Kisan Samman: ಕಿಸಾನ್ ಸಮ್ಮಾನ್ ಯೋಜನೆಯಲ್ಲಿ ಹಣ ಪಡೆಯುವ ಇಂತವರಿಗೆ ಜೈಲು ಶಿಕ್ಷೆ, ಕೇಂದ್ರದ ಆದೇಶ.
ಕಿಸಾನ್ ಸಮ್ಮಾನ್ ಯೋಜನೆಯನ್ನು ದುರುಪಯೋಗ ಮಾಡಿಕೊಳ್ಳುವ ಜನರಿಗೆ ಜೈಲು ಶಿಕ್ಷೆ ವಿಧಿಸಲಾಗುತ್ತದೆ.
PM Kisan Scheme Rules: ಪ್ರಧಾನ್ ಮಂತ್ರಿ ಕಿಸಾನ್ ಯೋಜನೆ (PM Kisan Samman Yojana) ರೈತರಿಗೆ ಸಹಾಯ ಆಗುವ ನಿಟ್ಟಿನಲ್ಲಿ ಜಾರಿಗೆ ತಂದ ಯೋಜನೆ ಆಗಿದೆ. ಈ ಯೋಜನೆಯಿಂದ ಹಲವು ಜನರು ಲಾಭ ಪಡೆಯುತ್ತಿದ್ದಾರೆ. ಈ ಯೋಜನೆಗೆ ಸೇರಿದವರಿಗೆ ಉಚಿತವಾಗಿ ಹಣ ಬ್ಯಾಂಕ್ ಖಾತೆಗೆ ಜಮಾ ಆಗುತ್ತಾ ಇರುತ್ತದೆ.
![Central government order to punish those who abuse the Kisan Samman scheme with imprisonment.](https://nadunudi.in/wp-content/uploads/2023/04/Kisan-samman-yojana.png)
ಪ್ರಧಾನ್ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ
ಪ್ರಧಾನ್ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ ಅನ್ನದಾತರಿಗೆ ಕೇಂದ್ರ ಸರ್ಕಾರ ವಿಶೇಷವಾಗಿ ಜಾರಿಗೆ ತಂದಿರುವ ಯೋಜನೆ ಆಗಿದೆ. ಈ ಯೋಜನೆಯಿಂದ ರೈತರು ನಾಲ್ಕು ತಿಂಗಳಿಗೊಮ್ಮೆ 2000 ರೂಪಾಯಿ ಪಡೆಯುತ್ತಾರೆ .
ಅಂದರೆ ವರ್ಷಕ್ಕೆ ಮೂರೂ ಬಾರಿ ಈ ಹಣವನ್ನು ಪಡೆಯುತ್ತಾರೆ. ಇದರಿಂದ ಸಾಕಷ್ಟು ಅನ್ನದಾತರಿಗೆ ನೆಮ್ಮದಿ ಸಿಕ್ಕಿದೆ. ವರ್ಷಕ್ಕೆ ಅನ್ನದಾತರು 6000 ರೂಪಾಯಿ ಪಡೆಯುತ್ತಿದ್ದಾರೆ. ಇದೀಗ ಈ ಯೋಜನೆಯನ್ನು ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ ಎಂಬ ಸುದ್ದಿ ಕೇಂದ್ರ ಸರ್ಕಾರಕ್ಕೆ ಲಭಿಸಿದೆ. ಇದರಿಂದ ಕೇಂದ್ರ ಸರ್ಕಾರ ಮಹತ್ವದ ನಿರ್ಧಾರ ತೆಗೆದುಕೊಂಡಿದೆ.
![The central government has issued an order that many people are misusing the Kisan Samman scheme of the central government and such people will be sentenced to jail.](https://nadunudi.in/wp-content/uploads/2023/04/kisan-samman-yojana-rules.png)
ಪ್ರಧಾನ್ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ ದುರುಪಯೋಗ
ಪ್ರಧಾನ್ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಪ್ರಯೋಜನವನ್ನು ಅರ್ಹರಲ್ಲದವರು ಪಡೆಯುತ್ತಿದ್ದಾರೆ ಮತ್ತು ಅಂತವರಿಂದ ಕೇಂದ್ರ ಸರ್ಕಾರ ಹಣ ಹಿಂಪಡೆಯಲು ನಿರ್ಧಾರವನ್ನ ಮಾಡಿದೆ. ಒಂದು ವೇಳೆ ದುರುಪಯೋಗ ಮಾಡಿಕೊಂಡ ಈ ಹಣ ಹಿಂತಿರುಗಿಸದಿದ್ದರೆ ಜೈಲಿಗೆ ಹೋಗಬೇಕಾಗುತ್ತದೆ.
ದೇಶಾದ್ಯಂತ ಅನೇಕ ರಾಜ್ಯದಲ್ಲಿ ನಕಲಿ ದಾಖಲೆಗಳ ಮೂಲಕ ಈ ಯೋಜನೆಯ ಪ್ರಯೋಜನವನ್ನು ಪಡೆಯುತ್ತಿದ್ದಾರೆ. ಅವರೆಲ್ಲರೂ ಪಡೆದುಕೊಂಡ ಹಣವನ್ನು ಹಿಂತಿರುಗಿಸಬೇಕು. ಇಲ್ಲದಿದ್ದರೆ ಜೈಲಿಗೆ ಹೋಗುವ ಸಂದರ್ಭ ಎದುರಾಗುತ್ತದೆ. ಈ ಕಾರಣದಿಂದ ಅರ್ಹತೆ ಇಲ್ಲದವರು ಈ ಯೋಜನೆಯಿಂದ ದೂರವಿರುವುದು ಉತ್ತಮ.