Kodi Mutt: ನಿಜವಾಯಿತು ಕೊಡಿ ಶ್ರೀಗಳ ಇನ್ನೊಂದು ಭಯಾನಕ ಭವಿಷ್ಯ, ಮುಂದೆ ಏನಾಗಲಿದೆ ಈ ಭೂಮಿ ಮೇಲೆ.
ನಿಜವಾಯಿತು ಕೊಡಿ ಶ್ರೀಗಳ ಇನ್ನೊಂದು ಭಯಾನಕ ಭವಿಷ್ಯ
Kodi Mutt Prophecy: ಕೊಡಿ ಮಠದ ಶ್ರೀಗಳ ಭವಿಷ್ಯವಾಣಿಯ ಬಗ್ಗೆ ಎಲ್ಲರಿಗೂ ತಿಳಿದೇ ಇದೆ. ಭವಿಷ್ಯ ಹೇಳುವುದರಲ್ಲಿ ಪ್ರಖ್ಯಾತಿ ಪಡೆದಿರುವ ಕೊಡಿ ಮಠದ ಶ್ರೀಗಳು ಈಗಾಗಲೇ ಹಲವು ವಿಚಾರಗಳ ಬಗ್ಗೆ ಭವಿಷ್ಯವಾಣಿ ನುಡಿದಿದ್ದಾರೆ. ಅದರಲ್ಲೂ 2024 ರಲ್ಲಿ ಎದುರಾಗುವಂತಹ ಸಂಕಷ್ಟ, ಸಾವು ನೋವುಗಳ ಬಗ್ಗೆ ಶ್ರೀಗಳು ವರ್ಷದ ಆರಂಭದಲ್ಲಿಯೇ ಭವಿಷ್ಯವನ್ನು ನುಡಿದಿದ್ದರು.
ಈಗಾಗಲೇ ಶ್ರೀಗಳು ಬಾಂಬ್ ಸ್ಪೋಟದ ಬಗ್ಗೆ ಭವಿಷ್ಯವಾಣಿ ನುಡಿದ್ದು, ಬೆಂಗಳೂರಿನಲ್ಲಿ ಒಂದು ಬಾಂಬ್ ಸ್ಪೋಟಗೊಂಡಿರುವ ಬಗ್ಗೆ ಎಲ್ಲರಿಗು ತಿಳಿದೇ ಇದೆ. ಈ ಘಟನೆಯ ಬಳಿಕ ಶ್ರೀಗಳ ಭವಿಷ್ಯವಾಣಿಯ ಬಗ್ಗೆ ಜನರಿಗೆ ಹೆಚ್ಚಿನ ಆತಂಕ ಶುರುವಾಗಿತ್ತು. ಇದೀಗ ಇದರ ಬೆನ್ನಲ್ಲೇ ಶ್ರೀಗಳ ಮತ್ತೊಂದು ಭವಿಷ್ಯವಾಣಿ ನಿಜವಾಗಿದೆ.
![Kodimata Prophecy](https://nadunudi.in/wp-content/uploads/2024/05/Kodimata-Prophecy.png)
ನಿಜವಾಯಿತು ಕೊಡಿ ಶ್ರೀಗಳ ಇನ್ನೊಂದು ಭಯಾನಕ ಭವಿಷ್ಯ
ಇರಾನ್ ಅಧ್ಯಕ್ಷ ಇಬ್ರಾಹಿಂ ರೈಸಿ ಹೆಲಿಕಾಪ್ಟರ್ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ. ಇದೀಗ ಕೋಡಿಮಠದ ಡಾ.ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಹೇಳಿದ ಭವಿಷ್ಯ ನಿಜವೇ ಎಂಬ ಪ್ರಶ್ನೆ ಎದ್ದಿದೆ. ಇರಾನ್ ಅಧ್ಯಕ್ಷ ಇಬ್ರಾಹಿಂ ರೈಸಿ ಅವರು ಹೆಲಿಕಾಪ್ಟರ್ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ. ಇರಾನ್ ನ ವಿದೇಶಾಂಗ ಸಚಿವ ಹುಸೇನ್ ಅಮೀರ್ ಅಬ್ದುಲ್ಲಾಹಿಯಾನ್ ಕೂಡ ಅವರ ಜೊತೆ ನಿಧನರಾಗಿದ್ದಾರೆ.
ಭಾರತದ ಪ್ರಧಾನಿ ನರೇಂದ್ರ ಮೋದಿ ಮತ್ತು ವಿವಿಧ ದೇಶಗಳ ಮುಖ್ಯಸ್ಥರು ಸಂತಾಪ ವ್ಯಕ್ತಪಡಿಸುತ್ತಿದ್ದಾರೆ. ಇದೀಗ ಕೋಡಿಮಠ ಸ್ವಾಮೀಜಿಯ ಭೀಕರ ಭವಿಷ್ಯ ನಿಜವೇ ಎಂಬ ಶಂಕೆ ವ್ಯಕ್ತವಾಗಿದೆ. ಕೋಡಿಮಠದ ಡಾ.ಶಿವಾನಂದ ಶಿವಯೋಗಿ ರಾಜೇಂದ್ರ ಶ್ರೀಗಳು ಈ ವರ್ಷದ ಆರಂಭದಲ್ಲಿ ಭವಿಷ್ಯ ನುಡಿದರು. ಒಂದೆರಡು ಪ್ರಧಾನಿಗಳ ಸಾವಿಗೆ ಜಗತ್ತು ಸಾಕ್ಷಿಯಾಗಲಿದೆ. ಜೊತೆಗೆ ಕೋಡಿಮಠದ ಡಾ.ಶಿವಾನಂದ ಶಿವಯೋಗಿ ರಾಜೇಂದ್ರ ಶ್ರೀಗಳು 2024 ಜಗತ್ತಿಗೆ ಒಂದು ಕಂಟಕವಾಗಲಿದೆ, ಜಗತ್ತಿನಲ್ಲಿ ದೊಡ್ಡ ವಿಪತ್ತುಗಳು ಸಂಭವಿಸುತ್ತವೆ.
ಅಕಾಲಿಕ ಮಳೆಯಿಂದ ಲಕ್ಷಾಂತರ ಜನರು ಸಂಕಷ್ಟಕ್ಕೆ ಸಿಲುಕಲಿದ್ದಾರೆ. ಪ್ರಕೃತಿಯು ಭೂಕಂಪ ಮತ್ತು ನೀರಿನ ಸಮಸ್ಯೆ ಎದುರಿಸಲಿದೆ ಎಂದು ಹೇಳಿದರು. ಅದೂ ಅಲ್ಲದೆ ಕಳೆದ ವರ್ಷಕ್ಕಿಂತ ಈ ವರ್ಷ ಜಗತ್ತಿಗೆ ಹೆಚ್ಚಿನ ತೊಂದರೆಯಾಗಲಿದೆ, ಜಗತ್ತಿನ ಮಹಾನ್ ಸಂತರ ಹತ್ಯೆಯಾಗಲಿದೆ ಎಂದು ಕೋಡಿಮಠ ಶ್ರೀಗಳು ಭವಿಷ್ಯ ನುಡಿದಿದ್ದು, ಶ್ರೀಗಳ ಭವಿಷ್ಯವಾಣಿ ಸದ್ಯ ಆತಂಕ ಸೃಷ್ಟಿಸಿದೆ.
![Kodi Shree New Prediction](https://nadunudi.in/wp-content/uploads/2024/05/Kodi-Shree-New-Prediction.png)