53 ಸಾವಿರ ಸಂಬಳ ಪಡೆಯುತ್ತಿದ್ದ ವಿಸ್ಮಯಾ ಗಂಡನಿಗೆ ಜೈಲಿಯಲ್ಲಿ ಎಷ್ಟು ಸಂಬಳ ಕೊಡಲಾಗುತ್ತಿದೆ ಗೊತ್ತಾ, ಬೇಕಿತ್ತಾ ಇದೆಲ್ಲ.
ವಿಸ್ಮಯಾ ಕೇರಳದ ಯುವತಿಯ ಸಾವಿನ ಬಗ್ಗೆ ನಿಮಗೆಲ್ಲ ತಿಳಿದೇ ಇದೆ ಎಂದು ಹೇಳಬಹುದು. ಹೌದು ವಿಸ್ಮಯಾ ಸಾವಿಗೆ ಇಡೀ ದೇಶವೇ ಕಂಬನಿಯನ್ನ ಮಿಡಿದಿತ್ತು ಎಂದು ಹೇಳಿದರೆ ತಪ್ಪಾಗಲ್ಲ. ಈಕೆಯ ಸಾವಿಗೆ ಅಸಲಿ ಕಾರಣ ಏನು ಅನ್ನುವುದು ದೊಡ್ಡ ನಿಗೂಢವಾಗಿಯೇ ಉಳಿದಿದ್ದು. ಕೊನೆಗೂ ಪೊಲೀಸರು ವಿಸ್ಮಯಾ ಸಾವಿಗೆ ಕಾರಣ ಏನು ಮತ್ತು ಅದರ ಹಿಂದೆ ಯಾರು ಯಾರು ಇದ್ದರು ಅನ್ನುವುದನ್ನ ಕಂಡುಹಿಡಿದರು ಎಂದು ಹೇಳಬಹುದು. ವಿಸ್ಮಯಳ ಗಂಡ ಹಣದ ಆಸೆಯಿಂದ ವಿಸ್ಮಯಾ ಸಾವಿಗೆ ಕಾರಣನಾದ ಎಂದು ಅನ್ನುವುದನ್ನ ತಿಳಿದು ಇಡೀ ದೇಶವೇ ಆಘಾತಕ್ಕೆ ಒಳಗಾಗಿತ್ತು.
ಇನ್ನು ವಿಸ್ಮಯಾ ಗಂಡ ಪೊಲೀಸ್ ಹುದ್ದೆಯಲ್ಲಿ ಇದ್ದು ತಿಂಗಳಿಗೆ 53 ಸಾವಿರ ರೂಪಾಯಿ ಸಂಬಳವನ್ನ ಪಡೆದುಕೊಳ್ಳುತ್ತಿದ್ದ, ಆದರೆ ಹಣದ ದುರಾಸೆಯ ಕಾರಣ ಪತ್ನಿಯನ್ನ ಜೀವ ಕಳೆದುಕೊಳ್ಳಲು ಪ್ರೇರೇಪಣೆ ಮಾಡಿದ್ದ ಗಂಡ ಕಿರಣ್ ಈಗ ಜೈಯಲ್ಲಿ ಮುದ್ದೆ ಮುರಿಯುತ್ತಿದ್ದಾನೆ ಎಂದು ಹೇಳಬಹುದು. ಜೈಲಿನಲ್ಲಿ ಕೈದಿಗಳನ್ನ ಸುಮ್ಮನೆ ಕುಳುಹಿಸಿ ಊಟವನ್ನ ಹಾಕುವುದಿಲ್ಲ, ಹೊರತಾಗಿ ಅವರಿಗೆ ದೂನಕೂಲಿಯನ್ನ ಕೊಡಲಾಗುತ್ತದೆ. ಇನ್ನು ಅದೇ ರೀತಿಯಲ್ಲಿ ತಿಂಗಳು 53 ಸಾವಿರ ರೂಪಾಯಿ ಸಂಬಳವನ್ನ ಪಡೆದುಕೊಳ್ಳುತ್ತಿದ್ದ ಕಿರಣ್ ಈಗ ಜೈಲಿನಲ್ಲಿ ದಿನಕೂಲಿಯನ್ನ ಎಷ್ಟು ಸಂಬಳವನ್ನ ಪಡೆದುಕೊಳ್ಳುತ್ತಿದ್ದಾನೆ ಎಂದು ತಿಳಿದರೆ ನಿಮಗೆ ಖುಷಿ ಆಗಬಹುದು.
ಹಾಗಾದರೆ ಜೈಲಿನಲ್ಲಿ ದಿನಕೂಲಿ ಮಾಡುತ್ತಿರುವ ವಿಸ್ಮಯಾ ಗಂಡ ಕಿರಣ್ ಎಷ್ಟು ಸಂಬಳವನ್ನ ಪಡೆದುಕೊಳ್ಳುತ್ತಿದ್ದಾನೆ ಅನ್ನುವುದನ್ನ ತಿಳಿಯೋಣ ಬನ್ನಿ. ಹೌದು ವಿಸ್ಮಯಾ ಸಾವಿಗೆ ನೇರವಾದ ಕಾರಣ ಆಕೆಯ ಗಂಡ ಕಿರಣ್ ಅನ್ನುವುದು ತಿಳಿದು ಮೇ 23 ರಂದು ಮಹತ್ವದ ತ್ರಿಪು ನೀಡಿದ್ದ ಕೋರ್ಟ್ ಕಿರಣ್ ಗೆ ಹತ್ತು ವರ್ಷ ಜೈಲು ಮತ್ತು 12 ಲಕ್ಷ ರೂಪಾಯಿ ದಂಡವನ್ನ ವಿಧಿಸಿತ್ತು. ಸದ್ಯ ಜೈಲಿನಲ್ಲಿ ಇರುವ ಕಿರಣ್ ಇತರೆ ಕೈದಿಗಳ ಜೊತೆ ದಿನಕೂಲಿಯನ್ನ ಜೈಲಿನಲ್ಲಿ ಮಾಡುತ್ತಿದ್ದಾನೆ. ಸದ್ಯ ದಿನಕ್ಕೆ ಕಿರಣ್ ಗೆ 63 ರೂಪಾಯಿ ಸಂಬಳವನ್ನ ಕೊಡಲಾಗುತ್ತಿದೆ ಮತ್ತು 1 ವರ್ಷದ ಬಳಿಕ ಕಿರಣ್ ಗೆ 127 ರೂಪಾಯಿ ಸಂಬಳವನ್ನ ಕೊಡಲಾಗುತ್ತದೆ.
ಜೈಲಿನಲ್ಲಿ ಕೃಷಿ ಮತ್ತು ತೋಟವನ್ನ ನೋಡಿಕೊಳ್ಳುವ ಕಿರಣ್ ಗೆ ದಿನಕ್ಕೆ 63 ರೂಪಾಯಿ ಸಂಬಳದ ಜೊತೆಗೆ ಊಟ ತಿಂಡಿ ನೀಡಲಾಗುತ್ತದೆ. ಹಣದ ದಾಹಕ್ಕೆ ವಿಸ್ಮಯಾಗೆ ಬಹಳ ಕಿರುಕುಳ ನೀಡಿದ ಕಿರಣ್ ಈಗ ಮರ್ಯಾದೆಯನ್ನ ಕಳೆದುಕೊಂಡು ಜೈಲಿನಲ್ಲಿ ಮುದ್ದೆ ಮುರಿಯುತ್ತಿದ್ದಾನೆ ಎಂದು ಹೇಳಬಹುದು. ಬಹಳ ಹಿಂಸೆಯನ್ನ ಅನುಭವಿಸಿ ಸಾವು ಕಂಡಿದ್ದ ವಿಸ್ಮಯಾ ಆತ್ಮಕ್ಕೆ ಈಗ ಶಾಂತಿ ಸಿಕ್ಕಿದೆ ಎಂದು ಹೇಳಿದರೆ ತಪ್ಪಾಗಲ್ಲ. ಸ್ನೇಹಿತರೆ ಕಿರಣ್ ಗೆ ಬಂದಿರುವ ಈ ಸ್ಥಿತಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.