Prem: ಸಮಾಧಿಗಳಿಗೆ ಕ್ಷಮೆ ಕೇಳಿದ ಪ್ರೇಮ್, ಪ್ರೇಮ್ ಅಪಘಾತದ ಬಗ್ಗೆ ಮಾಸ್ಟರ್ ಆನಂದ್ ಮಾತು.

ನಟ ಪ್ರೇಮ್ ಅವರು ಸಮಾಧಿಗಳ ಬಳಿ ಕ್ಷಮೆ ಕೇಳಿದ ಬಗ್ಗೆ ನಟ ಮಾಸ್ಟರ್ ಆನಂದ್ ಅವರು ವೀಕೆಂಡ್ ವಿಥ್ ರಮೇಶ್ ನಲ್ಲಿ ಹೇಳಿಕೊಂಡಿದ್ದಾರೆ.

Master Anand About Prem IN Weekend With Ramesh: ಕನ್ನಡದಲ್ಲಿ ವಿಕೇಂಡ್ ವಿಥ್ ರಮೇಶ್ ಸೀಸನ್ 5 (weekend With Ramesh Season 5) ಹೆಚ್ಚು ಜನಪ್ರಿಯತೆಯನ್ನು ಪಡೆದಿದೆ. ಚಿತ್ರರಂಗದಲ್ಲಿ ಸಾಧನೆ ಮಾಡಿದ ಅನೇಕ ಸಾಧಕರನ್ನು ವಿಕೇಂಡ್ ವಿಥ್ ರಮೇಶ್ ಸಂಚಿಕೆ ಜನರಿಗೆ ಪರಿಚಯಿಸಿದೆ. ಚಿತ್ರರಂಗದ ಸಾಧಕರ ಜೊತೆಗೆ ಬೇರೆ ಕ್ಷೇತ್ರದಲ್ಲೂ ಸಾಧನೆ ಮಾಡಿದವರನ್ನು ಕೂಡ ಈ ವೇದಿಕೆ ಪರಿಚಯಿಸಿದೆ.

Master Anand About Prem
Image Credit: indiatimes

ತಮ್ಮ ಜೀವನದ ಪಯಣವನ್ನು ಮೆಲುಕು ಹಾಕಿದ ಪ್ರೇಮ್
ಇನ್ನು ಕಳೆದ ವಾರದಲ್ಲಿ ಕನ್ನಡ ಚಿತ್ರರಂಗದ ಹೆಸರಾಂತ ನಟ ನೆನಪಿರಲ್ಲಿ ಪ್ರೇಮ್ (Prem) ಅವರು ಸಾಧಕರ ಕುರ್ಚಿ ಏರಿದ್ದರು. ವೇದಿಕೆ ಮೇಲೆ ಪ್ರೇಮ್ ಅವರು ತಮ್ಮ ಬಾಲ್ಯ ಜೀವನದಿಂದ ಹಿಡಿದು ಅನೇಕ ಮಧುರ ಕ್ಷಣಗಳನ್ನು ಮೆಲುಕು ಹಾಕಿದ್ದಾರೆ. ವೇದಿಕೆ ಮೇಲೆ ಪ್ರೇಮ್ ಅವರು ಸಾಕಷ್ಟು ನೆನಪುಗಳನ್ನು ಹಂಚಿಕೊಂಡಿದ್ದಾರೆ. ಈ ವೇಳೆ ನಟ ಪ್ರೇಮ್ ಅವರು ಸಮಾಧಿಗಳಿಗೆ ಕ್ಷಮೆ ಕೇಳಿದ್ದಾರೆ. ಸಮಾದಿಗಳಿಗೆ ಪ್ರೇಮ್ ಕ್ಷಮೆ ಕೇಳಲು ಕಾರಣ ಏನಿರಬಹುದು ಎನ್ನುವ ಬಗ್ಗೆ ಮಾಹಿತಿ ತಿಳಿಯೋಣ.

ಇನ್ನು ನಟ ಪ್ರೇಮ್ ಅವರ ಬಂದುಗಳು ಹಾಗು ಸ್ನೇಹಿತರು ವೀಕೆಂಡ್ ವಿಥ್ ರಮೇಶ್ ಸಂಚಿಕೆಯಲ್ಲಿ ಪಾಲ್ಗೊಂಡಿದ್ದರು. ಪ್ರೇಮ್ ಅವರ ಪಂಚ ಪಾರ್ಟಿ ಗೆಳಯರು ಕೂಡ ಆಗಮಿಸಿದ್ದರು.

ಈ ವೇಳೆ ಕನ್ನಡ ಚಿತ್ರರಂಗದ ಇನ್ನೊಬ್ಬ ಹೆಸರಾಂತ ನಟ, ನಿರೂಪಕ ಮಾಸ್ಟರ್ ಆನಂದ್ (Master Anand)  ಕೂಡ ಆಗಮಿಸಿದ್ದರು. ವೇದಿಕೆ ಮೇಲೆ ಪ್ರೇಮ್ ಅವರ ಬಗ್ಗೆ ಸಾಕಷ್ಟು ಕುತೂಹಲಕಾರಿ ವಿಷಯಗಳನ್ನು ಹಂಚಿಕೊಂಡಿದ್ದಾರೆ. ಪ್ರೇಮ್ ಅವರ ಪ್ರೇಮಂ ಪೂಜ್ಯಮ್ ಚಿತ್ರದ ಚಿತ್ರೀಕರಣದ ವೇಳೆ ಸಮಾಧಿಗಳ ಬಳಿ ನಡೆದ ಘಟನೆಯನ್ನು ಮಾಸ್ಟರ್ ಆನಂದ್ ಅವರು ಹಂಚಿಕೊಂಡಿದ್ದಾರೆ.

Prem relives his life's journey
Image Credit: vijaykarnataka

ಸಮಾಧಿಗಳಿಗೆ ಕ್ಷಮೆ ಕೇಳಿದ ಪ್ರೇಮ್
“ನೀವು ಇಷ್ಟು ದಿನ ಆತ್ಮಗಳಾಗಿ ಇಲ್ಲಿ ಇಲ್ಲಿ ಇದ್ದೀರಿ. ಚಲನಚಿತ್ರದ ಚಿತ್ರೀಕರಣದ ವೇಳೆ ನಿಮಗೆ ತೊಂದರೆ ಕೊಟ್ಟಿದ್ದಾರೆ, ನಾನು ಯಾವುದಾದರು ತಪ್ಪನ್ನು ಮಾಡಿದ್ದಾರೆ ದಯವಿಟ್ಟು ನೀವೆಲ್ಲರೂ ನನ್ನನ್ನು ಕ್ಷಮಿಸಿ” ಎಂದು ಪ್ರೇಮ್ ಸಮಾಧಿಗಳ ಬಳಿ ಕ್ಷಮೆ ಕೇಳಿದ್ದಾರೆ. ಹೂವಿನ ಬೊಕ್ಕೆ, ಕೇಕ್, ವೈನ್ ಬ್ಯಾಟೇಲ್ ಇಟ್ಟು ಸಮಾಧಿಗಳಿಗೆ ಪ್ರೇಮ್ ಕ್ಷಮೆಯಾಚಿಸಿದ ಪ್ರಸಂಗದ ಬಗ್ಗೆ ಮಾಸ್ಟರ್ ಆನಂದ್ ಅವರು ಮಾಹಿತಿ ಹಂಚಿಕೊಂಡಿದ್ದಾರೆ.

Join Nadunudi News WhatsApp Group

Join Nadunudi News WhatsApp Group