Darshan Case: ದರ್ಶನ್ ಅವರನ್ನ ನೋಡಲು ಬಂದ ಈ ಮಂಗಳಮುಖಿ ಯಾರು…? ಸಹಾಯ ನೆನೆದ ಮಂಗಳಮುಖಿ.

ದರ್ಶನ್ ಅವರನ್ನ ನೋಡಲು ಬಂದ ಈ ಮಂಗಳಮುಖಿ ಯಾರು...?

Darshan Case New Update: ನಟ ದರ್ಶನ್ ಸದ್ಯ ಜೈಲು ಸೇರಿದ್ದಾರೆ. ಹದಿಮೂರು ವರ್ಷಗಳ ಬಳಿಕ ಇದೀಗ ಮತ್ತೆ ದರ್ಶನ್ ಜೈಲಿನಲ್ಲಿ ಕಂಬಿ ಎಣಿಸುತ್ತಿದ್ದಾರೆ. ರೇಣುಕಸ್ವಾಮಿ ಕೊಲೆ ಆರೋಪದಲ್ಲಿ ಬಂಧಿತರಾಗಿರುವ ಎಲ್ಲ 17 ಆರೋಪಿಗಳು ಕೂಡ ಸದ್ಯ ಜೈಲುವಾಸದಲ್ಲಿದ್ದಾರೆ. ಸದ್ಯ ಪ್ರಕರಣದ ತನಿಖೆ ಕೊನೆಯ ಹಂತವನ್ನು ತಲುಪುತ್ತಿದೆ.

ಸದ್ಯ ಜೈಲಿನಲ್ಲಿರುವ ದರ್ಶನ್ ಅವರನ್ನು ನೋಡಲು ಒಂದಿಷ್ಟು ಜನ ಆಗಮಿಸುತ್ತಿದ್ದಾರೆ. ಇನ್ನು ದರ್ಶನ್ ಅವರನ್ನು ನೋಡಲು ಒಬ್ಬರು ಮಂಗಳ ಮುಖಿ ಬಂದಿದ್ದಾರೆ ಎನ್ನುವ ಬಗ್ಗೆ ಮಾಹಿತಿ ಲಭಿಸಿದೆ. ಅಷ್ಟಕ್ಕೂ ದರ್ಶನ್ ಅವರನ್ನು ನೋಡಲು ಬಂದ ಈ ಮಂಗಳಮುಖಿ ಯಾರು…? ಎನ್ನುವ ಬಗ್ಗೆ ಸದ್ಯ ಪ್ರಶ್ನೆ ಹುಟ್ಟುತ್ತಿದೆ. ದರ್ಶನ್ ಅವರನ್ನ ನೋಡಲು ಬಂದ ಈ ಮಂಗಳಮುಖಿ ಯಾರು…? ಎನ್ನುವ ಬಗ್ಗೆ ಈ ಲೇಖನದಲ್ಲಿ ಒಂದಿಷ್ಟು ಮಾಹಿತಿ ನೀಡಲಿದ್ದೇವೆ.

Transgender Nakshathra came to see darshan
Image Credit: News 18

ದರ್ಶನ್ ಅವರನ್ನ ನೋಡಲು ಬಂದ ಈ ಮಂಗಳಮುಖಿ ಯಾರು…?
ಆಶ್ರಮದ ಟ್ರಸ್ಟಿ ನಕ್ಷತ್ರ ಜೈಲಿನ ಬಳಿ ದರ್ಶನ್ ಅವರನ್ನು ನೋಡಲು ಬಂದಿದ್ದಾರೆ. ಪರಪ್ಪನ ಅಗ್ರಹಾರಕ್ಕೆ ಬಂದು ದರ್ಶನ್ ನೋಡಲು ಬಂದಿರುವುದಾಗಿ ಹೇಳಿದ್ದಾರೆ. ನಾಗರಾಜ್ ಅವರನ್ನು ಭೇಟಿ ಮಾಡಲು ಮಂಗಳಮುಖಿ ನಕ್ಷತ್ರ ಜೈಲು ಬಳಿ ಬಂದಿದ್ದಾರೆ. ದರ್ಶನ್ ಆಪ್ತ ಹಾಗೂ ಆರೋಪಿ ನಾಗರಾಜ್ ಅವರನ್ನು ಭೇಟಿ ಮಾಡಲು ನಮ್ಮನೆ ಸುಮ್ಮನೆ ಟ್ರಸ್ಟ್ ನಕ್ಷತ್ರ ಬಂದಿದ್ದಾರೆ.

ಸಹಾಯ ನೆನೆದ ಮಂಗಳಮುಖಿ
ಆಶ್ರಮ ಕಟ್ಟಡ ನಿರ್ಮಾಣಕ್ಕೆ ನಟ ದರ್ಶನ್ ಆರ್ಥಿಕ ನೆರವು ನೀಡಿದ್ದಾರೆ. ದರ್ಶನ್ ತಪ್ಪು ಮಾಡಿದ್ದರೆ ಶಿಕ್ಷೆಯಾಗಬೇಕು. ಅವರು ನಮಗೆ ಅನ್ನ ನೀಡಿದ್ದಾರೆ ಆದ್ದರಿಂದ ನಾವು ಭೇಟಿ ಮಾಡಲು ಬಂದಿದ್ದೇವೆ. ನಮ್ಮೋರು ಅವರ ಅನ್ನ ತಿಂದಿದ್ದೇವೆ, ಅದರ ನಿಯತ್ತು ನನಗಿದೆ. ರೇಷನ್ ಯಿಂದ ಹಿಡಿದು ನಮಗೆ ಕಷ್ಟ ಇದ್ದ ಟೈಮ್ ನಲ್ಲಿ ಅವರು ನಮ್ಮ ಜೊತೆ ನಿಂತಿದ್ದರು. ತಪ್ಪು ಮಾಡಿದವರಿಗೆ ಕಾನೂನು ರೀತಿಯಲ್ಲಿ ಶಿಕ್ಷೆಯಾಗಲಿ . ಯಾವತ್ತೂ ಯಾರ ಮನೆಯಲ್ಲಿ ಅನ್ನ ತಿಂದರು ಮರೆಯಬಾರದು ಎಂದು ನಕ್ಷತ್ರ ಹೇಳಿದ್ದಾರೆ.

Nakshatra to meet darshan in jail
Image Credit: Oneindia

Join Nadunudi News WhatsApp Group

Join Nadunudi News WhatsApp Group