ನಟ ದಿಗಂತ್ ಬಳಗಣ್ಣಿನ ದೃಷ್ಟಿ ಕಳೆದುಕೊಂಡಿದ್ದು ಹೇಗೆ ಗೊತ್ತಾ, ದಿಗಂತ್ ಬದುಕಿನ ಕಣ್ಣೀರಿನ ಕಥೆ ನೋಡಿ.

ನಟ ದಿಗಂತ್ ಅವರ ವಿಷಯ ಸಾಮಾಜಿಕ ಜಾಲತಾಣದಲ್ಲಿ ಸಕತ್ ಸುದ್ದಿಯಲ್ಲಿ ಇದೆ ಎಂದು ಹೇಳಬಹುದು. ಎರಡು ದಿನದ ಹಿಂದೆ ಗೋವಾದಲ್ಲಿ ನಟ ದಿಗಂತ್ ಅವರಿಗೆ ಅಪಘಾತವಾದ ಕಾರಣ ಅವರನ್ನ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಸಾಹಸ ಕ್ರೀಡೆಯನ್ನ ಆಡುವ ಸಮಯದಲ್ಲಿ ನಟ ದಿಗಂತ್ ಅವರಿಗೆ ಅಪಘಾತವಾಗಿದ್ದು ಅವರಿಗೆ ತಕ್ಷಣ ಪ್ರಥಮ ಚಿಕಿತ್ಸೆಯನ್ನ ನಂತರ ಅವರನ್ನ ಏರ್ ಲಿಫ್ಟ್ ಕೂಡ ಬೆಂಗಳೂರಿನ ಮಣಿಪಾಲ ಆಸ್ಪತ್ರೆಗೆ ದಾಖಲು ಮಾಡಲಾಯಿತು. ಹೌದು ನಟ ದಿಗಂತ್ ಅವರ ಕುತ್ತಿಗೆ ಮತ್ತು ಬೆನ್ನಿನ ಮೂಳೆಗೆ ಬಲವಾದ ಪೆಟ್ಟಾದ ಕಾರಣ ಅವರನ್ನ ತಕ್ಷಣ ಆಸ್ಪತ್ರೆಗೆ ದಾಖಲು ಮಾಡಲಾಯಿತು.

ಇನ್ನು ಮೂರೂ ಘಟನೆಗಳ ನಟ ದಿಗಂತ್ ಅವರಿಗೆ ಆಪರೇಷನ್ ಮಾಡಿದ ವೈದ್ಯರು ನಟ ದಿಗಂತ ಅವರ ಅರೋಗ್ಯ ಈಗ ಸ್ಥಿರವಾಗಿದೆ ಮತ್ತು ಅವರು ಮೂರೂ ತಿಂಗಳುಗಳ ಕಾಲ ಬೆಡ್ ರೆಸ್ಟ್ ಮಾಡಬೇಕು ಎಂದು ಹೇಳಿದರು. ಇದು ನಟ ದಿಗಂತ್ ಅವರ ಜೀವನದಲ್ಲಿ ನಡೆದ ಎರಡನೆಯ ಕಹಿ ಘಟನೆ ಎಂದು ಹೇಳಬಹುದು. ಹೌದು ನಟ ದಿಗಂತ್ ಅವರ ಜೀವನದಲ್ಲಿ ಹಿಂದೆ ದೊಡ್ಡ ಅಹಿತಕರ ಘಟನೆ ನಡೆದಿದ್ದು ಆ ಘಟನೆಯ ಕಾರಣ ಅವರ ಒಂದು ಕಣ್ಣು ದೃಷ್ಟಿಯನ್ನ ಕಳೆದುಕೊಂಡಿದೆ. ಹಾಗಾದರೆ ನಟ ದಿಗಂತ್ ಅವರು ಒಂದು ಕಣ್ಣಿನ ದೃಷ್ಟಿಯನ್ನ ಕಳೆದುಕೊಂಡಿದ್ದು ಹೇಗೆ ಅನ್ನುವುದರ ಬಗ್ಗೆ ತಿಳಿಯೋಣ ಬನ್ನಿ.

Diganth eye problem

ಟಿಕೆಟ್ ಟು ಬಾಲಿವುಡ್ ಚಿತ್ರದ ಶೂಟಿಂಗ್ ಸಮಯದಲ್ಲಿ ನಡೆದ ಒಂದು ಅವಘಡ ನಟ ದಿಗಂತ್ ಅವರ ಜೀವನವನ್ನೇ ಬದಲಾಯಿಸಿತು ಎಂದು ಹೇಳಬಹುದು. ನಟ ದಿಗಂತ್ ಅವರು ಹಿಂದಿ ಚಿತ್ರದಲ್ಲಿ ನಟನೆಯನ್ನ ಮಾಡಿದ್ದರು ಮತ್ತು ಚಿತ್ರದ ಶೂಟಿಂಗ್ ಸಮಯದಲ್ಲಿ ಅವರ ಬಳಗಣ್ಣಿಗೆ ಬಲವಾದ ಪೆಟ್ಟು ಬಿದ್ದು ಅವರ ಬಲಗಣ್ಣು ದೃಷ್ಟಿಯನ್ನ ಕಳೆದುಕೊಂಡಿತು. ಈ ಚಿತ್ರದ ಸಿನಿಮಾ ಶೂಟಿಂಗ್ ಸಂದರ್ಭದಲ್ಲಿಯೇ ನಾಯಕಿಯ ಹೀಲ್ಡ್ ಚಪ್ಪಲಿ ಎಸೆಯುವ ಸೀನ್‌ನಲ್ಲಿ ದಿಗಂತ್ ಕಣ್ಣಿಗೆ ಬಲವಾದ ಪೆಟ್ಟಾಗಿ ಅವರ ಬಲಗಣ್ಣು ದೃಷ್ಟಿಯನ್ನ ಕಳೆದುಕೊಂಡಿತ್ತು.

ಹೌದು ನಾಯಕಿ ಚಪ್ಪಲಿ ಎಸೆದಿದ್ದು ಆ ಸಮಯದಲ್ಲಿ ಅದು ಅವರ ಕಣ್ಣಿಗೆ ಬಂದು ಬಡಿದಿದೆ. ತಕ್ಷಣ ಅವರನ್ನ ಆಸ್ಪತ್ರೆಗೆ ದಾಖಲು ಮಾಡಲಾಯಿತಾದರೂ ಅವರನ್ನ ಕಣ್ಣು ದೃಷ್ಟಿಯನ್ನ ಕಳೆದುಕೊಂಡಿತು. ಈ ಘಟನೆಯಿಂದ ಬಹಳ ನೋವನ್ನ ಅನುಭವಿಸಿದ್ದ ನಟ ದಿಗಂತ್ ಅವರು ಬಹಳ ಖಿನ್ನೆತೆಗೆ ಒಳಗಾಗಿದ್ದರು ಎಂದು ಹೇಳಬಹುದು. ಈ ಘಟನೆಯ ನಂತರ ಈಗ ಮತ್ತೆ ನಟ ದಿಗಂತ್ ಬದುಕಲ್ಲಿ ದೊಡ್ಡ ಅನಾಹುತ ನಡೆದಿದೆ ಎಂದು ಹೇಳಬಹುದು. ಈ ಘಟನೆ ಮತ್ತೆ ನಟ ದಿಗಂತ್ ಅವರ ಜೀವನದಲ್ಲಿ ದೊಡ್ಡ ಸಮಸ್ಯೆ ಉಂಟುಮಾಡಿದೆ ಎಂದು ಹೇಳಿದರೆ ತಪ್ಪಾಗಲ್ಲ. ನಟ ದಿಗಂತ್ ಅವರ ಆರೋಗ್ಯದಲ್ಲಿ ಆದಷ್ಟು ಬೇಗ ಚೇತರಿಕೆ ಆಗಲಿ ಎಂದು ನಾವು ನೀವು ದೇವರಲ್ಲಿ ಪ್ರಾರ್ಥನೆಯನ್ನ ಮಾಡೋಣ.

Join Nadunudi News WhatsApp Group

Diganth eye problem

Join Nadunudi News WhatsApp Group