Dhruva Sarja: ಮಗಳಿಗೆ ರುದ್ರಾಕ್ಷಿ ಮತ್ತು ಮಗಳಿಗೆ ಹಯಗ್ರೀವ ಎಂದು ಹೆಸರಿಟ್ಟಿದ್ದು ಯಾಕೆ…? ಸ್ಪಷ್ಟನೆ ಕೊಟ್ಟ ಧ್ರುವ ಸರ್ಜಾ

ನಮ್ಮ ಮಕ್ಕಳಿಗೆ ಈ ಸಂಪ್ರದಾಯಬದ್ದ ಹೆಸರಿಡಲು ಕಾರಣ ಏನು ಎನ್ನುವುದರ ಬಗ್ಗೆ ಆಕ್ಷನ್ ಪ್ರಿನ್ಸ್ ಮಾಹಿತಿ ನೀಡಿದ್ದಾರೆ

Dhruva Sarja Children’s Name: ಸ್ಯಾಂಡಲ್ ವುಡ್ ನ ಆಕ್ಷನ್ ಪ್ರಿನ್ಸ್ Dhruva Sarja ಸಿನಿಮಾ ವಿಚಾರಗಳ ಜೊತೆಗೆ ಆಗಾಗ ತಮ್ಮ ಫ್ಯಾಮಿಲಿ ವಿಚಾರವಾಗಿ ಕೂಡ ಸುದ್ದಿಯಾಗುತ್ತಾರೆ. ಸದ್ಯ ದ್ರುವ ಸರ್ಜಾ ತಮ್ಮ ಮಕ್ಕಳ ನಾಮಕರಣ ಮಾಡಿಸಿ ಎಲ್ಲರ ಗಮನ ಸೆಳೆದಿದ್ದಾರೆ.

ನಿನ್ನೆ ಜನವರಿ 22 ರಂದು ಅಯೋಧ್ಯ ರಾಮನ ಪ್ರಾಣ ಪ್ರತಿಷ್ಠಾಪನಾ ಕಾರ್ಯ ನಡೆದಿದೆ. ಈ ಶುಭ ದಿನದಂದು ನಟ ದ್ರುವ ಸರ್ಕಾರ ತಮ್ಮ ಇಬ್ಬರು ಮಕ್ಕಳಿಗೆ ಹೆಸರಿಡಲು ದಿನಾಂಕ ನಿಗದಿಪಡಿಸಿದ್ದರು. ಅದರಂತೆ ನಿನ್ನೆ ಬಹಳ ಅದ್ದೂರಿಯಾಗಿ ರಾಮನ ಪ್ರಾಣ ಪ್ರತಿಷ್ಠಾಪನೆಯ ಸಮಯದಲ್ಲಿಯೇ ತಮ್ಮ ಇಬ್ಬರು ಮುದ್ದಾದ ಮಕ್ಕಳಿಗೆ ಹೆಸರಿಟ್ಟಿದ್ದಾರೆ.

Dhruva Sarja Children's Name
Image Credit: 10tv

ರಾಮನ ಪ್ರಾಣ ಪ್ರತಿಷ್ಠಾಪನಾ ದಿನ ಮಕ್ಕಳಿಗೆ ಹೆಸರಿಟ್ಟ ದ್ರುವ ಸರ್ಜಾ
ನಿನ್ನೆ ಅಯೋದ್ಯೆಯಲ್ಲಿ ಅದ್ದೂರಿಯಾಗಿ ರಾಮ ಮಂದಿರ ಪ್ರಾಣ ಪ್ರತಿಷ್ಠಾಪನೆ ಕಾರ್ಯ ನಡೆದಿದೆ. ಇದೆ ಸಮಯದಲ್ಲಿ ನಟ ದ್ರುವ ಸರ್ಜಾ ಅವರು ತಮ್ಮ ಮಕ್ಕಳಿಗೆ ನಾಮಕರಣ ಮಾಡಿದ್ದಾರೆ. ಒಂದು ಹೆಣ್ಣು ಮಗು ಹಾಗೂ ಒಂದು ಗಂಡು ಮಗು ಹೊಂದಿರುವ ದ್ರುವ ಸರ್ಜಾ ಹೆಣ್ಣು ಮಗಳಿಗೆ “ರುದ್ರಾಕ್ಷಿ” ಗಂಡು ಮಗುವಿಗೆ “ಹಯಗ್ರೀವ” ಎಂದು ಹೆಸರಿಟ್ಟಿದ್ದಾರೆ. ಇನ್ನು ತಾವು ತಮ್ಮ ಮಕ್ಕಳಿಗೆ ಈ ಸಂಪ್ರದಾಯಬದ್ದ ಹೆಸರಿಡಲು ಕಾರಣ ಏನು ಎನ್ನುವುದರ ಬಗ್ಗೆ ಕೂಡ ಆಕ್ಷನ್ ಪ್ರಿನ್ಸ್ ಮಾಹಿತಿ ನೀಡಿದ್ದಾರೆ.

ಮಗಳಿಗೆ ರುದ್ರಾಕ್ಷಿ, ಮಗನಿಗೆ ಹಯಗ್ರೀವ ಎನ್ನುವ ಹೆಸರಿಡಲು ಕಾರಣ ತಿಳಿಸಿದ ಆಕ್ಷನ್ ಪ್ರಿನ್ಸ್
ಜನವರಿ 22 ನಾಮಕರಣದ ದಿನಾಂಕವಾಗಿದ್ದು, ನಾವು ಎರಡೂ ಮಕ್ಕಳಿಗೆ ಒಟ್ಟಿಗೆ ನಾಮಕರಣ ಮಾಡಲು ಯೋಜಿಸಿದ್ದೇವೆ. ಈ ದಿನ ನಮ್ಮ ಬಾಸ್ ರಾಮಮಂದಿರದ ಉದ್ಘಾಟನೆ. ತುಂಬಾ ಸಂತೋಷವಾಗುತ್ತಿದೆ. ಮಗಳಿಗೆ ರುದ್ರಾಕ್ಷಿ ಡಿ ಸರ್ಜಾ ಮತ್ತು ಮಗನಿಗೆ ಹಯಗ್ರೀವ ಡಿ ಸರ್ಜಾ ಎಂದು ಹೆಸರಿಟ್ಟಿದ್ದೇವೆ. ಒತ್ತಕ್ಷರದ ಹೆಸರಿಡಬೇಕು ಎಂದು ನಿರ್ಧರಿಸಿದ್ದೇವೆ. ಯಾವುದೇ ಫ್ಯಾನ್ಸಿ ಹೆಸರನ್ನು ಬಳಸದಿರಲು ನಾವು ನಿರ್ಧರಿಸಿದ್ದೇವೆ. ಅಯೋಧ್ಯೆಯಲ್ಲಿ 12.20ಕ್ಕೆ ಪೂಜೆ ನಡೆಯಿತು. ಅದೇ ಸಮಯದಲ್ಲಿ ನಾವು ನಮ್ಮ ಮಕ್ಕಳಿಗೆ ನಾಮಕರಣ ಮಾಡಿದ್ದೇವೆ.

Dhruva Sarja Latest News Update
Image Credit: News 18

ನನ್ನ ಹೆಂಡತಿ ಮತ್ತು ನಾನು ಹೆಸರಿನ ಆಯ್ಕೆಯ ಬಗ್ಗೆ ಸಾಕಷ್ಟು ಯೋಚಿಸಿದೆವು. ಒತ್ತಕ್ಷರದಲ್ಲಿ ಹೆಸರು ಇರಬೇಕು, ಹೆಸರಿನಲ್ಲಿ ಶಕ್ತಿ ಇರಬೇಕು ಎಂಬುದು ನಮ್ಮ ಕಲ್ಪನೆಯಾಗಿತ್ತು. ಮಗಳಿಗೆ ರುದ್ರಾಕ್ಷಿ ಸರ್ಜಾ, ಮಗನಿಗೆ ಹಯಗ್ರೀವ ಎಂದು ಹೆಸರಿಟ್ಟಿದ್ದೇವೆ. ಪಂಚಮುಖಿ ಆಂಜನೇಯನ ಅವತಾರಗಳಲ್ಲಿ ಒಂದಾಗಿದೆ. ಈ ಹೆಸರು ಫಿಕ್ಸ್ ಆದ ನಂತರವೂ ಕೆಲವು ಹೆಸರುಗಳನ್ನು ಹುಡುಕಿದೆವು, ಆದರೆ ಈ ಹೆಸರಿನಷ್ಟು ಉತ್ತಮವಾದದ್ದು ಯಾವುದೂ ಕಾಣಲಿಲ್ಲ. ಅಯೋಧ್ಯೆಯಂತೆಯೇ ಇಲ್ಲಿಯೂ ಅದೇ ಸಮಯಕ್ಕೆ ಪೂಜೆ ಮುಕ್ತಾಯಗೊಂಡಿದ್ದು ನನಗೆ ಸಂತಸ ತಂದಿದೆ. ಆದಷ್ಟು ಬೇಗ ಕುಟುಂಬ ಸಮೇತ ಅಯೋಧ್ಯೆಗೆ ಭೇಟಿ ನೀಡಲಿದ್ದೇವೆ ಎಂದು ಧ್ರುವ ಸರ್ಜಾ ಹೇಳಿದ್ದಾರೆ.

Join Nadunudi News WhatsApp Group

Join Nadunudi News WhatsApp Group