Ration Card Updates: ರೇಷನ್ ಕಾರ್ಡ್ ಬಗ್ಗೆ ಮಹತ್ವದ ಬದಲಾವಣೆ ತಿಳಿಸಿದ ಶೋಭಾ ಕರಂದ್ಲಾಜೆ, ದೇಶಾದ್ಯಂತ ಜಾರಿಗೆ.
ರೇಷನ್ ಕಾರ್ಡ್ (Ration card) ಪಡಿತರ ವ್ಯವಸ್ಥೆ ಜಾರಿಗೆ ತಂದಿರುವುದು ನಮಗೆಲ್ಲ ತಿಳಿದೆ ಇದೆ ಅದೇ ರೀತಿ ಈ ವ್ಯವಸ್ಥೆಯಲ್ಲಿ ಸುಧಾರಣೆ ತರುವ ನಿಟ್ಟಿನಲ್ಲಿ ಕೇಂದ್ರದ ಸಚಿವೆ ಶೋಭಾ ಕರಂದ್ಲಾಜೆ (Shobha Kardhlaje) ಅವರು ಸುದ್ದಿಗೋಷ್ಠಿ ನಡೆಸುವ ಮೂಲಕ ಕೆಲವೊಂದು ಮಹತ್ವದ ನಿರ್ಣಯಗಳ ಬಗ್ಗೆ ತಿಳಿಸಿದ್ದಾರೆ.
Ration Card New Rules By Shobakarandlaje: ದೇಶದ ಜನರಿಗೆ ಜೀವನದ ಕನಿಷ್ಟ ಮೌಲ್ಯವಾದ ಆಹಾರವಾದರೂ ದೊರಕಿಸಲು ರೇಷನ್ ಕಾರ್ಡ್ (Ration card) ಪಡಿತರ ವ್ಯವಸ್ಥೆ ಜಾರಿಗೆ ತಂದಿರುವುದು ನಮಗೆಲ್ಲ ತಿಳಿದೆ ಇದೆ ಅದೇ ರೀತಿ ಈ ವ್ಯವಸ್ಥೆಯಲ್ಲಿ ಸುಧಾರಣೆ ತರುವ ನಿಟ್ಟಿನಲ್ಲಿ ಕೇಂದ್ರದ ಸಚಿವೆ ಶೋಭಾ ಕರಂದ್ಲಾಜೆ (Shobha Kardhlaje) ಅವರು ಸುದ್ದಿಗೋಷ್ಠಿ ನಡೆಸುವ ಮೂಲಕ ಕೆಲವೊಂದು ಮಹತ್ವದ ನಿರ್ಣಯಗಳ ಬಗ್ಗೆ ತಿಳಿಸಿದ್ದಾರೆ.
ಇವರು ಬಿಜೆಪಿಯ ರಾಷ್ಟ್ರೀಯ ವಕ್ತಾರ ಗೌರವ ಬಾಟಿಯ, ವಿಧಾನ ಪರಿಷತ್ (Vidhana parishath) ಸದಸ್ಯ ನಾರಾಯಣ ಸ್ವಾಮಿ (Narayana swami) ಅವರು ಸಹ ಈ ಸುದ್ದಿ ಗೋಷ್ಠಿಯಲ್ಲಿ ಜೊತೆಗಿದ್ದು ಈ ಮೂಲಕ ಅನ್ನಭಾಗ್ಯದ ಬಗ್ಗೆ ಮಾತಾಡಿದ್ದಾರೆ. ಈ ವ್ಯವಸ್ಥೆಯಿಂದ ದೇಶದಲ್ಲಿ ಸಾಕಷ್ಟು ಅಭಿವೃದ್ಧಿ ಸಾಧ್ಯ ಎಂದು ತಿಳಿಸಿದ್ದಾರೆ.
![Shobha Karandlaje told about the significant change about the ration card, implemented across the country](https://nadunudi.in/wp-content/uploads/2023/04/Shobha-Karandlaje-told-about-the-significant-change-about-the-ration-card-implemented-across-the-country.png)
ಏನಂದ್ರು ಸಚಿವೆ?
ಸಚಿವೆ ಶೋಭಾ ಕರಂದ್ಲಾಜೆ ಮಾತನಾಡಿ, ಅನ್ನ ಭಾಗ್ಯಕ್ಕೆ ಕೇಂದ್ರದ ಹಣ 90%ದಷ್ಟು ವಿನಿಯೋಗ ಮಾಡಿದ್ದರು. ಈ ಮೂಲಕ ಅಕ್ಕಿ ಮತ್ತು ಗೋಧಿಯನ್ನು ರಾಜ್ಯದ ಜನತೆಗೆ ಅಗತ್ಯ ಆಹಾರವಾಗಿ ನೀಡಲಾಗುತ್ತಿದ್ದರು ಹೆಸರು ಮಾತ್ರ ರಾಜ್ಯದಲ್ಲಿ ಸಿದ್ಧರಾಮಯ್ಯ ಅವರದ್ದೇ ಇದೆ. ಹಾಗಾಗಿ ದೇಶದಲ್ಲಿ ಏಕರೂಪದ ರೇಷನ್ ಕಾರ್ಡ್ ವ್ಯವಸ್ಥೆ ಜಾರಿಗೆ ತರುವ ಆಲೋಚನೆಯಲ್ಲಿ ಇದ್ದೇವೆ.
![Shobha Karandlaje told about the significant change about the ration card, implemented across the country](https://nadunudi.in/wp-content/uploads/2023/04/Shobha-Karandlaje-told-about-the-significant-change-about-the-ration-card-implemented-across-the-country-1.png)
ಗರೀಬ್ ಕಲ್ಯಾಣ್ ಯೋಜನೆ:
ಆಹಾರ ಭದ್ರತೆಯ ಆ್ಯಕ್ಟ್ ಪ್ರಕಾರವಾಗಿ ಆಹಾರ ಪ್ರತಿಯೊಬ್ಬ ವ್ಯಕ್ತಿಗೂ ನೀಡಬೇಕು. ಈಗ ಬರೀ ಆಹಾರವಲ್ಲ ಬದಲಾಗಿ ಪೌಷ್ಟಿಕ ಆಹಾರ ನೀಡಲೇ ಬೇಕು. ಬಿಪಿಎಲ್ , ನಿರ್ಗತಿಕರಿಗೆ ಹಾಗೂ ಅಂತ್ಯೋದಯದವರಿಗೆ ಪೌಷ್ಟಿಕ ಆಹಾರ ವದಗಿಸುವುದು ನಮ್ಮ ಯೋಜನೆ ಮುಖ್ಯ ಉದ್ದೇಶವಾಗಿತ್ತು. ಕೋವಿಡ್ ಸಮಯದಲ್ಲಿ ಗರೀಬ್ ಕಲ್ಯಾಣ್ ಯೋಜನೆ ಜಾರಿಗೆ ತರಲಾಗಿದ್ದು ಆ ಸೌಲಭ್ಯ ಈಗಲೂ ಜನರಿಗಸಾಕಷ್ಟು ಸಹಕಾರಿಯಾಗುತ್ತಿದೆ ಎಂದರು.
![Shobha Karandlaje told about the significant change about the ration card, implemented across the country](https://nadunudi.in/wp-content/uploads/2023/04/Shobha-Karandlaje-told-about-the-significant-change-about-the-ration-card-implemented-across-the-country-2.png)
ಏಕ ರೂಪದ ರೇಷನ್ ಕಾರ್ಡ್:
ಕೊರೊನಾ ಅವಧಿ ಬಹುತೇಕ ಜನರಿಗೆ ಒಂದು ಒಳ್ಳೇ ಪಾಠವಾಗಿದೆ. ಜನರಿಗೆ ಸಹಾಯ ಮಾಡೊ ಗುಣ ಬೆಳೆಯಿತು ಈ ಸಂದರ್ಭದಲ್ಲೆ ಜನರಿಗೆ ಆಹಾರ ಅಗತ್ಯ ಪೂರೈಕೆ ಮನವಿ ಬಂದಿದ್ದು ಸಾಕಷ್ಟು ಸಂಖ್ಯೆಯಲ್ಲಿ ರೆಷನ್ ಕಿಟ್ ಅನ್ನು ನೀಡಲಾಗಿತ್ತು. ರಾಷ್ಟ್ರಕ್ಕೆ ಒಂದು ರೇಷನ್ ಕಾರ್ಡ್ ಜಾರಿಯಾಗುತ್ತೆ. ಇದು ಸಾಕಷ್ಟು ಜನ ವಲಸೆ ಕಾರ್ಮಿಕರ ನೆರವಿಗೆ ಸಹಕಾರಿ. ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಹೋಗುವಾಗ ರೇಷನ್ ಅತೀ ಅಗತ್ಯ ವಾಗುತ್ತದೆ. ಬೇರೆ ರಾಜ್ಯದಿಂದ ಇಲ್ಲಿಗೆ ಬಂದ್ರು ರೇಷನ್ ಸಿಗಬೇಕು. ಯಾರಿಗೆ ಆಹಾರ ಸಮಸ್ಯೆ ಇದೆಯೋ ಅವರಿಗೆ ಆಹಾರ ವದಗಿಸಿ ಹಸಿವು ನೀಗಿಸುವುದೇ ಈ ಯೋಜನೆಯ ಮುಖ್ಯ ಉದ್ದೇಶ. ಮುಂದಿನ ದಿನದಲ್ಲಿ ಈ ಬಗ್ಗೆ ಇನ್ನಷ್ಟು ಸುಧಾರಣಾ ಕ್ರಮ ಜಾರಿಯಾಗಲಿದೆ ಎಂದಿದ್ದಾರೆ.
![Shobha Karandlaje told about the significant change about the ration card, implemented across the country](https://nadunudi.in/wp-content/uploads/2023/04/Shobha-Karandlaje-told-about-the-significant-change-about-the-ration-card-implemented-across-the-country-3.png)