Leelavathi Death: ಲೀಲಾವತಿ ಅವರ ಕೊನೆಯ ಆಸೆ ಏನು ಗೊತ್ತಾ…? ಅಜ್ಜಿ ಕೊನೆಯ ಅಸೆ ಈಡೇರಿಸಲು ಮುಂದಾದ ಮೊಮ್ಮಗ
ಅಜ್ಜಿಯ ಕೊನೆಯ ಆಸೆ ಈಡೇರಿಸುವುದಾಗಿ ಹೇಳಿದ ವಿನೋದ್ ರಾಜ್ ಮಗ.
Actress Leelavathi Desire: ಸದ್ಯ ಕನ್ನಡ ಚಿತ್ರರಂಗ ಮತ್ತೋರ್ವ ಪ್ರತಿಭಾವಂತ ಕಲಾವಿದೆಯನ್ನು ಕಳೆದುಕೊಂಡಿದೆ. ಕನ್ನಡದ ಹಿರಿಯ ನಟಿ ಲೀಲಾವತಿ ಅವರ ನಿಧನದಿಂದಾಗಿ ಇಡೀ ಕರ್ನಾಟಕ ಕಂಬನಿ ಮಿಡುತ್ತಿದೆ. ಚಂದನವನದ ಹಿರಿಯ ಕಲಾವಿದೆಯ ನಿಧನ ತುಂಬಲರಾದ ನಷ್ಟವನ್ನು ನೀಡಿದೆ ಎನ್ನಬಹುದು. ಹಲವು ದಿನದಿಂದ ಅನಾರೋಗ್ಯದಿಂದ ಬಳಲುತ್ತಿದ್ದ ನಟಿ ಲೀಲಾವತಿ ಡಿ. 8 ರಂದು ಕೊನೆಯುಸಿರೆಳೆದಿದ್ದಾರೆ.
ಲೀಲಾವತಿಯ ಅವರ ಪುತ್ರ ವಿನೋದ್ ರಾಜ್ ಅಮ್ಮನ ಅಗಲಿಕೆಯ ನೋವಿನಿಂದ ಪರಿತಪಿಸುತ್ತಿದ್ದಾರೆ. ಇದೀಗ ಲೀಲಾವತಿಯ ಅವರ ಕೊನೆಯ ಆಸೆಯ ಬಗ್ಗೆ ಮಾಹಿತಿ ಲಭಿಸಿದೆ. ತನ್ನ ಅಜ್ಜಿಯ ಕೊನೆಯ ಆಸೆ (Actress leelavathi Dreams) ಏನು ಎನ್ನುವುದು ಹೇಳಿ ಅದನ್ನು ಈಡೇರಿಸುವುದಾಗಿ ವಿನೋದ್ ರಾಜ್ (Vinod Raj) ಅವರ ಮಗ ಹೇಳಿದ್ದಾರೆ.
![Actress Leelavathi Desire](https://nadunudi.in/wp-content/uploads/2023/12/Actress-Leelavathi-Desire.jpg)
ಲೀಲಾವತಿ ಅವರ ಕೊನೆಯ ಆಸೆ ಏನು ಗೊತ್ತಾ…?
ಜೀವನದಲ್ಲಿ ಸಾಕಷ್ಟು ಏರಿಳಿತವನ್ನು ಕಂಡಿರುವ ಲೀಲಾವತಿ ಅವರು ತಮ್ಮ ಕೊನೆಯ ದಿನವನ್ನು ಬಹಳ ನೋವಿನಿಂದ ಕಳೆದಿದ್ದಾರೆ. ಸರಳ ಜೀವನವನ್ನು ನೆಡೆಸುತ್ತಿರುವ ಲೀಲಾವತಿ ಅವರು ವಿಧಿವಶರಾಗಿರುವುದು ನಿಜಕ್ಕೂ ವಿಷಾದನೀಯ. ಇನ್ನು ಲೀಲಾವತಿ ಅವರ ಅಂತಿಮ ದರ್ಶನ ಪಡೆಯಲು ನಿನ್ನೆ ರಾತ್ರಿ ವಿನೋದ್ ರಾಜ್ ಅವರ ಮಗ ಚೆನ್ನೈಯಿಂದ ಬಂದಿದ್ದಾರೆ.
ರಾತ್ರಿಯ ಸಮಯದಲ್ಲಿ ನೆಲಮಂಗಲವನ್ನು ತಲುಪಿದ್ದಾರೆ. ಈ ವೇಳೆ ಲೀಲಾವತಿ ಅವರ ಮೊಮ್ಮಗ ತಮ್ಮ ಅಜ್ಜಿಯ ಅಂತಿಮ ದರ್ಶನ ಪಡೆದಿದ್ದಾರೆ. ಈ ವೇಳೆ ತನ್ನ ಅಜ್ಜಿಯ ಕೊನೆಯ ಆಸೆಯನ್ನು ಈಡೇರಿಸುವುದಾಗಿ ಹೇಳಿದ್ದಾರೆ.
![Vinod Raj Son About Leelavathi](https://nadunudi.in/wp-content/uploads/2023/12/Vinod-Raj-Son.jpg)
ಅಜ್ಜಿ ಕೊನೆಯ ಅಸೆ ಈಡೇರಿಸಲು ಮುಂದಾದ ಮೊಮ್ಮಗ
ಕರುನಾಡ ಜನತೆ ಅಜ್ಜಿಗೆ ತೋರಿದ ಪ್ರೀತಿಯನ್ನು ಕಂಡು ಮೂಕನಾದೆ ಎಂದು ಯುವರಾಜ್ ಹೇಳಿದರು. ಅಜ್ಜಿಯ ಕೊನೆಯ ಆಸೆ ಈಡೇರಿಸುತ್ತೇನೆ ಎಂದರು. ಚೆನ್ನೈನಿಂದ ಬಂದು ಇಲ್ಲಿ ನೆಲೆಸುವುದಾಗಿ ಯುವರಾಜ್ ಭರವಸೆ ನೀಡಿದ್ದಾರೆ. ನಾನು ಚೆನ್ನೈನಲ್ಲಿ ಓದುತ್ತಿದ್ದೆ. ಹಾಗಾಗಿ ಅಜ್ಜಿಯ ಸಾಧನೆ ಗೊತ್ತಿರಲಿಲ್ಲ.ಅಜ್ಜಿಯ ಮೇಲೆ ಜನ ತೋರಿದ ಪ್ರೀತಿ ಅಪಾರ. ನನ್ನ ತಂದೆ ಬೆಂಬಲವಾಗಿ ನಾನು ಇರುತ್ತೇನೆ. ನನ್ನ ಅಜ್ಜಿ ಮಾಡುತ್ತಿದ್ದ ಸಮಾಜಸೇವೆಯನ್ನು ನಾನು ಮುಂದುವರೆಸಿಕೊಂಡು ಹೋಗುತ್ತೇನೆ. ಅಪ್ಪನ ಜೊತೆ ಇದ್ದುಕೊಂಡು ಅಜ್ಜಿಯ ಆಸೆ ಈಡೇರಿಸುವೆಎಂದು ಯುವರಾಜ್ ಭರವಸೆ ನೀಡಿದ್ದಾರೆ.