Chetan Ahimsa: ನಟ ದರ್ಶನ್ ಬಗ್ಗೆ ಸ್ಪೋಟಕ ಹೇಳಿಕೆ ನೀಡಿದ ನಟ ಚೇತನ್ ಅಹಿಂಸಾ, ದರ್ಶನ್ ಹೇಳಿದ್ದೆಲ್ಲಾ ಸುಳ್ಳು.
ನಟ ದರ್ಶನ್ ಬಗ್ಗೆ ಸ್ಪೋಟಕ ಹೇಳಿಕೆ ನೀಡಿದ ನಟ ಚೇತನ್ ಅಹಿಂಸಾ
Chetan Ahimsa Tweeted About Darshan Case: ಸದ್ಯ ರಾಜ್ಯದಲ್ಲಿ ಸ್ಟಾರ್ ನಟ ಸಾಮಾನ್ಯ ವ್ಯಕ್ತಿಯ ಹತ್ಯೆಯಲ್ಲಿ ಭಾಗಿಯಾಗಿರುವ ಬಗ್ಗೆ ಸಾಕಷ್ಟು ಚರ್ಚೆ ನಡೆಯುತ್ತಿದೆ. ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಆರೋಪಿಯಾಗಿ ಬಂದಿತರಾಗಿದ್ದು, ಸದ್ಯ ಪೊಲೀಸ್ ಕಸ್ಟಡಿಯಲ್ಲಿದ್ದಾರೆ. ಪೊಲೀಸ್ ವಶದಲ್ಲಿರುವ ದರ್ಶನ್ ಅವರನ್ನು ರೇಣುಕಾಸ್ವಾಮಿ ಕೊಲೆ ಸಂಬಂಧಿತ ವಿಚಾರಣೆ ನಡೆಸಲಾಗುತ್ತಿದೆ.
ಇನ್ನು ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹೊಸ ಹೊಸ ರೀತಿಯಲ್ಲಿ ತಿರುವುದು ಸಿಗುತ್ತಿದೆ. ಸದ್ಯ ಸ್ಯಾಂಡಲ್ ವುಡ್ ನ ಅನೇಕ ನಟರು ದರ್ಶನ್ ವಿರುದ್ಧ ಹೇಳಿಕೆಯನ್ನು ನೀಡುತ್ತಿದ್ದಾರೆ. ಇದೀಗ ಕನ್ನಡ ಚಿತ್ರರಂಗದ ಇನ್ನೋರ್ವ ನಟ ಚೇತನ್ ಅಹಿಂಸಾ ದರ್ಶನ್ ಬಗ್ಗೆ ಟ್ವೀಟ್ ಮಾಡಿದ್ದಾರೆ. ಸದ್ಯ ಚೇತನ್ ಅವರ ಈ ಟ್ವೀಟ್ ಬಾರಿ ವೈರಲ್ ಆಗುತ್ತಿದೆ.
![Chetan Ahimsa Tweet About Darshan Case](https://nadunudi.in/wp-content/uploads/2024/06/Chetan-Ahimsa-Tweet-About-Darshan-Case.png)
ನಟ ದರ್ಶನ್ ಬಗ್ಗೆ ಸ್ಪೋಟಕ ಹೇಳಿಕೆ ನೀಡಿದ ನಟ ಚೇತನ್ ಅಹಿಂಸಾ
ನಟ ದರ್ಶನ್ ಹೇಳಿಕೊಳ್ಳುವಂತಹ ‘ಲೈಟ್ ಬಾಯ್’ ಅಲ್ಲ ಎಂದು ನಟ ಚೇತನ್ ಅಹಿಂಸಾ ಹೇಳಿದ್ದಾರೆ. ಈ ಕುರಿತು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಅನ್ನು ಹಂಚಿಕೊಂಡಿರುವ ನಟ ಚೇತನ್ ಅಹಿಂಸಾ, ಕನ್ನಡ ಚಿತ್ರೋದ್ಯಮದ ಮೂಲಗಳು ನಟ ದರ್ಶನ್ ಹೇಳಿಕೊಂಡಂತೆ ಲೈಟ್ ಬಾಯ್ ಆಗಿರಲಿಲ್ಲ. ಆದರೆ ಛಾಯಾಗ್ರಾಹಕನ ಸಹಾಯಕರಾಗಿದ್ದರು- ಇದು ಚಲನಚಿತ್ರದ ಪರಿಭಾಷೆಯಲ್ಲಿ ದೊಡ್ಡ ವ್ಯತ್ಯಾಸವಾಗಿದೆ.
ಉನ್ನತ ಮಟ್ಟಕೆ ಬೆಳೆದಿರೋ ವ್ಯಕ್ತಿಗಳಿಗೆ ಇಂತಹ ದೋಷಪೂರಿತ ಉತ್ಪ್ರೇಕ್ಷಾಗಳು ಹೊಸದೇನಲ್ಲ. ಅದೇ ರೀತಿ, ಪ್ರಧಾನಿ ಮೋದಿ ಎಂದಿಗೂ ಚಹಾ ಮಾರಿಲ್ಲ ಮತ್ತು ಸಿಎಂ ಸಿದ್ದು ಎಂದಿಗೂ ಅಹಿಂದಾದ ನಾಯಕರಲ್ಲ, ಇಂತಹ ಆಧಾರರಹಿತ ಬಿಲ್ಡಪ್ ಅನ್ನು ತಗ್ಗಿಸಬೇಕು ಎಂದು ಬರೆದಿದ್ದಾರೆ.
![Chetan Ahimsa And Darshan](https://nadunudi.in/wp-content/uploads/2024/06/Chetan-Ahimsa-And-Darshan.png)