Priyamani: ನಿಮಗೆ ಹುಟ್ಟುವ ಮಗು ಏನಾಗುತ್ತದೆ, ಟ್ರೊಲ್ ಮಾಡಿದ ಜನರಿಗೆ ಖಡಕ್ ಉತ್ತರ ನೀಡಿದ ಪ್ರಿಯಾಮಣಿ.

ಮುಸ್ಲಿಂ ಧರ್ಮದವರನ್ನು ಮದುವೆಯಾದ ಕಾರಣ ಟ್ರೋಲ್ ಮಾಡಿದ ನೆಟ್ಟಿಗರಿಗೆ ಖಡಕ್ ಉತ್ತರ ನೀಡಿದ ನಟಿ ಪ್ರಿಯಾಮಣಿ.

Priyamani About Trollers: ಸ್ಯಾಂಡಲ್ ವುಡ್ ನ ಸ್ಟಾರ್ ನಟಿ ಪ್ರಿಯಾಮಣಿ (Priyamani) ಈ ಹಿಂದೆ ಮದುವೆ ವಿಚಾರವಾಗಿ ಸುದ್ದಿಯಾಗಿದ್ದರು. ನಟಿ ಪ್ರಿಯಾಮಣಿ ಅವರು ಮುಸ್ಲಿಂ ಧರ್ಮದವರನ್ನು ಮದುವೆಯಾದ ಕಾರಣ ನಟಿಯನ್ನು ಹೆಚ್ಚಾಗಿ ಟ್ರೋಲ್ ಮಾಡಲಾಗಿತ್ತು. ನಟಿ ಬೇರೆ ಧರ್ಮದವರನ್ನು ಮದುವೆ ಆಗಿರುವುದೇ ಟ್ರೋಲ್ ಮಾಡಲು ಕಾರಣವಾಗಿತ್ತು.

ಇನ್ನು ಮದುವೆಯಾಗಿ ಸ್ವಲ್ಪ ಸಮಯದಲ್ಲಿ ಪ್ರಿಯಾಮಣಿ ವಿಚ್ಛೇದನ ಪಡೆಯುತ್ತಾರೆ ಎನ್ನುವ ಬಗ್ಗೆ ಕೂಡ ವರದಿಯಾಗಿತ್ತು. ಆದರೆ ನಟಿಯ ವಿಚ್ಛೇದನದ ಸುದ್ದಿ ಸುಳ್ಳು ಎಂದು ಸ್ಪಷ್ಟಪಡಿಸಿಲಾಗಿದೆ. ಆದರೆ ಸೋಶಿಯಲ್ ಮೀಡಿಯಾದಲ್ಲಿ ನಟಿಯ ದಾಂಪತ್ಯ ಜೀವನದ ಬಗ್ಗೆ ಹೆಚ್ಚಾಗಿ ಟ್ರೋಲ್ ಮಾಡಲಾಗುತ್ತಿದೆ. ಇದೀಗ ನಟಿ ತಮ್ಮ ಬಗ್ಗೆ ಟೀಕಿಸುವವರ ವಿರುದ್ಧ ಖಡಕ್ ಉತ್ತರ ನೀಡಿದ್ದಾರೆ.

Priyamani About Trollers latest news
Image Credit: Hindustantimes

ಮುಸ್ಲಿಂ ಧರ್ಮದವರನ್ನು ಮದುವೆಯಾದ ಕಾರಣ ನಟಿಯನ್ನು ಟ್ರೋಲ್ ಮಾಡಿದ ನೆಟ್ಟಿಗರು
ಇನ್ನು 2017 ರಲ್ಲಿ ನಟಿ ಪ್ರಿಯಾಮಣಿ ಮುಸ್ತಫಾ ರಾಜಾ ಎನ್ನುವ ಉದ್ಯಮಿಯ ಜೊತೆ ಪ್ರೀತಿಸಿ ವಿವಾಹವಾಗಿದ್ದರು. ನಟಿ ರಿಜಿಸ್ಟರ್ ಮ್ಯಾರೇಜ್ ಮಾಡಿಕೊಂಡಿದ್ದರು. ಬೇರೆ ಧರ್ಮದವರನ್ನು ಮದುವೆ ಆದ ಕಾರಣ ನಟಿಯನ್ನು ಸಾಕಷ್ಟು ಬಾರಿ ಟ್ರೋಲ್ ಮಾಡಲಾಯಿತು.

ಇನ್ನು ನಟಿ ಪ್ರಿಯಾಮಣಿ ಸಂದರ್ಶದಲ್ಲಿ ಮಾತನಾಡುವ ಟ್ರೋಲ್ ಬಗ್ಗೆ ಮಾತನಾಡಿದ್ದಾರೆ. ಟ್ರೋಲ್ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳುವುದಿಲ್ಲ. ಅದರ ಕಡೆ ಗಮನ ಹರಿಸಿದರೆ ಇನ್ನಷ್ಟು ಹೆಚ್ಚು ಮಾಡುತ್ತಾರೆ ಎಂದು ನಟಿ ಟ್ರೋಲಿಗರಿಗೆ ಉತ್ತರ ನೀಡಿದ್ದರು.

ನನ್ನ ಮಕ್ಕಳು ಜಿಹಾದಿಗಳಾಗಲ್ಲ ಎಂದ ನಟಿ
ಇನ್ನು ನಟಿ ಮದುವೆಯಾದ ಬಳಿಕ ನೆಟ್ಟಿಗರು ‘ ನೀವು ಬೇರೆ ಧರ್ಮದವರನ್ನು ಮದುವೆಯಾದ ಕಾರಣ ನಿಮ್ಮ ಮಕ್ಕಳು ಜಿಹಾದಿಗಳಾಗಿ ಹುಟ್ಟುತ್ತಾರೆ. ಇದು ಲವ್ ಜಿಹಾದ್’ ಎಂದು ಹೇಳಿದ್ದರು.

Join Nadunudi News WhatsApp Group

Priyamani About Trollers latest news
Image Credit: Indiatvnews

ಇದಕ್ಕೆ ನಟಿ ಪ್ರಿಯಾಮಣಿ ಉತ್ತರಿಸಿದ್ದಾರೆ. “ನೀವೆಲ್ಲ ಅತಿಯಾಗಿ ಯೋಚಿಸುತ್ತೀರಿ. ಪ್ರೀತಿಸಿದವರನ್ನು ಮದುವೆಯಾದರೆ ಅದು ತಪ್ಪಾ? ನನ್ನನ್ನು ನೋಡಿ ದೇವತೆ ಹಾಗೆ, ಹೀಗೆ ಎನ್ನುತ್ತಾರೆ. ಆದರೆ ನಾನು ಪ್ರೀತಿಸಿದವರನ್ನು ಮದುವೆಯಾದರೆ ಮಾತ್ರ ಯಾಕೆ ಹೀಗೆ ಹೇಳುತ್ತಾರೆ.

ನನ್ನ ಪತಿ (ಮುಸ್ತಫಾ ರಾಜಾ) ಬೇರೆ ಧರ್ಮದವರಾದರೆ ಏನು, ಇದರಲ್ಲಿ ತಪ್ಪೇನಿದೆ. ನಾನು ಹೇಳುವುದು ಏನು ಅಂದರೆ ಎಲ್ಲ ಮುಸ್ಲಿಮರು ಐಸಿಸ್ ಅಲ್ಲ, ಎಲ್ಲರು ಲವ್ ಜಿಹಾದ್ ಮಾಡ್ತಾರೆ ಅಂತಲ್ಲ. ಸ್ವಲ್ಪ ಪ್ರಜ್ಞಾವಂತರಾಗಿ ಯೋಚಿಸಿ. ನಾನು ಬೇರೆ ಧರ್ಮದವರನ್ನು ಮದುವೆಯಾದ ಕಾರಣಕ್ಕೆ ನನ್ನ ಮಕ್ಕಳು ಜಿಹಾದಿಗಳಾಗಲ್ಲ” ಎಂದು ನಟಿ ಪ್ರಿಯಾಮಣಿ ನೆಟ್ಟಿಗರಿಗೆ ಉತ್ತರಿಸಿದ್ದಾರೆ.

Join Nadunudi News WhatsApp Group