Anushree And Sangeetha Shringeri: ಮಲ್ಲಮೂಲೆ ದೈವಕ್ಕೆ ಕೋಲಾ ಹರಕೆ ನೀಡಿದ ನಿರೂಪಕಿ ಅನುಶ್ರೀ, ಫೋಟೋಗಳು ವೈರಲ್.
Anchor Anushree And Actress Sangeetha Shringeri In Kasaragod Temple: ಕಾಂತಾರ ಸಿನಿಮಾ ನೋಡಿದ ಜನರು ಕರಾವಳಿ ಭಾಗದ ಸಂಸ್ಕೃತಿ ಆಚಾರದ ಬಗ್ಗೆ ತಿಳಿದುಕೊಂಡಿದ್ದಾರೆ. ಅಲ್ಲದೆ ಕರಾವಳಿ ಭಾಗದ ಹಬ್ಬದ ಆಚರಣೆಗಳಿಗೆ ನಟ ನಟಿಯರು ಹೆಚ್ಚಾಗಿ ಭೇಟಿ ನೀಡುತ್ತಿದ್ದಾರೆ.
ಕಾಂತಾರ ಸಿನಿಮಾದ ನಂತರ ಕರಾವಳಿ ಭಾಗದ ದೇವಸ್ಥಾನಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿದ್ದಾರೆ. ಇದೀಗ ನಿರೂಪಕಿ ಅನುಶ್ರೀ (Anchor Anushree) ಮತ್ತು ನಟಿ ಸಂಗೀತ ಶೃಂಗೇರಿ (Sangeetha Shrigeri) ಮಲ್ಲಮೂಲೆ ದೈವಸ್ಥಾನಕ್ಕೆ ಭೇಟಿ ನೀಡಿದ್ದಾರೆ. ಕೊರಗಜ್ಜನಿಗೆ ಅನುಶ್ರೀ ಮತ್ತು ನಟಿ ಸಂಗೀತ ವಿಶೇಷ ಹರಕೆ ಸಲ್ಲಿಸಿದ್ದಾರೆ.
ಕೊರಗಜ್ಜನ ದೇವಸ್ಥಾನಕ್ಕೆ ಭೇಟಿ ನೀಡಿದ ನಿರೂಪಕಿ ಅನುಶ್ರೀ ಮತ್ತು ನಟಿ ಸಂಗೀತ
ಕಾಂತಾರ ಸಿನಿಮಾ ತೆರೆಕಂಡ ಬಳಿಕ ಕರಾವಳಿ ಭಾಗದ ದೇವಸ್ಥಾನಗಳಿಗೆ ಭಕ್ತಗಣ ಹೆಚ್ಚಾಗುತ್ತಿದೆ. ಸಾವಿರಾರು ಭಕ್ತರು ಕೊರಗಜ್ಜನ ಮತ್ತು ಇತರೆ ದೈವದ ದರ್ಶನ ಪಡೆಯುತ್ತಿದ್ದಾರೆ. ಇತ್ತೀಚಿಗಷ್ಟೇ ನಟಿ ಪ್ರೇಮಾ ಕೊರಗಜ್ಜನ ದರ್ಶನ ಪಡೆದಿದ್ದರು.
ಇದೀಗ ನಿರೂಪಕಿ ಅನುಶ್ರೀ ಮತ್ತು ಚಾರ್ಲಿ ನಟಿ ಸಂಗೀತ ಶೃಂಗೇರಿ ಕಾಸರಗೋಡು ಮಲ್ಲಮೂಲೆ ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ. ಕಿರಣ್ ರಾಜ್ (Kiran Raj) ಅವರ ತೋಟದಲ್ಲಿ ಅನುಶ್ರೀ ಸುತ್ತಾಡಿ ಫೋಟೋ ತೆಗೆಸಿಕೊಂಡಿದ್ದಾರೆ.
ಮಲ್ಲಮೂಲೆ ದೈವಕ್ಕೆ ಹರಕೆ ಸಲ್ಲಿಸಿದ ಅನುಶ್ರೀ ಮತ್ತು ನಟಿ ಸಂಗೀತ
ಮಲ್ಲಮೂಲೆ ದೈವದ ದರ್ಶನ ಪಡೆದು ನಟಿ ಸಂಗೀತ ಹಾಗು ನಿರೂಪಕಿ ಅನುಶ್ರೀ ಸೆಲ್ಫಿ ತೆಗೆದುಕೊಂಡಿದ್ದಾರೆ. ಸ್ನೇಹಿತರೊಂದಿಗೆ ಮಲ್ಲಮೂಲೆ ದೈವದ ದರ್ಶನಕ್ಕೆ ಹೋದ ಅನುಶ್ರೀ ಮತ್ತು ನಟಿ ಸಂಗೀತ ಮಲ್ಲಮೂಲೆ ದೈವಕ್ಕೆ ಹರಕೆ ಸಲ್ಲಿಸಿದ್ದಾರೆ.
ದೇವರ ಆಶೀರ್ವಾದ ಪಡೆದು ಅನುಶ್ರೀ ಮತ್ತು ಅವರ ಸ್ನೇಹಿತರೆಲ್ಲ ಸೆಲ್ಫಿಗೆ ಪೋಸ್ ನೀಡಿದ್ದಾರೆ. ದೇವರ ದರ್ಶನ ಪಡೆದ ನಂತರ ನಿರ್ದೇಶಕ ಕಿರಣ್ ರಾಜ್ ಅವರ ಮನೆಗೆ ಎಲ್ಲರೂ ಭೇಟಿ ನೀಡಿ ಬಂದಿದ್ದಾರೆ. ಕಿರಣ್ ರಾಜ್ ಅವರ ತೋಟದಲ್ಲಿ ಅನುಶ್ರೀ ಸುತ್ತಾಡಿ ಫೋಟೋ ತೆಗೆಸಿಕೊಂಡಿದ್ದಾರೆ.