Venu Swamy: ತೆಲುಗು ಚಿತ್ರರಂಗದ ಬಗ್ಗೆ ಆಘಾತಕಾರಿ ಭವಿಷ್ಯ ನುಡಿದ ವೇಣು ಸ್ವಾಮೀ.
ತೆಲುಗು ಚಿತ್ರರಂಗದ ನಟ ನಟಿಯರ ಕುರಿತು ಆಘಾತಕಾರಿ ಭವಿಷ್ಯ ನುಡಿದ ವೇಣು ಸ್ವಾಮೀ.
Venu Swamy: ಹೆಚ್ಚಾಗಿ ಸಿನಿಮಾ ನಟ ನಟಿಯರು ವೇಣು ಸ್ವಾಮೀ ಭವಿಷ್ಯವನ್ನು ನಂಬುತ್ತಾರೆ. ಈಗಾಗಲೇ ಸಿನಿಮಾ ಭವಿಷ್ಯ ಹೇಳುವ ವೇಣು ಸ್ವಾಮೀ ಅವರ ಭವಿಷ್ಯ ಸಾಕಷ್ಟು ನಟ ನಟಿಯರಿಗೆ ನಿಜ ಎನಿಸಿದೆ.
ವೇಣು ಸ್ವಾಮೀ ಈಗಾಗಲೇ ಕೆಲವು ನಟ ನಟಿಯರಿಗೆ ನುಡಿರುವ ಭವಿಷ್ಯ ನಿಜವಾಗಿದೆ. ಇತ್ತೀಚಿಗಷ್ಟೇ ನಟ ಪ್ರಭಾಸ್ ಅವರ ಬಗ್ಗೆ ಆದಿಪುರುಷ್(Adipurush) ಸಿನಿಮಾದ ಬಗ್ಗೆ ಭವಿಷ್ಯ ನುಡಿದಿದ್ದರು. ಇದು ಸಹ ನಿಜವಾಗಿದೆ. ಇದೀಗ ವೇಣು ಸ್ವಾಮಿ ಮತ್ತೊಂದು ಭವಿಷ್ಯ ನುಡಿದಿದ್ದಾರೆ. ಇದು ಏನು ಎನ್ನುವುದನ್ನು ತಿಳಿದುಕೊಳ್ಳೋಣ.
![Venu Swamy made a shocking prediction about the Telugu film industry](https://nadunudi.in/wp-content/uploads/2023/06/venu-swamy-latest.png)
ತೆಲುಗು ಚಿತ್ರರಂಗದ ಬಗ್ಗೆ ಆಘಾತಕಾರಿ ಭವಿಷ್ಯ ನುಡಿದ ವೇಣು ಸ್ವಾಮೀ
ವೇಣು ಸ್ವಾಮೀ ಪ್ರತಿ ಬಾರಿಯೂ ಸ್ಟಾರ್ ನಟ ನಟಿಯರನ್ನು ಉದ್ದೇಶಿಸಿ ಮಾತನಾಡುತ್ತಾರೆ. ಇ ಬಾರಿ ಸುಳಿವು ಕೊಡದೆ ಭವಿಷ್ಯ ನುಡಿದಿದ್ದಾರೆ. ತೆಲುಗು ಚಿತ್ರರಂಗದ ಸ್ಟಾರ್ ನಟರು ಖಂಡಿತಾ 2026 ರೊಳಗೆ ಅನಾರೋಗ್ಯದಿಂದ ಬಳಲುತ್ತಾರೆ, ಇಲ್ಲವಾದರೆ ಅಗಲುತ್ತಾರೆ. ಸಾವಾಗುವುದು ಕನ್ಫರ್ಮ್ ಎಂದು ಹೇಳಿದ್ದಾರೆ. ಆದರೆ ಈ ಇಬ್ಬರು ಯಾರು ಎಂದು ಮಾತ್ರ ರಿವೀಲ್ ಮಾಡಿಲ್ಲ. ಹೀಗಾಗಿ ಚಿತ್ರರಂಗದಲ್ಲಿ ಗೊಂದಲ ಸೃಷ್ಟಿ ಮಾಡಿದೆ.
ನಟ ವಿಜಯ್ ದೇವರಕೊಂಡ ಅವರ ಲೈಗರ್ ಸಿನಿಮಾ ಸೋಲುತ್ತದೆ ಎಂದು ವೇಣು ಸ್ವಾಮೀ ಹೇಳಿದ್ದರು. ಅಷ್ಟಮ ಶನಿ ಆರಂಭವಾಗುತ್ತಿರುವ ಕಾರಣ ವಿಜಯ್ ಏನೆ ಕೆಲಸ ಮಾಡಿದರು ಸೋಲುತ್ತಾರೆ ಹಾಗು ಮಾತನಾಡುವಾಗ ಯೋಚನೆ ಮಾಡಬೇಕು ಹೀಗಾಗಿ ಸದ್ಯಕ್ಕೆ ಸಿನಿಮಾ ಒಪ್ಪಿಕೊಳ್ಳಬಾರದು ಎಂದಿದ್ದರು.
![Venu Swamy made a shocking prediction about the Telugu film industry](https://nadunudi.in/wp-content/uploads/2023/06/venu-swamy-shocking-prediction.png)
ಇತ್ತೀಚಿಗೆ ವೇಣು ಸ್ವಾಮೀ ಆದಿಪುರುಷ್ ಸಿನಿಮಾದ ಬಗ್ಗೆ ಭವಿಷ್ಯ ನುಡಿದಿದ್ದರು. ಪ್ರಭಾಸ್ ಅವರ ರಾಶಿಯ ಪ್ರಕಾರ ಈಗ ಅವರು ಏನು ಮಾಡಿದರು ಯಶಸ್ಸು ಸಿಗುವುದಿಲ್ಲ. ಈ ಸಿನಿಮಾ ಪ್ಲಾಪ್ ಆಗಲಿದೆ ಎಂದಿದ್ದರು. ಇದು ಸಹ ನಿಜವಾಗಿದೆ. ಪ್ರಭಾಸ್ ಗೆ ಆದಿಪುರುಷ್ ಸಿನಿಮಾ ಗೆಲುವು ತಂದುಕೊಟ್ಟಿಲ್ಲ. ಅಲ್ಲದೆ ಈ ಸಿನಿಮಾ ಟ್ರೊಲ್ ಸಹ ಆಗಿದೆ.