Puttakkana Makkalu: ಪುಟ್ಟಕ್ಕನ ಮಕ್ಕಳು ಧಾರಾವಾಹಿಯಲ್ಲಿ ಬಿಗ್ ಟ್ವಿಸ್ಟ್, ಕಂಠಿ ಸ್ನೇಹ ಮದುವೆ ಮಾಡಿಸಿದ ಬಂಗಾರಮ್ಮ.
ಪುಟ್ಟಕ್ಕನ ಮಕ್ಕಳು ಧಾರಾವಾಹಿಯಲ್ಲಿ ಕಾಂತಿ ಮತ್ತು ಶೇನ ಮದುವೆ ಮಾಡಿಸಿದ ಬಂಗಾರಮ್ಮ.
Sneha And Kanti Marriage In Puttakkana Makkalu Serial: ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಪುಟ್ಟಕ್ಕನ ಮಕ್ಕಳು (Puttakkana Makkalu) ಧಾರಾವಾಹಿ ಅತಿ ಹೆಚ್ಚು ಪ್ರೇಕ್ಷಕರನ್ನು ಪಡೆದುಕೊಂಡಿದೆ. ಪ್ರಸ್ತುತ 7:30 ಪುಟ್ಟಕ್ಕನ ಮಕ್ಕಳು ಧಾರಾವಾಹಿ ಪ್ರಸಾರವಾಗುತ್ತಿದ್ದು ಧಾರಾವಾಹಿ ಪ್ರಿಯರನ್ನು ಸೆಳೆಯುತ್ತಿದೆ.
ಇದೀಗ ಧಾರಾವಾಹಿಯಲ್ಲಿ ಪ್ರಮುಖ ಪಾತ್ರದಾರಿಗಳಾದ ಸ್ನೇಹ ಮತ್ತು ಕಂಠಿ ಮದುವೆ ಬೇರೆ ಬೇರೆಯವರ ಜೊತೆ ನಡೆಯುತ್ತಿದೆ. ಇನ್ನು ಧಾರಾವಾಹಿ ಪ್ರಿಯರು ಸ್ನೇಹ ಮತ್ತು ಕಂಠಿ ಮದುವೆ ಆಗಲಿ ಎಂದು ಕಾಯುತ್ತಿದ್ದಾರೆ. ಇದೀಗ ಪುಟ್ಟಕ್ಕನ ಮಕ್ಕಳು ಧಾರಾವಾಹಿಯಲ್ಲಿ ಹೊಸ ತಿರುವು ಸೃಷ್ಟಿಯಾಗಿದೆ.
![Sneha And Kanti Marriage In Puttakkana Makkalu Serial](https://nadunudi.in/wp-content/uploads/2023/06/sneha-and-kanti.png)
ಪುಟ್ಟಕ್ಕನ ಮಕ್ಕಳು ಧಾರಾವಾಹಿಯಲ್ಲಿ ಜೋಡಿ ಮದುವೆ
ಪುಟ್ಟಕ್ಕನ ಮಕ್ಕಳು ಧಾರಾಹಿಯಲ್ಲಿ ಕಳೆದ ಎರಡು ವಾರಗಳಿಂದ ಅನಿರೀಕ್ಷಿತ ತಿರುವುಗಳು ಉಂಟಾಗುತ್ತಿವೆ. ಸ್ನೇಹ ಮತ್ತು ಕಂಠಿ ಪರಸ್ಪರ ಪ್ರೀತಿಸುತ್ತಿದ್ದು ಈ ಜೋಡಿಯ ಮದ್ಯೆ ಕಂಠಿ ತಾಯಿ ಬಂಗಾರಮ್ಮ ಬಂದು ಈ ಇಬ್ಬರನ್ನು ಪುಟ್ಟಕ್ಕನ ಸಹಾಯದಿಂದ ಬೇರ್ಪಡಿಸಿದ್ದಾರೆ.
ಪುಟ್ಟಕ್ಕ ಬಂಗಾರಮ್ಮನಿಗೆ ಕಂಠಿ ಹಾಗೂ ಸ್ನೇಹರನ್ನು ಬೇರೆ ಮಾಡುವುದಾಗಿ ಮಾತು ಕೊಟ್ಟಿದ್ದಾರೆ. ಸ್ನೇಹ ಕೂಡ ಪುಟ್ಟಕ್ಕನಿಗೆ ತಾನು ಕಂಠಿಯನ್ನು ಮರೆಯುತ್ತೇನೆ ಎಂದು ಮಾತುಕೊಟ್ಟಿದ್ದಾಳೆ.
ಬೇರೆ ಬೇರೆ ಮದುವೆ ಆಗುತ್ತಿರುವ ಸ್ನೇಹ ಮತ್ತು ಕಂಠಿ
ಇದೀಗ ಕಂಠಿ ತನ್ನ ಅತ್ತೆ ಮಗಳು ರಾಧಾಳನ್ನು ಹಾಗು ಸ್ನೇಹ ತನ್ನ ಅಣ್ಣನ ಸ್ನೇಹಿತ ಭುವನ್ ಅವರನ್ನು ಮದುವೆಯಾಗಲು ಸಜ್ಜಾಗಿದ್ದಾರೆ. ಇಷ್ಟವಿಲ್ಲದ ಮದುವೆಗೆ ಮನೆಯವರ ಒತ್ತಾಯದ ಮೇರೆಗೆ ಕಂಠಿ ಮತ್ತು ಸ್ನೇಹಿ ತಯಾರಾಗಿದ್ದಾರೆ.
![Sneha And Kanti Marriage In Puttakkana Makkalu Serial](https://nadunudi.in/wp-content/uploads/2023/06/Sneha-And-Kanti-Marriage.png)
ಇನ್ನು ಸ್ನೇಹ ಅಕ್ಕ ಸಹನಾ ಸ್ನೇಹ ಬಳಿ ಹೋಗಿ ಕಂಠಿ ಪ್ರೀತಿಯ ಬಗ್ಗೆ ಮಾತನಾಡುತ್ತಾಳೆ. ಈ ವೇಳೆ ಸ್ನೇಹ ಭಾವುಕಳಾಗಿ ತನ್ನ ಮನದಲ್ಲಿರುವ ಪ್ರೀತಿಯ ಬಗ್ಗೆ ಹೇಳುತ್ತಾಳೆ. ಸಹನಾ ಮದುವೆ ನಿಲ್ಲಿಸುವುದಾಗಿ ಹೇಳಿದಾಗ ಸ್ನೇಹ ತಡೆಯುತ್ತಾಳೆ.
ಭುವನ್ ಬಳಿ ಸ್ನೇಹ ಪ್ರೀತಿ ವಿಚಾರ ಹೇಳಿದ ಕಾಳಿ
ಇನ್ನು ಸಹನಾ ಹಾಗೂ ಸುಮಾ ಸ್ನೇಹ ಮದುವೆ ತಡೆಯಲು ಕಾಳಿ ಸಹಾಯ ಪಡೆದು ಭುವನ್ ಬಳಿ ಸ್ನೇಹ ಕಂಠಿಯನ್ನು ಪ್ರೀತಿಸುತ್ತಿರುವ ವಿಷಯವನ್ನು ಹೇಳಲು ಹೇಳುತ್ತಾರೆ. ಕಾಳಿ ಭುವನ್ ಬಳಿ ಸ್ನೇಹ ಪ್ರೀತಿಯ ವಿಚಾರ ಹೇಳಿದರು ಭುವನ್ ನಂಬುವುದಿಲ್ಲ.
ಇನ್ನೊಂದೆಡೆ ರಾಜಿ ಕೂಡ ಭುವನ್ ತಂದೆ ತಾಯಿ ಬಳಿ ಹೋಗಿ ಸ್ನೇಹ ಪ್ರೀತಿ ವಿಚಾರವವನ್ನು ಹೇಳುತ್ತಾಳೆ, ಪುಟ್ಟಕ್ಕನ ಮಕ್ಕಳು ಧಾರಾವಾಹಿಯಲ್ಲಿ ಕಾಂತಿ ಮತ್ತು ಶೇನ ಮದುವೆ ಮಾಡಿಸಿದ ಬಂಗಾರಮ್ಮ, ಆದರೆ ಅವರು ಕೂಡ ರಾಜಿ ಮಾತನ್ನು ನಂಬುವುದಿಲ್ಲ. ಧಾರಾವಾಹಿ ಮೂಲಗಳಿಂದ ತಿಳಿದುಬಂದಿರುವ ಮಾಹಿತಿಯ ಪ್ರಕಾರ ಬಂಗಾರಮ್ಮ ತನ್ನ ಪ್ರೀತಿಗೆ ಬೆಲೆಕೊಟ್ಟು ಇಬ್ಬರ ಮದುವೆ ಮಾಡಿಸಿದ್ದಾರೆ ಎಂದು ಹೇಳಲಾಗಿದೆ.
![Sneha And Kanti Marriage In Puttakkana Makkalu Serial](https://nadunudi.in/wp-content/uploads/2023/06/puttakkan-makkalu.png)
ಕಂಠಿ ಸ್ನೇಹ ಮದುವೆ ಮಾಡಿಸಿದ ಬಂಗಾರಮ್ಮ
ಇನ್ನು ದೇವಸ್ಥಾನಕ್ಕೆ ಎರಡು ಜೋಡಿಗಳು ಹೋಗುತ್ತಾರೆ. ಆಗ ಕಂಠಿ ಹಾಗೂ ಸ್ನೇಹ ಮುಖ ನೋಡಿಕೊಂಡು ಪ್ರೀತಿಯ ಭಾವದಿಂದ ಮುಖನೋಡಿಕೊಳ್ಳುತ್ತಾರೆ. ಇನ್ನು ಭುವನ್ ತಂದೆ ತಾಯಿ ಸ್ನೇಹ ಮೇಲೆ ಅನುಮಾನ ಪಡಬಾರದು ಎಂದು ತನ್ನಷ್ಟಕ್ಕೆ ಎಣಿಸಿಕೊಳ್ಳುತ್ತಾರೆ.
ಇನ್ನೇನು ಕಂಠಿ ಹಾಗೂ ರಾಧಾ ಮದುವೆ ಸಿದ್ಧತೆ ನಡೆಯುತ್ತಿರುವಾಗ ರಾಧಾ ಮದುವೆ ಮನೆಯಿಂದ ಕಾಣೆಯಾಗುತ್ತಾಳೆ. ರಾಧಾ ಕಣ್ಮರೆಯಾದ ಕಾರಣ ಧಾರಾವಾಹಿಯಲ್ಲಿ ಬಹುದೊಡ್ಡ ತಿರುವು ಉಂಟಾಗಿದೆ. ಇನ್ನು ಕಂಠಿ ಸ್ನೇಹ ಪ್ರೀತಿಯನ್ನು ಅರಿತು ಬಂಗಾರಮ್ಮ ಈ ಇಬ್ಬರ ಮದುವೆ ಮಾಡಿಸುತ್ತಾರಾ ಎಂದು ಕಾದುನೋಡಬೇಕಿದೆ.