Darshan Mother: ಅಂದು ಡಿ ಬಾಸ್ ತಾಯಿ ಮಕ್ಕಳನ್ನ KRS ಗೆ ತಳ್ಳಿ ಜೀವ ಕಳೆದುಕೊಳ್ಳಲು ನಿರ್ಧಾರ ಮಾಡಿದ್ದು ಯಾಕೆ.
ಮೂರೂ ಮಕ್ಕಳನ್ನ KRS ತಳ್ಳಿ ಜೀವ ಕಳೆದುಕೊಳ್ಳಲು ನನ್ನ ತಾಯಿ ನಿರ್ಧಾರ ಮಾಡಿರುವುದರ ಬಗ್ಗೆ ಡಿ ಬಾಸ್ ಹೇಳಿಕೊಂಡಿದ್ದಾರೆ.
Actor Darshan About His Mother: ಚಿತ್ರರಂಗದ ಹಲವು ಸ್ಟಾರ್ ನಟ ನಟಿಯರು ಚುನಾವಣೆಯ ಪ್ರಚಾರದಲ್ಲಿ ತೊಡಗಿಕೊಂಡಿದ್ದಾರೆ. ಅದರಲ್ಲಿ ದರ್ಶನ್ ಅವರು ಸಹ ಒಬ್ಬರು.
ನಟ ದರ್ಶನ್ (Darshan) ಅವರು ಚುನಾವಣೆಯ ಪ್ರಚಾರದಲ್ಲಿ ಬ್ಯುಸಿಯಾಗಿದ್ದರು ಸಹ ಧರಮಸ್ಥಳಕ್ಕೆ ಭೇಟಿ ನೀಡಿ ಮಂಜುನಾಥ ಸ್ವಾಮಿಯ ದರ್ಶನ್ ಪಡೆದಿದ್ದಾರೆ. ಅಲ್ಲಿ ನಡೆದ ಸಾಮೂಹಿಕ ವಿವಾಹ ಮಹೋತ್ಸವದಲ್ಲಿ ಭಾಗಿಯಾಗಿ ನಟ ದರ್ಶನ್ ಅವರು ನವ ಜೋಡಿಗೆ ಶುಭ ಹಾರೈಸಿದ್ದಾರೆ.
![Darshan About His Mother](https://nadunudi.in/wp-content/uploads/2023/05/Darshan-About-His-Mother.png)
ತಂದೆ ಸಾವಿನ ಬಳಿಕ ಮನೆ ಪರಿಸ್ಥಿತಿ ಹೇಗಿತ್ತು ಎನ್ನುವುದರ ಬಗ್ಗೆ ಹೇಳಿಕೊಂಡ ನಟ ದರ್ಶನ್
ಸಾಮೂಹಿಕ ವಿವಾಹದ ವೇದಿಕೆಯಲ್ಲಿ ಮಾತನಾಡಿರುವ ದರ್ಶನ್ ಅವರು ಅನೇಕ ತಮ್ಮ ಜೀವನದಲ್ಲಿ ನಡೆದ ಅನೇಕ ಇಂಟ್ರೆಸ್ಟಿಂಗ್ ಸಂಗತಿಯನ್ನು ಬಿಚ್ಚಿಟ್ಟಿದ್ದಾರೆ. ಸದ್ಯ ನಟ ದರ್ಶನ್ ಮಾತಾಡಿರುವ ಹೇಳಿಕೆ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಟ್ಯಾಂಡ್ಸ್ ತೂಗುದೀಪ ಶ್ರೀನಿವಾಸ್ ಅವರು ನಿಧನರಾದ ಸಮಯದಲ್ಲಿ ಮನೆಯ ಪರಿಸ್ಥಿತಿ ಹೇಗಿತ್ತು. ತಾಯಿ ಮೀನಮ್ಮ ಮೂರೂ ಜನ ಮಕ್ಕಳನ್ನು ಕೆ ಆರ್ ಎಸ್ ಗೆ ತಳ್ಳಿ ತಾವು ಆತ್ಮಹತ್ಯೆ ಮಾಡಿಕೊಳ್ಳಬೇಕು ಎಂದುಕೊಂಡಿದ್ದರಂತೆ. ಆದರೆ ಮಂಜುನಾಥ ಸ್ವಾಮಿಯ ದರ್ಶನ ಮಾಡಿ ವೀರೇಂದ್ರ ಹೆಗ್ಡೆ ಅವರ ಭೇಟಿಯ ಬಳಿಕ ನಿರ್ಧಾರ ಬದಲಿಸಿಕೊಂಡರು ಎಂದು ನಟ ದರ್ಶನ್ ಹೇಳಿಕೊಂಡಿದ್ದಾರೆ.
![Darshan About His Mother](https://nadunudi.in/wp-content/uploads/2023/05/Darshan-About-His-Mother-1.png)
ಸಾಮೂಹಿಕ ವಿವಾಹ ಮಾಡಿಕೊಂಡಿರುವ ಎಲ್ಲ ಜೋಡಿಗಳಿಗೆ ಶುಭ ಕೋರಿದ ನಟ ದರ್ಶನ್
ಸಾಮೂಹಿಕ ವಿವಾಹ ಮಹೋತ್ಸವ ನಂತರ ಮಾತನಾಡಿರುವ ನಟ ದರ್ಶನ್ ಹೊಸ ಜೀವನಕ್ಕೆ ಕಾಲಿಡುತ್ತಿರುವ ಎಲ್ಲ ಜೋಡಿಗಳಿಗೆ ಶುಭಾಶಯ. ಭಗವಂತ ನಿಮಗೆ ಆಯುಷ್ಯ, ಆರೋಗ್ಯ ಕೊಡಲಿ, ಜೀವನ ಬಹಳ ಚೆನ್ನಾಗಿ ಇರಲಿ. ಇಲ್ಲಿ ಬಂದಿರುವ ಎಲ್ಲ ಜೋಡಿಗಳು ಒಳ್ಳೆಯ ಕೆಲಸ ಮಾಡಿದ್ದಾರೆ. ಏಕೆಂದರೆ ಇವತ್ತು ಮದುವೆ ಮಾಡೋದು ಬಹಳ ಕಷ್ಟ.
ಇಲ್ಲಿ ಮದುವೆಯಾದರೆ ಬಹಳ ಉಪಯೋಗ ಇದೆ. ಹೆಣ್ಣಿನ ಮನೆಯವರು ಅದು ಮಾಡಿಲ್ಲ, ಇದು ಮಾಡಿಲ್ಲ ಎಂದು ಯಾರು ಹೇಳಲ್ಲ. ಇದನ್ನು ನಾನು ಯಾಕೆ ಹೇಳುತ್ತೀನಿ ಅಂದರೆ ನಾನು ಮದುವೆ ಮಾಡಿಕೊಂಡಿದ್ದು ಇಲ್ಲೇ ಎಂದು ನಟ ದರ್ಶನ್ ಹೇಳಿದ್ದಾರೆ.
![Darshan About His Mother](https://nadunudi.in/wp-content/uploads/2023/05/Darshan-About-His-Mother-2.png)