Ram Mandir: ರಾಮನ ದರ್ಶನ ಎಲ್ಲಾ ಭಕ್ತರಿಗೆ ಹೊಸ ನಿಯಮ, ಈ ದಾಖಲೆ ಜೊತೆಯಲ್ಲಿ ಇಟ್ಟುಕೊಳ್ಳುವುದು ಕಡ್ಡಾಯ
ಶ್ರೀರಾಮನ ದರ್ಶನ ಪಡೆಯಲುಈ ಆಮಂತ್ರಣ ಪತ್ರಿಕೆ ಕಡ್ಡಾಯ
Ram Mandir Invitation: ಸದ್ಯ ದೇಶದೆಲ್ಲೆಡೆ ಜನವರಿ 22 ಸೋಮವಾರದಂದು ನೆರವೇರಲಿರುವ ರಾಮ ಮಂದಿರ ಉದ್ಘಾಟನೆಗಾಗಿ ಕಾತುರತೆ ಹೆಚ್ಚಾಗಿದೆ. ಕೋಟ್ಯಾಂತರ ಭಕ್ತರು ಶ್ರೀರಾಮನ ಪ್ರಾಣ ಪ್ರತಿಷ್ಠಾಪನೆಯನ್ನು ಕಣ್ತುಂಬಿಸಿಕೊಳ್ಳಲು ದಿನಗಳ ಎಣಿಕೆ ಮಾಡುತ್ತಿದ್ದಾರೆ ಎನ್ನಬಹುದು.
ಈಗಾಗಲೇ ರಾಮ ಮಂದಿರ ಉದ್ಘಾಟನೆಗೆ ಸಕಲ ಸಿದ್ಧತೆ ಮಾಡಲಾಗುತ್ತಿದೆ. ನರೇಂದ್ರ ಮೋದಿ ಅವರಿಂದ ಹಿಡಿದು ಸಾಕಷ್ಟು ಪ್ರಮುಖ ಗಣ್ಯರಿಗೆ ರಾಮ ಮಂದಿರ ಉದ್ಘಾಟನೆಗೆ ಆಹ್ವಾನ ನೀಡಲಾಗಿದೆ. ಇದೀಗ ರಾಮ ಮಂದಿರ ಪ್ರಾಣಪ್ರತಿಷ್ಠಾಪನೆಗೆ ಸಂಬಂಧಿಸಿದಂತೆ ಮಹತ್ವದ ಮಾಹಿತಿಯೊಂದು ಹೊರಬಿದ್ದಿದೆ. ರಾಮ ಮಂದಿರ ಪ್ರಾಣಪ್ರತಿಷ್ಠಾಪನೆಗೆ ಹೋಗಲು ಏನು ಮುಖ್ಯ ಎನ್ನುವ ಬಗ್ಗೆ ನಾವೀಗ ತಿಳಿದುಕೊಳ್ಳೋಣ.
![Ram Mandir Invitation Card](https://nadunudi.in/wp-content/uploads/2024/01/Ram-Mandir-Invitation-Card.png)
ಈ ಆಮಂತ್ರಣ ಪತ್ರಿಕೆಯ ಮೂಲಕ ರಾಮ ಮಂದಿರ ಪ್ರಾಣಪ್ರತಿಷ್ಠಾಪನೆಗೆ ಪ್ರವೇಶ ಸಾಧ್ಯ
ಜನವರಿ 22 ರಂದು ನಡೆಯಲಿರುವ ರಾಮ್ ಲಲ್ಲ ಸರ್ಕಾರದ ಜೀವನ ಪ್ರತಿಷ್ಠಾಪನಾ ಕಾರ್ಯಕ್ರಮದ ಬಗ್ಗೆ ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಮಹತ್ವದ ಮಾಹಿತಿಯನ್ನು ನೀಡಿದೆ. ಪ್ರಾಣ ಪ್ರತಿಷ್ಠಾ ಉತ್ಸವಕ್ಕೆ ಆಹ್ವಾನಿತರ ಪ್ರವೇಶಕ್ಕೆ ಸಂಬಂದಿಸಿದ ಮಾಹಿತಿಯಾಗಿದೆ.
प्राण प्रतिष्ठा उत्सव में आमंत्रित महानुभावों के लिए जानकारी:
भगवान श्री रामलला सरकार के प्राण प्रतिष्ठा उत्सव में प्रवेश केवल श्री राम जन्मभूमि तीर्थ क्षेत्र द्वारा जारी की गई प्रवेशिका के माध्यम ही संभव है। केवल निमंत्रण पत्र से आगंतुकों को प्रवेश सुनिश्चित नहीं हो पाएगा।… pic.twitter.com/3BkCpbJIbM
— Shri Ram Janmbhoomi Teerth Kshetra (@ShriRamTeerth) January 19, 2024
ಶ್ರೀ ರಾಮಲಾಲಾ ಸರ್ಕಾರ್ ಅವರ ಪ್ರಾಣ ಪ್ರತಿಷ್ಠಾ ಉತ್ಸವಕ್ಕೆ ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರದ ಪ್ರವೇಶಿಕದ ಮೂಲಕ ಮಾತ್ರ ಪ್ರವೇಶ ಸಾಧ್ಯ. ಕೇವಲ ಆಮಂತ್ರಣ ಪತ್ರವು ಸಂದರ್ಶಕರಿಗೆ ಪ್ರವೇಶವನ್ನು ಖಾತರಿಪಡಿಸುವುದಿಲ್ಲ. ಪ್ರವೇಶ ದ್ವಾರದಲ್ಲಿ ಕ್ಯೂಆರ್ ಕೋಡ್ ಅನ್ನು ಹೋಲಿಕೆ ಮಾಡಿದ ನಂತರವೇ ಆವರಣಕ್ಕೆ ಪ್ರವೇಶಿಸಲು ಸಾಧ್ಯವಾಗುತ್ತದೆ.
ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಕೂಡ ಪ್ರೈಮರ್ ನ ಕರಡನ್ನು ಲಗತ್ತಿಸಿದೆ. ರಾಜಕೀಯ ಕ್ರೀಡೆ, ಸಿನಿಮಾ, ಉದ್ಯಮ ಸೇರಿದಂತೆ ಪ್ರತಿ ಕ್ಷೇತ್ರದ ಪ್ರಮುಖ ವ್ಯಕ್ತಿಗಳಿಗೆ ಆಹ್ವಾನ ಪತ್ರಿಕೆಯನ್ನು ನೀಡಲಾಗಿದೆ. ಶ್ರೀರಾಮನ ದರ್ಶನ ಪಡೆಯಲು ಆಮಂತ್ರಣ ಪತ್ರಿಕೆ ಕಡ್ಡಾಯ ಎನ್ನುವುದು ತಿಳಿದಿರುವುದು ಅಗತ್ಯ.