ನಟಿ ಮತ್ತು ನಿರೂಪಕಿ ಅನುಶ್ರೀ ಯಾರಿಗೆ ಗೊತ್ತಿಲ್ಲ ಹೇಳಿ. ಕನ್ನಡ ಚಿತ್ರರಂಗ ಖ್ಯಾತ ನಿರೂಪಕಿ ಮತ್ತು ನಟಿಯರಲ್ಲಿ ನಟಿ ಅನುಶ್ರೀ ಕೂಡ ಒಬ್ಬರು ಎಂದು ಹೇಳಬಹುದು. ಕೆಲವು ಚಿತ್ರಗಳಲ್ಲಿ ಕಾಣಿಸಿಕೊಂಡ ನಟಿ ನಟಿ ಅವರು ತಮ್ಮ ಮಾತಿನ ಅನುಶ್ರೀ ಮೂಲಕವೇ ಅದೆಷ್ಟೋ ಅಭಿಮಾನಿಗಳನ್ನ ಗಳಿಸಿಕೊಂಡವರು ಎಂದು ಹೇಳಬಹುದು. ಕನ್ನಡ ಚಿತ್ರರಂಗದ ಬಹುತೇಕ ಎಲ್ಲಾ ಕಾರ್ಯಕ್ರಮಗಳಿಗೆ ನಿರೂಪಕಿ ಅನುಶ್ರೀ ಅವರೇ ನಿರೂಪಣೆ ಮಾಡಿಕೊಡುತ್ತಾರೆ ಎಂದು ಹೇಳಿದರೆ ತಪ್ಪಾಗಲ್ಲ. ಹೌದು ಬಹುತೇಕ ಎಲ್ಲಾ ಕಾರ್ಯಕ್ರಮವನ್ನ ಬಹಳ ಚನ್ನಾಗಿ ನಡೆಸಿಕೊಡುವ ನಟಿ ಅನುಶ್ರೀ ಅವರು ಮೂಲತಃ ಮಂಗಳೂರಿನವರು ಎಂದು ಹೇಳಬಹುದು.
ಜೀವನದಲ್ಲಿ ಹಲವು ಕಷ್ಟಗಳನ್ನ ಅನುಭವಿಸಿದ ಅನುಶ್ರೀ ಬೆಂಗಳೂರಿಗೆ ಬಂದು ಚಿತ್ರರಂಗದಲ್ಲಿ ಕೆಲವು ವರ್ಷಗಳ ಕಾಲ ಕೆಲಸವನ್ನ ಮಾಡಿ ನಂತರ ನಿರೂಪಣೆಯ ಮೂಲಕ ಪ್ರತಿಯೊಬರ ಮನೆಮಾತಾದರು ಎಂದು ಹೇಳಬಹುದು. ಇನ್ನು ವಿಷಯಕ್ಕೆ ಬರುವುದಾದರೆ ನಟಿ ಅನುಶ್ರೀ ಅವರು ಒಂದು ಸಿಹಿ ಸುದ್ದಿಯನ್ನ ಹಂಚಿಕೊಂಡಿದ್ದಾರೆ ಎಂದು ಹೇಳಬಹುದು. ಹಾಗಾದರೆ ನಟಿ ಅನುಶ್ರೀ ಹಂಚಿಕೊಂಡ ಸಿಹಿಸುದ್ದಿ ಏನು ಅನ್ನುವುದರ ಬಗ್ಗೆ ತಿಳಿಯೋಣ ಬನ್ನಿ. ಹೌದು ಇಷ್ಟು ದಿನ ಮದುವೆಯ ವಿಚಾರವಾಗಿ ಬಹಳ ಸುದ್ದಿಯಲ್ಲಿ ಇದ್ದ ನಟಿ ಅನುಶ್ರೀ ಅವರು ಈಗ ಹೊಸ ಮನೆಯನ್ನ ಕಟ್ಟಲು ಭೂಮಿ ಪೂಜೆಯನ್ನ ಮಾಡಿದ್ದಾರೆ.
ಮನೆಯನ್ನ ಕಟ್ಟಲು ಭೂಮಿ ಪೂಜೆಯನ್ನ ಮನೆಯವರ ಜೊತೆ ನಿರೂಪಕಿ ಅನುಶ್ರೀ ಅವರು ಮಾಡಿದ್ದು ಅದರ ಫೋಟೋ ಹಂಚಿಕೊಂಡಿದ್ದಾರೆ. ಜಯನಗರದ ಹೌಸಿಂಗ್ ಸೋಸೈಟಿ ಲೇಔಟ್ನ ಸುಬ್ರಮಣ್ಯಪುರಂನಲ್ಲಿ ಜಾಗ ಖರೀದಿ ಮಾಡಿರುವ ನಟಿ ಅನುಶ್ರೀ ಈಗ ಅಲ್ಲಿ ಮನೆಯನ್ನ ಕಟ್ಟಲು ನಿರ್ಧಾರವನ್ನ ಮಾಡಿದ್ದಾರೆ. ಹಲವು ವರ್ಷಗಳಿಂದ ಬೆಂಗಳೂರಿನಲ್ಲಿ ವಾಸವಿರುವ ನಟಿ ಅನುಶ್ರೀ ಅವರು ಬಾಡಿಗೆ ಮನೆಯಲ್ಲಿಯೇ ವಾಸವಿದ್ದರು.
ಕೆಲವು ಸಮಯದ ಹಿಂದೆ ಬೆಂಗಳೂರಿನಲ್ಲಿ ಸ್ವಂತ ಜಾಗವನ್ನ ಖರೀದಿ ಮಾಡಿರುವ ನಿರೂಪಕಿ ಅನುಶ್ರೀ ಈಗ ಗುದ್ದಲಿ ಪೂಜೆಯನ್ನ ಮಾಡಿದ್ದು ಮನೆ ಕಟ್ಟುವ ಕೆಲಸವನ್ನ ಆರಂಭ ಮಾಡಿದ್ದಾರೆ. ಇನ್ನು ಮೂಲಗಳಿಂದ ತಿಳಿದು ಬಂದಿರುವ ಮಾಹಿತಿಯ ಪ್ರಕಾರ ನಟಿ ಅನುಶ್ರೀ ಅವರು ಮನೆಯನ್ನ ನಿರ್ಮಾಣ ಮಾಡಿದ ನಂತರ ಮದುವೆಯನ್ನ ಮಾಡಿಕೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿದೆ. ಸದ್ಯ ಅನುಶ್ರೀ ಅವರು ಗುದ್ದಲಿ ಪೂಜೆಯನ್ನ ಫೋಟೋವನ್ನ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು ಕೆಲವು ನಟ ನಟಿಯರು ಸೇರಿದಂತೆ ಹಲವು ಅಭಿಮಾನಿಗಳು ನಿರೂಪಕಿ ಅನುಶ್ರೀ ಅವರಿಗೆ ಶುಭಾಶಯವನ್ನ ಕೋರಿದ್ದಾರೆ.