Kisan Ashirwad: ಸ್ವಂತ ಭೂಮಿ ಇರುವ ಈ ರೈತರಿಗೆ ಸಿಗಲಿದೆ ಮಾಸಿಕವಾಗಿ 25000 ರೂ, ಸರ್ಕಾರದ ಮಹತ್ವದ ನಿರ್ಧಾರ
ಕೃಷಿ ಭೂಮಿ ಇದ್ದವರಿಗೆ ಸಿಗಲಿದೆ ಮಾಸಿಕ 25000 ರೂಪಾಯಿ.
New Scheme Farmers: ದೇಶದಲ್ಲಿ ರೈತರಿಗಾಗಿ ವಿವಿಧ ಯೋಜನೆಗಳನ್ನು ಜಾರಿ ಮಾಡಲಾಗುತ್ತದೆ. ಕೇಂದ್ರ ಮತ್ತು ರಾಜ್ಯ ಸರ್ಕಾರ ರೈತರ ಅಭಿವೃದ್ದಿಗಾಗಿ ಈಗಾಗಲೇ ಸಾಕಷ್ಟು ಕಲ್ಯಾಣ ಯೋಜನೆಗಳನ್ನು ಪರಿಚಯಿಸಿದೆ. ಎಲ್ಲ ಅರ್ಹ ರೈತರು ಯೋಜನೆಗಳ ಲಾಭವನ್ನು ಪಡೆಯುತ್ತಿದ್ದಾರೆ. ಇದೀಗ ರಾಜ್ಯ ಸರ್ಕಾರ ಕೃಷಿ ಭೂಮಿ ಇದ್ದವರಿಗೆ ಬಂಪರ್ ಯೋಜನೆಯನ್ನು ಪರಿಚಯಿಸಿದೆ.
ಈ ಯೋಜನೆಯ ಮೂಲಕ ರೈತರು ಮಾಸಿಕ ಆದಾಯವನ್ನು ಪಡೆಯಲು ಸಾಧ್ಯವಾಗುತ್ತದೆ. ಇದೀಗ ನಾವು ರಾಜ್ಯ ಸರ್ಕಾರ ರೈತರಿಗಾಗಿ ಪರಿಚಯಿಸಿರುವ ಯೋಜನೆಯ ಬಗ್ಗೆ ವಿವರ ತಿಳಿಯೋಣ. ಕೃಷಿ ಭೂಮಿ ಹೊಂದಿರುವ ಯಾವ ರೈತರು ಸಹಾಯಧನವನ್ನು ಪಡೆಯಲು ಸಾಧ್ಯವಾಗುತ್ತದೆ ಎನ್ನುವ ಬಗ್ಗೆ ಮಾಹಿತಿ ಇಲ್ಲಿದೆ.
![Agricultural Land](https://nadunudi.in/wp-content/uploads/2024/02/Agricultural-Land.png)
ಕೃಷಿ ಭೂಮಿ ಇದ್ದವರಿಗೆ ಸಿಗಲಿದೆ ಮಾಸಿಕ 25000 ರೂ.
5 ಎಕರೆ ಜಮೀನು ಹೊಂದಿರುವ ರೈತರಿಗೆ ವಾರ್ಷಿಕ 25 ಸಾವಿರ ರೂ. ಗಳನ್ನು ನೀಡಲಾಗುವುದು ಮತ್ತು ಈ ಮೊತ್ತವನ್ನು ರೈತರ ಬ್ಯಾಂಕ್ ನಲ್ಲಿ ಠೇವಣಿ ಮಾಡಲಾಗುತ್ತದೆ. ಒಬ್ಬ ರೈತ 5 ಎಕರೆ ಜಮೀನು ಹೊಂದಿದ್ದರೆ ಸರಕಾರ ವಾರ್ಷಿಕ 25 ಸಾವಿರ ರೂ. ನೀಡುತ್ತಿದೆ. 5 ಎಕರೆ ಜಮೀನು ಹೊಂದಿರುವವರಿಗೆ ಕೇಂದ್ರ ಸರ್ಕಾರದಿಂದ 6,000 ರೂ. ರೈತರಿಗೆ ಸರ್ಕಾರದಿಂದ ವಾರ್ಷಿಕ 31,000 ರೂ. ನೀಡುತ್ತದೆ. ಜಾರ್ಖಂಡ್ ರಾಜ್ಯದ ನಿವಾಸಿಗಳಿಗೆ ಮಾಸಿಕ 25000 ರೂ. ನೀಡಲಾಗುತ್ತದೆ.
ಯಾವ ರೈತರು ಎಷ್ಟು ಲಾಭವನ್ನು ಪಡೆಯಬಹುದು..?
•ಕಿಸಾನ್ ಆಶೀರ್ವಾದ ಯೋಜನೆಯು ರೈತರಿಗೆ ವಾರ್ಷಿಕವಾಗಿ ರೂ. 5000 ರಿಂದ ರೂ. 25000 ನೀಡುತ್ತದೆ.
•ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯೊಂದಿಗೆ ರೂ. 11000 ರಿಂದ ರೂ. 31000 ಪಡೆಯಬಹುದು.
•ಇನ್ನು 2 ಎಕರೆ ಜಮೀನು ಹೊಂದಿರುವ ರೈತರಿಗೆ 5000 ಮತ್ತು 10000 ರೂ. ನೀಡಲಾಗುತ್ತದೆ.
•ಒಂದು ಎಕರೆ ಜಮೀನು ಹೊಂದಿರುವ ರೈತರಿಗೆ 15000 ರೂ. ಹಾಗೂ 4 ಎಕರೆ ಜಮೀನು ಹೊಂದಿರುವ ರೈತರಿಗೆ 20000 ರೂ. ನೀಡಲಾಗುತ್ತದೆ.
![New Scheme Farmers](https://nadunudi.in/wp-content/uploads/2024/02/New-Scheme-Farmers.png)
ಈ ದಾಖಲೆ ಇದ್ದರೆ ಮಾತ್ರ ಅರ್ಜಿ ಸಲ್ಲಿಕೆ ಸಾಧ್ಯ
*ಆಧಾರ್ ಕಾರ್ಡ್
*ಗುರುತಿನ ಚೀಟಿ
*ಪಡಿತರ ಚೀಟಿ
*ಕಿಸಾನ್ ಕಾರ್ಡ್
*ಬ್ಯಾಂಕ್ ಪಾಸ್ ಪುಸ್ತಕ (ಆಧಾರ್ ಕಾರ್ಡ್ಗೆ ಲಿಂಕ್ ಮಾಡಬೇಕು)
*ಪಾಸ್ಪೋರ್ಟ್ ಗಾತ್ರದ ಫೋಟೋ
*ಮೊಬೈಲ್ ನಂ