ಖ್ಯಾತ ನಟ ಚಿರಂಜೀವಿ ಸರ್ಜಾ ಕನ್ನಡ ಚಿತ್ರರಂಗ ಕಂಡ ಖ್ಯಾತ ನಟರಲ್ಲಿ ಒಬ್ಬರು. ಹೌದು ಅದೆಷ್ಟೋ ಚಿತ್ರಗಳಲ್ಲಿ ನಟನೆಯನ್ನ ಮಾಡಿ ಚಿತ್ರರಂಗದಲ್ಲಿ ಬಹಳ ಹೆಸರನ್ನ ಮಾಡಿದ್ದ ನಟ ಚಿರಂಜೀವಿ ಸರ್ಜಾ ಇಂದು ನಮ್ಮಜೊತೆ ಇಲ್ಲ ಅನ್ನುವುದು ಬಹಳ ಬೇಸರದ ಸಂಗತಿ ಎಂದು ಹೇಳಬಹುದು. ಇನ್ನು ಅದೇ ರೀತಿಯಲ್ಲಿ ನಟ ಚಿರಂಜೀವಿ ಸರ್ಜಾ ಅವರು ನಮ್ಮನ್ನ ಅಗಲಿ ಎರಡು ವರ್ಷಗಳು ಕಳೆದಿದೆ, ಆದರೆ ಅದೆಷ್ಟೋ ಅಭಿಮಾನಿಗಳು ಅವರ ನೆನಪಿನಲ್ಲಿಯೇ ಇದ್ದಾರೆ ಎಂದು ಹೇಳಬಹುದು. ಇದೆ ತಿಂಗಳ ಜೂನ್ 7 ನೇ ತರ್ಕಿಲೆಂದು ಚಿರಂಜೀವಿ ಸರ್ಜಾ ಅವರು ನಮ್ಮನ್ನ ಅಗಲಿ ಎರಡು ವರ್ಷಗಳು ಕಳೆಯಿತು ಮತ್ತು ಮೊನ್ನೆ ಸರ್ಜಾ ಕುಟುಂಬ ಮತ್ತು ಸುಂದರ್ ರಾಜ್ ಅವರ ಕುಟುಂಬ ಚಿರಂಜೀವಿ ಸರ್ಜಾ ಸಮಾಧಿಯ ಮುಂದೆ ಬಂದು ಚೀರುವಿಗೆ ವಿಶೇಷವಾದ ಪೂಜೆಯನ್ನ ಸಲ್ಲಿಸಿದರು.
ಇನ್ನು ಅದೇ ರೀತಿಯಲ್ಲಿ ಚಿರಂಜೀವಿ ಸರ್ಜಾ ಮಗ ರಾಯನ್ ರಾಜ್ ಸರ್ಜಾ ಕೂಡ ಅಪ್ಪನ ಸಮಾಧಿಯ ಮುಂದೆ ಬಂದಿದ್ದು ಅಲ್ಲಿ ರಾಯನ್ ರಾಜ್ ಸರ್ಜಾ ಮಾಡಿದ ಕೆಲಸ ನೋಡಿ ಅಲ್ಲಿಗೆ ಬಂದಿದ್ದ ಎಲ್ಲರ ಕಣ್ಣು ಒದ್ದೆಯಾಯಿತು ಎಂದು ಹೇಳಬಹುದು. ಹಾಗಾದರೆ ಅಪ್ಪನ ಸಮಾಧಿಯ ಮುಂದೆ ಬಂದ ರಾಯನ್ ರಾಜ್ ಸರ್ಜಾ ಮಾಡಿದ್ದೇನು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಇದರ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ.
ಮೇಘನಾ ರಾಜ್ ಮತ್ತು ಚಿರಂಜೀವಿ ಸರ್ಜಾ ಅವರು ಸುಮಾರು ಹತ್ತು ವರ್ಷಗಳ ಕಾಲ ಪ್ರೀತಿಯನ್ನ ಮಾಡಿ ನಂಟಾರ ಗುರು ಹಿರಿಯ ಸಮ್ಮುಖದಲ್ಲಿ ಮದುವೆಯನ್ನ ಮಾಡಿಕೊಂಡರು, ಆದರೆ ಅವರ ಸುಂದರ ಸಂಸಾರದ ಮೇಲೆ ಯಾರ ಕೆಟ್ಟ ದೃಷ್ಟಿ ಬಿತ್ತೋ ಚಿರಂಜೀವಿ ಸರ್ಜಾ ಎರಡು ವರ್ಷಗಳ ಹಿಂದೆ ತೀವ್ರವಾದ ಹೃದಯಾಘಾತದಿಂದ ಇಹಲೋಕವನ್ನ ತ್ಯಜಿಸಿದರು. ಹೌದು ಕಳೆದ ವಾರ ಚಿರಂಜೀವಿ ಸರ್ಜಾ ಸರ್ಜಾ ಸಮಾಧಿಯ ಮುಂದೆ ಬಹಳ ವಿಶೇಷವಾದ ಪೂಜೆ ನಡೆಯಿತು ಮತ್ತು ಈ ಪೂಜೆಗೆ ಸರ್ಜಾ ಕುಟುಂಬ ಮತ್ತು ಸುಂದರ್ ರಾಜ್ ಕುಟುಂಬ ಕೂಡ ಬಂದಿತ್ತು.
ಇನ್ನು ಅದೇ ರೀತಿಯಲ್ಲಿ ಅಪ್ಪನ ಸಮಾಧಿಯನ್ನ ನೋಡಿದ ಜೂನಿಯರ್ ಚಿರು ಚಪ್ಪಾಳೆಯನ್ನ ಹೊಡೆಯುತ್ತ ಅಪ್ಪ ಅಪ್ಪ ಎಂದು ಅಪ್ಪನ ಫೋಟೋ ಮುಟ್ಟಿದ್ದಾನೆ ಮತ್ತು ಇದನ್ನ ನೋಡಿದ ಮೇಘನಾ ರಾಜ್ ಮತ್ತು ಸರ್ಜಾ ಕುಟುಂಬದವರ ಕಣ್ಣು ಒದ್ದೆಯಾಯಿತು. ಮೇಘನಾ ಅವರು ಮಗನಿಗೆ ಅಪ್ಪ ಚಿತ್ರ, ಅಪ್ಪನ ಮಾತು ಮತ್ತು ಅಪ್ಪನ ಧ್ವನಿ ಯಾವಾಗಲು ಕೇಳಿಸುತ್ತಿದ್ದರು. ಇನ್ನು ಅದೇ ರೀತಿಯಲ್ಲಿ ಜೂನಿಯರ್ ಚಿರು ಅಪ್ಪನ ಫೋಟೋ ಎಲ್ಲೇ ನೋಡಿದರು ಅಪ್ಪ ಎಂದು ಕರೆಯುತ್ತಾನೆ. ಏನೇ ಆಗಲಿ ಚಿರು ಇದ್ದಿದ್ದರೆ ಮಗನ ಈ ತುಂಟಾಟವನ್ನ ನೋಡಿ ತುಂಬಾ ಖುಷಿ ಪಡುತ್ತಿದ್ದರು, ಆದರೆ ವಿಧಿ ಚಿರು ಮತ್ತು ಮೇಘನಾ ರಾಜ್ ಅಬ್ದುಕಿನಲ್ಲಿ ದೊಡ್ಡ ಆಟ ಆಡಿತು ಎಂದು ಹೇಳಬಹುದು. ಸ್ನೇಹಿತರೆ ಚಿರು ಮಗನ ಈ ತುಂಟಾಟದ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ.