Marriage Sustenance: ದೇಶದಲ್ಲಿ ಜಾರಿಗೆ ಬಂತು ಹೊಸ ವಿಚ್ಛೇಧನ ನಿಯಮ, ಇಂತಹ ಮಹಿಳೆಯರಿಗಿಲ್ಲ ಯಾವುದೇ ಜೀವನಾಂಶ

ಕಾರಣವಿಲ್ಲದೆ ಪತಿಯಿಂದ ಪತ್ನಿ ದೂರವಾದರೆ ಆಕೆ ಜೀವನಾಂಶಕ್ಕೆ ಅರ್ಹಳಲ್ಲ

Marriage Sustenance News: ಭಾರತೀಯ ಕಾನೂನಿನ ಪ್ರಕಾರ ಕಾನೂನುಬದ್ಧವಾಗಿ ಮದುವೆಯಾಗಿದ್ದರೆ ಮಾತ್ರ ಅಂತಹ ಮದುವೆಯು ಮಾನ್ಯವಾಗಿರುತ್ತದೆ. ಹಾಗೆಯೆ ಭಾರತೀಯ ನ್ಯಾಯಾಲಯವು ಮದುವೆಗೆ ಸಂಬಂಧಿಸಿದಂತೆ ಅನೇಕ ನಿಯಮಾವಳಿಗಳನ್ನು ರೂಪಿಸಿರುತ್ತದೆ.

ಮದುವೆಗೆ ಸಂಬಂಧಿಸಿದಂತೆ ಕಾನೂನಿನಲ್ಲಿ ಅದರದ್ದೇ ಆದ ಸಾಕಷ್ಟು ತಿದ್ದುಪಡಿಗಳಿವೆ. ಇನ್ನು ಮದುವೆಗೆ ಯಾವ ರೀತಿಯ ನಿಯಮಗಳನ್ನು ರೂಪಿಸಲಾಗಿದೆಯೋ, ಅದೇ ರೀತಿ ವಿವಾಹದ ನಂತರ ಪಡೆಯುವಂತಹ ವಿಚ್ಛೇದನಕ್ಕೆ ಕೂಡ ಭಾರತೀಯ ನ್ಯಾಯಾಲಯದಲ್ಲಿ ತಿದ್ದುಪಡಿಗಳಿವೆ.

Marriage Sustenance News
Image Credit: Original Source

ವಿಚ್ಛೇದನದ ಜೀವನಂಶದ ಬಗ್ಗೆ ನ್ಯಾಯಾಲಯ ಹೇಳುವುದೇನೇ..?
ವೈವಾಹಿಕ ಜೀವನ ಸಾಕೆನಿಸಿ ದಂಪತಿಗಳು ಬೇರೆಯಾಗಲು ನಿರ್ಧರಿಸಿದಾಗ ಕಾನೂನು ನಿಯಮಗಳು ಮುಖ್ಯವಾಗುರುತ್ತದೆ. ಇನ್ನು ಭಾರತೀಯ ನ್ಯಾಯಾಲಯದಲ್ಲಿ ಸಾಕಷ್ಟು ವಿಚ್ಛೇದನದ ಪ್ರಕರಣಗಳು ದಾಖಲಾಗುತ್ತದೆ. ಒಂದು ಪ್ರಕರಣದ ಬಗ್ಗೆ ತನಿಖೆ ನಡೆಸಿ ನ್ಯಾಯಾಲಯ ಹೊಸ ಹೊಸ ಆದೇಶವನ್ನು ಹೊರಡಿಸುವ ಮೂಲಕ ಭಾರತೀಯ ಕಾನೂನಿನಲ್ಲಿ ಆ ಆದೇಶವನ್ನು ಸೇರಿಸುತ್ತದೆ.

ಭಾರತೀಯ ಕಾನೂನು ಪತಿಯಿಂದ ಬೇರೆಯಾಗುವ ಪತ್ನಿಯು ಯಾವ ಸಂದರ್ಭದಲ್ಲಿ ವಿಚ್ಛೇದನದ ಜೀವನಾಂಶವನ್ನು ಪಡೆಯಲು ಅರ್ಹರಲ್ಲ ಎನ್ನುವ ಬಗ್ಗೆ ಹೈಕೋರ್ಟ್ ಮಹತ್ವದ ತೀರ್ಪನ್ನು ನೀಡಿದೆ. ಇನ್ನುಮುಂದೆ ಭಾರತದಲ್ಲಿ ಪತ್ನಿಯು ಈ ಕಾರಣಕ್ಕೆ ವಿಚೇದನವನ್ನು ಪಡೆದರೆ ಆಕೆಯು ಜೀವನಾಂಶದ ಹಕ್ಕನ್ನು ಹೊಂದುವುದಿಲ್ಲ ಎನ್ನುವುದು ಸ್ಪಷ್ಟವಾಗಿದೆ.

Marriage Sustenance Latest Update
Image Credit: Original Source

ಕಾರಣವಿಲ್ಲದೆ ಪತಿಯಿಂದ ಪತ್ನಿ ದೂರವಾದರೆ ಆಕೆ ಜೀವನಾಂಶಕ್ಕೆ ಅರ್ಹಳಲ್ಲ
ಸಾಮಾನ್ಯವಾಗಿ ಸಾಂಸಾರಿಕ ಜೀವನದಲ್ಲಿ ಬಿರುಕು ಉಂಟಾದಾಗ ಮಾತ್ರ ಮದುವೆಯ ಸಂಬಂಧ ವಿಚ್ಛೇದನಕ್ಕೆ ತಲುಪುತ್ತದೆ. ಪತಿ ಪತ್ನಿಯ ನಡುವೆ ಭಾಂದವ್ಯ ಕಡಿಮೆಯಾದಾಗ ದಂಪತಿಗಳು ಬೇರೆಯಾಗಲು ಇಚ್ಛಿಸುತ್ತಾರೆ. ಇನ್ನು ಕೆಲವೊಂದು ಸಂದರ್ಭದಲ್ಲಿ ಪತ್ನಿಯು ಪತಿಯಿಂದ ಬೇರೆ ಇರುತ್ತಾಳೆ.

Join Nadunudi News WhatsApp Group

ಇದೆ ಕಾರಣಕ್ಕೆ ವಿಚ್ಛೇದನ ಪಡೆದಿರುವ ಸಾಕಷ್ಟು ಪ್ರಕರಣಗಳಿವೆ. ಇದೀಗ ನ್ಯಾಯಾಲಯದಲ್ಲಿ ಪತಿಯಿಂದ ಬೇರೆಯಿರುವ ಪತ್ನಿ ಜೀವನ್ಮಶವನ್ನು ಕೋರಿ ನ್ಯಾಯಾಲಯದ ಮೊರೆ ಹೋಗಿದ್ದಾಳೆ. ನ್ಯಾಯಾಲಯವು ಈ ಪ್ರಕರಣದ ತನಿಖೆ ನಡೆಸಿ ಮಹತ್ವದ ಆದೇಶ ಹೊರಡಿಸಿದೆ. ಸದ್ಯ ಭಾರತೀಯ ನ್ಯಾಯಾಲಯು ಯಾವುದೇ ಸೂಕ್ತ ಕಾರಣವಿಲ್ಲದೆ ಪತಿಯಿಂದ ಬೇರೆಯಾದ ಪತ್ನಿಯು ಜೀವನಾಂಶವನ್ನು ಪಡೆಯಲು ಅರ್ಹಳಲ್ಲ ಎಂದು ಆದೇಶ ಹೊರಡಿಸಿದೆ.

Join Nadunudi News WhatsApp Group