲ್ಲಿ ನಟಿಸಿದ್ದಾರೆ. ತಮ್ಮ ನಟನೆಯ ಮೂಲಕ ಸಾಕಷ್ಟು ಅಭಿಮಾನಿಗಳನ್ನು ಸಹ ಪಡೆದುಕೊಂಡಿದ್ದಾರೆ. ಇದೀಗ ನಟ ಕೋಮಲ್ ತಮ್ಮ ಉಂಡೆನಾಮ ಸಿನಿಮಾದ ಬಿಡುಗಡೆಯಲ್ಲಿ ಬ್ಯುಸಿಯಾಗಿದ್ದಾರೆ.
ಈ ಸಿನಿಮಾ ಏಪ್ರಿಲ್ 14 ರಂದು ಬಿಡುಗಡೆಯಾಗಲಿದ್ದು ಕೋಮಲ್ ಅಭಿಮಾನಿಗಳು ಈ ಸಿನಿಮಾವನ್ನು ತೆರೆ ಮೇಲೆ ನೋಡಲು ಕಾಯುತ್ತಿದ್ದಾರೆ. ಇನ್ನು ನಟ ಕೋಮಲ್ ಈ ಸಿನಿಮಾದ ಸಲುವಾಗಿ ಮಾಡಿದ ಸಂದರ್ಶನದಲ್ಲಿ ಡಾ. ವಿಷ್ಣುವರ್ಧನ್ (Vishnuvardhan) ಜೊತೆಗಿನ ಸಿನಿಮಾದ ಬಗ್ಗೆ ಮಾತನಾಡಿದ್ದಾರೆ.
![Actor Komal Kumar talked about the movies he did with Vishnuvardhan](https://nadunudi.in/wp-content/uploads/2023/04/komal-kumar.png)
ವಿಷುವರ್ಧನ್ ಅವರ ಜೊತೆ ಸಿನಿಮಾ ಮಾಡಿದ್ದರ ಬಗ್ಗೆ ಮಾತನಾಡಿದ ಕೋಮಲ್
ವಿಷುವರ್ಧನ್ ಅವರ ಜೊತೆ ಸಿನಿಮಾ ಮಾಡಿದ್ದರ ಬಗ್ಗೆ ಮಾತನಾಡಿದ ಕೋಮಲ್ ಹಲವು ವಿಚಾರಗಳನ್ನು ಹೊರ ಹಾಕಿದ್ದಾರೆ. ಮಾತಾಡ್ ಮಾತಾಡ್ ಮಲ್ಲಿಗೆ ಎಂಬ ಚಿತ್ರದಲ್ಲಿ ನನ್ನ ರೋಲ್ ಚೆನ್ನಾಗಿಲ್ಲ ಅಂದರೆ ನಾನು ಹೊರಟು ಹೋಗುತ್ತೇನೆ ಅಂತ ನೂರು ಬಾರಿ ಹೇಳಿದ್ದೆ.
ಅದರಲ್ಲಿ ನಲವತ್ತು ಜನರ ಮಧ್ಯೆ ನನ್ನನ್ನು ನಿಲ್ಲಿಸಿದ್ದರು. ಹಾಗಾಗಿ ಅದನ್ನು ಬಿಟ್ಟು ಹೊರಟುಬಿಟ್ಟಿದ್ದೆ. ವಿಷ್ಣು ಸರ್ ಗೆ ಹೋಗಿ ಯಾರೋ ಕಂಪ್ಲೆಂಟ್ ಹೇಳಿದ್ದರು. ಸರ್ ಅವನಿಗೆ ಭಯಂಕರ ಕೊಬ್ಬು, ಬಿಟ್ಟು ಹೋಗಿಬಿಟ್ಟಿದ್ದಾನೆ ಅಂತ ಎಂದು ಕಂಪ್ಲೇಂಟ್ ಮಾಡಿದ್ದರು.
![Apparently, Vishnuvardhan was angry with Komal Kumar during the shooting of the film](https://nadunudi.in/wp-content/uploads/2023/04/komal-kumar-and-vishnuvardhan.png)
ವಿಷ್ಣುವರ್ಧನ್ ಜೊತೆ ಇರುವ ಕನೆಕ್ಷನ್ ಬಗ್ಗೆ ಹೇಳಿಕೊಂಡ ನಟ ಕೋಮಲ್
ನಂತರ ವಿಷ್ಣು ಸರ್ ಒಂದೆರಡು ದಿನ ಮಾತನಾಡಿಸುತ್ತಿರಲಿಲ್ಲ. ಆ ಸಮಯದಲ್ಲಿ ಗೋಡೆ ಮೇಲೆ ಹಾಕಿದ್ದ ಬೆಲ್ಟ್ ಹಾವಿನ ಹಾಗೆ ಕಾಣುವ ಒಂದು ಕಾಮಿಡಿ ಸೀನ್ ಮಾಡೋಣ ಎಂದು ವಾಸು ಅವರ ಬಳಿ ಹೇಳಿದೆ, ಅವರು ತುಂಬಾ ಎಂಜಾಯ್ ಮಾಡಿದ್ದಾರೆ.
ವಾಸು ಅವರು ಅದನ್ನು ವಿಷ್ಣು ಸರ್ ಬಳಿ ಹೇಳಿ ಅಂತ ಹೇಳಿದರು. ಮೊದಲೇ ಮಾತನಾಡಿಸುತ್ತಿಲ್ಲ ಅಂತ ಮನದಲ್ಲಿ ಭಯ ಇತ್ತು, ಬೈತಾರೆ ಅಂತ ಹೇಳಿದೆ ಎಂದರು. ನಾನು ಆ ಕಾಮಿಡಿ ದೃಶ್ಯವನ್ನು ವಿವರಿಸಿದೆ. ಅವರಿಗೆ ಅದು ತುಂಬಾ ಇಷ್ಟವಾಗಿದೆ. ಅವರು ನಕ್ಕು ಬಿಟ್ಟರು. ಆಮೇಲೆ ಸರಿ ಮಾಡಿ ಎಂದರು. ನೀವು ನಂಬುತ್ತೀರೋ ಬಿಡುತ್ತೀರೋ ಅಲ್ಲಿಂದಲೇ ನನ್ನ ಹಾಗು ವಿಷ್ಣು ಸರ್ ನಡುವೆ ಕನೆಕ್ಷನ್ ಆಯಿತು ಎಂದು ಕೋಮಲ್ ಹೇಳಿಕೊಂಡರು.