Rain Alert: ಬಿಸಿಲಿನಿಂದ ಕಂಗಾಲಾದ ಜನರಿಗೆ ಗುಡ್ ನ್ಯೂಸ್, ಕರ್ನಾಟಕದ ಈ ಭಾಗಗಳಲ್ಲಿ ಆಗಲಿದೆ ಭರ್ಜರಿ ಮಳೆ.
ಕರ್ನಾಟಕದ ಈ ಭಾಗಗಳಲ್ಲಿ ಈ ವಾರದಲ್ಲಿ ಭರ್ಜರಿ ಮಳೆ ಆಗಲಿದೆ.
Rain Alert: ಇದೀಗ ಬೇಸಿಗೆಗಾಲ ಆರಂಭವಾಗಿದೆ. ಜನರು ಬೇಸಿಗೆಯ ಬಿಸಿಲಿಗೆ ರೋಸಿ ಹೋಗಿದ್ದಾರೆ. ಈ ಸಮಯದಲ್ಲಿ ಮಳೆ ಬರಲಿ ಎಂದು ಎಲ್ಲರು ಬಯಸುತ್ತಾರೆ. ಒಂದು ಮಳೆ ಬಂದರೆ ಕೃಷಿಗೆ, ತೋಟಕ್ಕೆ, ಬೆಳೆಗಳಿಗೆ ಉತ್ತಮವಾಗುತ್ತದೆ.
ಹೀಗಿರುವಾಗ ಈಗಾಗಲೇ ಕೆಲವು ಒಂದೆರಡು ಬಾರಿ ಮಳೆ ಬಿದ್ದಿದೆ. ಮಳೆ ಬಂದರು ಬಿಸಿಲಿನ ಶಾಖ ಕಡಿಮೆಯಾಗಿಲ್ಲ ಎನ್ನಬಹುದು. ಇನ್ನು ಮೇ ಮೊದಲ ವಾರದಲ್ಲಿ ಮಳೆ ಬರುವುದಾಗಿ ಹವಾಮಾನ ಇಲಾಖೆ ಮಾಹಿತಿ ನೀಡಿದೆ. ಕರ್ನಾಟಕದ ಈ ಭಾಗಗಳಲ್ಲಿ ಈ ವಾರದಲ್ಲಿ ಭರ್ಜರಿ ಮಳೆ ಆಗಲಿದೆ.
ಬಿಸಿಲಿನಿಂದ ಕಂಗಾಲಾದ ಜನರಿಗೆ ಗುಡ್ ನ್ಯೂಸ್
ಭೂಮಿಯ ತಾಪಮಾನ ಹೆಚ್ಚಳ ಹಾಗೂ ಭೂಮಿಯ ವಾತಾವರಣದಲ್ಲಿ ಮಾನವನ ಹಿಂಸೆಯೇ ಮಳೆ ಬಾರದಿರುವುದಕ್ಕೆ ಕಾರಣ ಎಂದು ವಿಜ್ಞಾನಿಗಳು ತಮ್ಮ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಮಳೆಯ ಅಭಾವ ನೇರವಾಗಿ ರೈತರ ಮೇಲೆ ಪರಿಣಾಮವನ್ನು ಬೀರುತ್ತದೆ. ರೈತರು ಬೆಳೆ ಬೆಳೆದಿದ್ದರೆ ಸರಿಯಾದ ಸಮಯದಲ್ಲಿ ಮಳೆ ಇಲ್ಲದಿದ್ದರೆ ದೊಡ್ಡ ಪ್ರಮಾಣದ ನಷ್ಟವನ್ನು ಎದುರಿಸಬೇಕಾಗುತ್ತದೆ. ನಿಮಗೆ ತಿಳಿದಿರುವ ಹಾಗೆ ಕೃಷಿ ಮಾಡಲು ಮಳೆ ಅಗತ್ಯವಾಗಿರುತ್ತದೆ. ಮಳೆ ಇಲ್ಲದೆ ಹಲವಡೆ ನೀರಿನ ಸಮಸ್ಯೆ ಹೆಚ್ಚಿದೆ. ನೀರಿಗಾಗಿ ಆಹಾಕಾರ ಕೇಳಿಬರುತ್ತಿದೆ. ಸದ್ಯ ಮಳೆಯ ಬಗ್ಗೆ ಹವಾಮಾನ ಇಲಾಖೆ ಮಹತ್ವದ ಮಾಹಿತಿಯನ್ನು ನೀಡಿದೆ.
ಕರ್ನಾಟಕದ ಈ ಭಾಗಗಳಲ್ಲಿ ಆಗಲಿದೆ ಭರ್ಜರಿ ಮಳೆ
ಈ ವಾರದಲ್ಲಿ ಬೆಂಗಳೂರಿನಲ್ಲಿ ಭರ್ಜರಿ ಮಳೆಯಾಗಿದೆ. ಬೆಂಗಳೂರಿನ ಜನತೆ ಮಳೆಗಾಗಿ ಕಾಯುತ್ತಿದ್ದರು. ಮಳೆಯ ಅಭಾವದಿಂದ ಬೆಂಗಳೂರಿನ ಜನತೆ ನೀರಿನ ಸಮಸ್ಯೆ ಎದುರಿಸಬೇಕಾಗಿತ್ತು. ಇದೀಗ ಜನರಿಗೆ ಮಳೆ ಬಂದಿರುವುದು ಬಾರಿ ಖುಷಿಯನ್ನು ನೀಡಿದೆ. ಮಂಡ್ಯ ಮತ್ತು ಮೈಸೂರಿನಲ್ಲೂ ಭಾರೀ ಮಳೆಯಾಗಿದೆ. ಕಾವೇರಿಯ ಮಡಿಲಲ್ಲಿದ್ದರೂ ನೀರಿಲ್ಲದೆ ಕನ್ನಡಿಗರು ಪರದಾಡುತ್ತಿದ್ದಾರೆ.
ಅದರಲ್ಲೂ ಹಳೆ ಮೈಸೂರಿನಲ್ಲಿ ಕಾವೇರಿ ನದಿಯೂ ಬತ್ತಿ ಹೋಗಿದ್ದು ಜನರ ಆತಂಕಕ್ಕೆ ಕಾರಣವಾಗಿತ್ತು. ಹೀಗಾಗಿ ಜನರು ಮಳೆಗಾಗಿ ಪ್ರಾರ್ಥಿಸುತ್ತಿದ್ದರು. ಈ ಸಮಯದಲ್ಲಿ ಮಳೆ ಬಂದಿರುವುದು ಜನರಿಗೆ ಖುಷಿ ನೀಡಿದೆ. ಕೋಲಾರ ಮತ್ತು ಚಿಕ್ಕಬಳ್ಳಾಪುರ, ತುಮಕೂರಿನ ಕೆಲವು ಭಾಗಗಳು, ಬೆಂಗಳೂರು ಗ್ರಾಮಾಂತರ ಜಿಲ್ಲೆ ಸೇರಿದಂತೆ ದಕ್ಷಿಣ ಕರ್ನಾಟಕದ ಹಲವು ಜಿಲ್ಲೆಗಳು ಮಳೆ ಬಂದಿದೆ. ಮುಂದಿನ ದಿನಗಲಿ ಕರ್ನಾಟಕದ ಕೆಲವು ಜಿಲ್ಲೆಗಳಲ್ಲಿ ಬಾರಿ ಮಳೆ ಆಗುವ ಸಾಧ್ಯತೆ ಹೆಚ್ಚಿದೆ.