Bank: ಬ್ಯಾಂಕ್ ಗ್ರಾಹಕರಿಗೆ ವಿಶೇಷ ಸೂಚನೆ, ಇನ್ನುಮುಂದೆ ವಾರದಲ್ಲಿ 5 ದಿನ ಮಾತ್ರ ಬ್ಯಾಂಕ್ ಓಪನ್.
ಬ್ಯಾಂಕ್ ನೌಕರರ ಕೆಲಸದ ಸಮಯದಲ್ಲಿ ಬದಲಾವಣೆ ಮಾಡಲಾಗಿದೆ ಮತ್ತು ಇನ್ನುಮುಂದೆ ವಾರದಲ್ಲಿ ಐದು ದಿನಗಳು ಬ್ಯಾಂಕ್ ತೆರೆದಿರಲಿದೆ.
Bank Employees Working Hours: ಇದೀಗ ಬ್ಯಾಂಕ್ ನೌಕರರಿಗೆ ಹೊಸ ಸಿಹಿ ಸುದ್ದಿ ಒಂದು ಹೊರ ಬಿದ್ದಿದೆ. ಬ್ಯಾಂಕಿಂಗ್ ವಲಯದಲ್ಲಿ ಡಿಜಿಟಲೀಕರಣದ ಪ್ರಕ್ರಿಯೆಯು ಇತ್ತೀಚಿಗೆ ವೇಗವನ್ನು ಪಡೆದುಕೊಂಡಿದೆ. ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಗ್ರಾಹಕರು ತಮ್ಮ ಬ್ಯಾಂಕ್ ವಹಿವಾಟುಗಳನ್ನು ಡಿಜಿಟಲ್ ಮೂಲಕ ಮಾಡುತ್ತಿದ್ದಾರೆ. ಇದರಿಂದ ಬ್ಯಾಂಕುಗಳಿಗೆ ಬರುವವರ ಸಂಖ್ಯೆ ಕ್ರಮೇಣ ಕಡಿಮೆ ಆಗುತ್ತಿದೆ.
![Bank Employees Working Hours](https://nadunudi.in/wp-content/uploads/2023/05/state-bank.png)
ಬ್ಯಾಂಕ್ ನೌಕರರರಿಗೆ ಹೊಸ ಮಾಹಿತಿ
ಬ್ಯಾಂಕಿಂಗ್ ವಲಯದಲ್ಲಿ ಡಿಜಿಟಲೀಕರಣದ ಪ್ರಕ್ರಿಯೆಯು ಇತ್ತೀಚಿಗೆ ವೇಗವನ್ನು ಪಡೆದುಕೊಂಡಿದೆ. ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಗ್ರಾಹಕರು ತಮ್ಮ ಬ್ಯಾಂಕ್ ಕೆಲಸಗಳನ್ನು ಡಿಜಿಟಲ್ ಮೂಲಕ ಮಾಡುತ್ತಿದ್ದಾರೆ. ಇದರಿಂದ ಬ್ಯಾಂಕ್ ಗಳಿಗೆ ಬರುವವರ ಸಂಖ್ಯೆ ಕ್ರಮೇಣ ಕಡಿಮೆಯಾಗುತ್ತಿದೆ.
ಪ್ರಸ್ತುತ ಕರ್ನಾಟಕದಲ್ಲಿ 2023 ರ ಮೇ ತಿಂಗಳಲ್ಲಿ ಮೇ 7 ಭಾನುವಾರ, ಮೇ 13 ಎರಡನೇ ಶನಿವಾರ, ಮೇ 14 ಭಾನುವಾರ, ಮೇ 27 ನಾಲ್ಕನೇ ಶನಿವಾರ, ಮೇ 28 ಭಾನುವಾರ ಬಾಂಕುಗಳಿಗೆ ರಜೆ ಇರುತ್ತದೆ.
ಇನ್ನುಮುಂದೆ ಬ್ಯಾಂಕ್ ನಲ್ಲಿ 5 ದಿನಗವರೆಗೆ ಮಾತ್ರ ಕೆಲಸ
ಪ್ರಸ್ತುತ ವಾರದಲ್ಲಿ ಆರು ದಿನ ಬ್ಯಾಂಕ್ ಕಾರ್ಯನಿರ್ವಹಿಸುತ್ತಿದ್ದರೆ, ಶೀಘ್ರದಲ್ಲೇ ಐದು ದಿನಗಳಿಗೆ ಕಡಿಮೆಯಾಗುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ. ಸಾರ್ವಜನಿಕ ವಲಯದ ಬ್ಯಾಂಕ್ಗಳ ಕೆಲಸದ ದಿನಗಳನ್ನು ಐದು ದಿನಗಳಿಗೆ ನಿಗದಿಪಡಿಸಿದರೆ, ದೈನಂದಿನ ನಿಯಮಿತ ಸಮಯಗಳಲ್ಲಿ ಬದಲಾವಣೆಯಾಗುವ ಸಾಧ್ಯತೆಯಿದೆ.
![The working hours of bank employees have been changed and henceforth the bank will be open five days a week.](https://nadunudi.in/wp-content/uploads/2023/05/bank-holidays-update.png)
ಮೇ ತಿಂಗಳಲ್ಲಿ ಬ್ಯಾಂಕ್ ರಜೆಗಳ ವಿವರ
ಪ್ರಸ್ತುತ ಭಾನುವಾರ, ಎರಡನೇ ಮಾತ್ತು ನಾಲ್ಕನೇ ಶನಿವಾರ ಹೊರತುಪಡಿಸಿ ಬ್ಯಾಂಕುಗಳು ಬೆಳಿಗ್ಗೆ 10 ರಿಂದ 5 ರವರೆಗೆ ತೆರೆದಿರುತ್ತವೆ. ಐದು ದಿನಗಳ ಕೆಸದ ವಾರವೂ ಜಾರಿಗೆ ಬಂದರೆ ದೈನಂದಿನ ಕೆಲಸದ ಸಮಯವನ್ನು 40 ನಿಮಿಷಗಳ ಕಾಲ ಹೆಚ್ಚಿಸುವ ಸಾಧ್ಯತೆ ಸಹ ಇದೆ.
ಇಂಡಿಯನ್ ಬ್ಯಾಂಕ್ ಅಸೋಸಿಯೇಷನ್ ಮತ್ತು ಫೋರಂ ಆಫ್ ಬ್ಯಾಂಕ್ ಎಂಪ್ಲಾಯಿಸ್ ಈಗಾಗಲೇ ಇದಕ್ಕೆ ಒಪ್ಪಿಗೆ ನೀಡಿದ್ದಾರೆ. ಹಣಕಾಸು ಸಚಿವಾಲಯವು ಐದು ದಿನಗಳ ಕೆಲಸಕ್ಕೆ ಶೀಘ್ರ ಅನುಮೋದನೆ ನೀಡುವ ಸಾಧ್ಯತೆ ಇದೆ. ಮೇ ತಿಂಗಳಲ್ಲಿ ಬ್ಯಾಂಕ್ ರಜೆಗಳು ಹೆಚ್ಚಿವೆ.
![bank employees working hours](https://nadunudi.in/wp-content/uploads/2023/05/bank-employee.png)
ಬುದ್ಧ ಪೂರ್ಣಿಮಾ ಮತ್ತು ಮಹಾರಾಣಾ ಪ್ರತಾಪ್ ಜಯಂತಿ ಸೇರಿ ಒಟ್ಟು 11 ದಿನಗ ವರೆಗೆ ಬ್ಯಾಂಕುಗಳು ಮುಚ್ಚಿರುತ್ತದೆ. ಆದ್ದರಿಂದ ಹಣಕಾಸಿನ ವ್ಯವಹಾರಕ್ಕೆ ಬ್ಯಾಂಕುಗಳಿಗೆ ತೆರಳಲು ಬ್ಯಾಂಕ್ ಕ್ಯಾಲೆಂಡರ್ ಪ್ರಕಾರ ವ್ಯವಸ್ಥೆ ಮಾಡಿಕೊಂಡರೆ ಒಳ್ಳೆಯದು.