Yuva Rajkumar Divorce: ವಿಚ್ಛೇದನ ಪಡೆದ ದೊಡ್ಮನೆ ಕುಡಿ ಯುವ, ಈ ಕಾರಣಕ್ಕೆ ಪತ್ನಿಗೆ ವಿಚ್ಛೇದನ ನೀಡಲು ಮುಂದಾದ ಯುವ.
ಈ ಕಾರಣಕ್ಕೆ ಪತ್ನಿಗೆ ವಿಚ್ಛೇದನ ನೀಡಲು ಮುಂದಾದ ಯುವ
Yuva Rajkumar Divorce Reason: ಡಾ.ರಾಜ್ ಕುಮಾರ್ ಮೊಮ್ಮಗ ಹಾಗೂ ರಾಘವೇಂದ್ರ ರಾಜ್ ಕುಮಾರ್ ಅವರ ಎರಡನೇ ಪುತ್ರ Yuva Rajkumar ವಿಚ್ಛೇದನ ಪಡೆದಿದ್ದಾರೆ ಎನ್ನುವ ಬಗ್ಗೆ ಮಾಹಿತಿ ವೈರಲ್ ಆಗಿದೆ. ಸ್ಯಾಂಡಲ್ ವುಡ್ ನಲ್ಲಿ ತಮ್ಮ ಸಿನಿ ಕರಿಯರ್ ಆರಂಭಿಸಲು ಸಜ್ಜಾದ ಯುವ ಇದೀಗ ತಮ್ಮ ವೈವಾಹಿಕ ಜೀವನವನ್ನು ಕೊನೆಗಾಣಿಸಲು ಹೊರಟಿದ್ದಾರೆ ಎನ್ನುವ ಸುದ್ದಿ ಕೇಳಿಬರುತ್ತಿದೆ.
ಸದ್ಯ ಯುವರಾಜ್ ಕುಮಾರ್ ಪತ್ನಿಯ ವಿಚ್ಛೇದನ ದೊಡ್ಮನೆ ಕುಟುಂಬ ಮತ್ತು ಯುವ ರಾಜ್ ಕುಮಾರ್ ಅಭಿಮಾನಿಗಳಿಗೆ ಬೇಸರ ನೀಡಿದೆ. ಅಷ್ಟಕ್ಕೂ ಯುವ ಹಾಗೂ ಶ್ರೀದೇವಿ ಅವರ ವಿಚ್ಛೇದನಕ್ಕೆ ಕಾರಣ ಏನಿರಬಹುದು ಎನ್ನುವ ಬಗ್ಗೆ ಚರ್ಚೆ ಈ ಲೇಖನದಲ್ಲಿ ಮಾಹಿತಿ ನೀಡಲಾಗಿದೆ.
![Yuva Rajkumar Divorce](https://nadunudi.in/wp-content/uploads/2024/06/Yuva-Rajkumar-Divorce.png)
ವಿಚ್ಛೇದನ ಪಡೆದ ದೊಡ್ಮನೆ ಕುಡಿ ಯುವ
ನಟ ಯುವ ರಾಜ್ ಕುಮಾರ್ ಅವರು 2019 ರಲ್ಲಿ ಶ್ರೀದೇವಿ ಅವರನ್ನು ವಿವಾಹವಾದರು. ಯುವ ರಾಜಕುಮಾರ್ ಅವರ ಐದು ವರ್ಷಗಳ ದಾಂಪತ್ಯ ವೈಯುಕ್ತಿಕ ಕಾರಣಗಳಿಂದ ಮುರಿದುಬಿದ್ದಿದೆ ಎನ್ನಲಾಗಿದೆ. ಈ ಸಂಬಂಧ ಯುವ ಪತ್ನಿಗೆ ನೋಟಿಸ್ ನೀಡಿದ್ದಾರೇ ಎನ್ನುವ ಬಗ್ಗೆ ವರದಿಯಾಗಿದೆ. ಸದ್ಯ ಯುವ ರಾಜ್ ಕುಮಾರ್ ಪತ್ನಿ ಶ್ರೀದೇವಿ ವಿದೇಶದಲ್ಲಿದ್ದಾರೆ. ಆರು ತಿಂಗಳ ಹಿಂದೆ ಯುವ ರಾಜ್ ಕುಮಾರ್ ಅವರು ಶ್ರೀದೇವಿಯಿಂದ ವಿಚ್ಛೇದನ ಕೋರಿ ಕೌಟುಂಬಿಕ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು. ಇದೀಗ ನ್ಯಾಯಾಲಯದ ಪ್ರಕ್ರಿಯೆಯಂತೆ ಪತ್ನಿಗೆ ನೋಟಿಸ್ ನೀಡಲಾಗಿದೆ.
ಈ ಕಾರಣಕ್ಕೆ ಪತ್ನಿಗೆ ವಿಚ್ಛೇದನ ನೀಡಲು ಮುಂದಾದ ಯುವ
ನಟ ಯುವರಾಜ್ ಕುಮಾರ್ ಮತ್ತು ಪತ್ನಿ ಶ್ರೀದೇವಿ ಭೈರಪ್ಪ ಪರಸ್ಪರ ಪ್ರೀತಿಸಿ ಮದುವೆಯಾದರು. ಇವರಿಬ್ಬರ ವಿವಾಹವು ಮೇ 25, 2019 ರಂದು ಅದ್ಧೂರಿಯಾಗಿ ನಡೆದಿತ್ತು. ಈಗ ಯುವ ಹಾಗೂ ಶ್ರೀದೇವಿ ತಮ್ಮ 7 ವರ್ಷದ ಪ್ರೀತಿಗೆ ಹಾಗೂ 4 ವರ್ಷದ ಸಾಂಸಾರಿಕ ಜೀವನದಿಂದ ಇಬ್ಬರೂ ಬೇರೆಯಾಗಲು ನಿರ್ಧರಿಸಿದ್ದಾರೆ. ಯುವ ರಾಜ್ಕುಮಾರ್ ಅವರ ಪತ್ನಿ ಶ್ರೀದೇವಿ ಭೈರಪ್ಪ ಮೂಲತಃ ಮೈಸೂರಿನವರು. ಮದುವೆಯಾಗಿ ನಾಲ್ಕು ವರ್ಷಗಳಾಗಿದ್ದು, ಈಗ ದಾಂಪತ್ಯದಲ್ಲಿ ಬಿರುಕು ಮೂಡಿದೆ.
![Yuva Rajkumar And Sridevi Divorce Reason](https://nadunudi.in/wp-content/uploads/2024/06/Yuva-Rajkumar-And-Sridevi-Divorce-Reason.png)
ಯುವರಾಜ್ ಕುಮಾರ್ ಜೂ.6ರಂದು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು.ಉನ್ನತ ಶಿಕ್ಷಣದ ಕನಸು ಹೊತ್ತಿರುವ ಶ್ರೀದೇವಿ ವಿದೇಶದಲ್ಲಿದ್ದಾರೆ. ಭಾರತವನ್ನು ತೊರೆದು ಕೆಲವು ತಿಂಗಳುಗಳಾಗಿವೆ. ಶಿಕ್ಷಣದ ಕಾರಣ ಅಥವಾ ವೈಯುಕ್ತಿಕ ಕಾರಣಗಳಿಂದ ವೈವಾಹಿಕ ಜೀವನದಲ್ಲಿ ಬಿರುಕು ಮೂಡಿದೆಯೇ ಎಂಬುದು ಸ್ಪಷ್ಟವಾಗಿಲ್ಲ. ಯುವ ರಾಜ್ಕುಮಾರ್ ಅವರು ಸಲ್ಲಿಸಿರುವ ಅರ್ಜಿಯಲ್ಲಿ ಪತ್ನಿ ವಿರುದ್ಧ ಕೆಲವು ಆರೋಪಗಳನ್ನು ಮಾಡಿದ್ದಾರೆ. ಪತ್ನಿ ಮನೆಯಲ್ಲಿ ಅಗೌರವ ತೋರುತ್ತಾರೆ. ಮಾನಸಿಕ ಹಿಂಸೆ ನೀಡಿದ್ದಾರೆ ಎಂದು ಆರೋಪಿಸಿದ್ದಾರೆ. ಇದರಿಂದಾಗಿ ಯುವ ರಾಜಕುಮಾರ ನೊಂದಿದ್ದಾರೆ. ಹಾಗಾಗಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾರೆ ಎಂಬುದು ಸದ್ಯದ ಮಾಹಿತಿ. ಇನ್ನು ಯುವರಾಜ್ ಕುಮಾರ್ ವಿಚ್ಛೇದನದ ಬಗ್ಗೆ ರಾಜ್ ಕುಮಾರ್ ಶೀಘ್ರದಲ್ಲೇ ಸ್ಪಷ್ಟ ಮಾಹಿತಿ ನೀಡಲಿದೆ.