Suraksha Bima Yojana: 20 ರೂಪಾಯಿಯಿಂದ 2 ಲಕ್ಷ ರೂಪಾಯಿ ಲಾಭ, ಕೇಂದ್ರದ ಸುರಕ್ಷಾ ಬಿಮಾ ಯೋಜನೆ.
Suraksha Bima Yojana: ಕೇಂದ್ರ ಸರ್ಕಾರ ಜನರಿಗೆ ಹಲವು ರೀತಿಯ ಯೋಜನೆಗಳನ್ನು ನೀಡುತ್ತಿದೆ. ಇವುಗಳಲ್ಲಿ ಸಾಮಾಜಿಕ ಭದ್ರತೆಗೆ ಸಂಭಂದಿಸಿದ ಯೋಜನೆಗಳು ಸೇರಿವೆ. ಇದೀಗ ಪ್ರಧಾನ ಮಂತ್ರಿ ಬಿಮಾ ಯೋಜನೆ (Suraksha Bima Yojana) ಬಗ್ಗೆ ಈಗ ಸುದ್ದಿಯೊಂದು ಹೊರ ಬಿದ್ದಿದೆ.
![Rs 20 to Rs 2 lakh benefit, Central Insurance Scheme.](https://nadunudi.in/wp-content/uploads/2023/01/bima-suraksha-yojane.png)
ಪ್ರಧಾನ ಮಂತ್ರಿ ಬಿಮಾ ಯೋಜನೆ
ಪ್ರಧಾನ್ ಮಂತ್ರಿ ಬಿಮಾ ಯೋಜನೆ ಸೇರುವ ಮೂಲಕ 20 ರೂಪಾಯಿಯೊಂದಿಗೆ 2 ಲಕ್ಷ ಲಾಭ ಪಡೆಯಬಹುದು. ಈ ಯೋಜನೆಯಿಂದ ದೇಶದ ಬಡ ಜನರಿಗೆ ಸಾಕಷ್ಟು ಅನುಕೂಲವಾಗಲಿದೆ ಎಂದು ಹೇಳಬಹುದು. ಕನಿಷ್ಠ 20 ರೂಪಾಯಿ ಪ್ರೀಮಿಯಂ ಕಟ್ಟಿದರೆ 3 ಲಕ್ಷದವರೆಗೂ ವಿಮಾ ರಕ್ಷಣೆ ಸಿಗಲಿದೆ.
![If you invest in Pradhan Mantri Bima Suraksha Yojana, you will get a lot of benefits](https://nadunudi.in/wp-content/uploads/2023/01/pradhana-mantri-bima-suraksha-yojane.jpg)
ಬ್ಯಾಂಕ್ ನಲ್ಲಿ ಫಾರ್ಮ್ ಭರ್ತಿ ಮಾಡುವ ಮೂಲಕ ಜೀವ ಈ ಪಾಲಿಸಿಯನ್ನು ತೆಗೆದುಕೊಳ್ಳಬಹುದು
ಪ್ರಧಾನ ಮಂತ್ರಿ ಬಿಮಾ ಸುರಕ್ಷಾ ಯೋಜನೆ ಪಡೆಯಲು ನೀವು ಹೆಚ್ಚು ಕಷ್ಟಪಡಬೇಕಾಗಿಲ್ಲ. ನೀವು ಬ್ಯಾಂಕ್ ಖಾತೆ ಹೊಂದಿರುವ ಶಾಖೆಗೆ ಹೋಗಿ ಫಾರ್ಮ್ ಅನ್ನು ಭಾರ್ತಿ ಮಾಡಿ. ಇಲ್ಲದಿದ್ದರೆ ನೀವು ವಿಮಾ ಏಜೇಂಟ್ ಗಳ ಮೂಲಕವೂ ಈ ಪಾಲಿಸಿಯನ್ನು ತೆಗೆದುಕೊಳ್ಳಬಹುದು.
ಪ್ರಧಾನ ಮಂತ್ರಿ ಸುರಕ್ಷಾ ಬಿಮಾ ಯೋಜನೆಗೆ ಸೇರುವವರು ವರ್ಷಕ್ಕೆ 20 ಪ್ರೀಮಿಯಂ ಪಾವತಿಸಬೇಕು. ಯೋಜನೆಯು ನಿಮ್ಮ ಬ್ಯಾಂಕ್ ಖಾತೆಗೆ ಲಿಂಕ್ ಆಗಿದೆ. ಆದ್ದರಿಂದ ಬ್ಯಾಂಕ್ ಖಾತೆಯಿಂದ 20 ರೂಪಾಯಿ ಕಡಿತಗೊಳಿಸಲಾಗುತ್ತದೆ.
![If you invest in Pradhan Mantri Suraksha Yojana, you will get a profit of 20 lakh rupees](https://nadunudi.in/wp-content/uploads/2023/01/bima-suraksha-yojana-details.jpg)
ಬ್ಯಾಂಕ್ ಖಾತೆಯಿಂದ 20 ರೂಪಾಯಿ ಸ್ವಯಂಚಾಲಿತವಾಗಿ ಕಡಿತಗೊಳ್ಳುತ್ತದೆ. ಹಾಗಾಗಿ ಬ್ಯಾಂಕ್ ಕಾತೆಯಲ್ಲಿ ಹಣವಿದೆ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು. ಈ ಹಣವನ್ನು ಮೇ 31 ರಂದು ಬ್ಯಾಂಕ್ ಖಾತೆಯಿಂದ ಕಡಿತಗಳಿಸಬಹುದು. ಇದು ಪ್ರತಿ ವರ್ಷ ನಡೆಯುತ್ತದೆ.
ಪ್ರಧಾನ ಮಂತ್ರಿ ಬಿಮಾ ಯೋಜನೆಯ ಪ್ರಯೋಜನಗಳು
ಪ್ರೀಮಿಯಂ ಪಾವತಿಸಿದರೆ ಮಾತ್ರ ಪಾಲಿಸಿಯನ್ನು ನವೀಕರಿಸಲಾಗುತ್ತದೆ. ಇಲ್ಲದಿದ್ದರೆ ಪಾಲಿಸಿಯನ್ನು ತೆಗೆದುಕೊಳ್ಳಬಹುದು. ಈಗ ಪಾಲಿಸಿದಾರರಿಗೆ ಹಲವು ಪ್ರಯೋಜನಗಳು ಸಿಗುತ್ತದೆ.
![If you invest in Bima Suraksha Yojana, there is a lot of security](https://nadunudi.in/wp-content/uploads/2023/01/bima-suraksha-scheme.jpg)
ಪಾಲಿಸಿದಾರರಿಗೆ ಆಕಸ್ಮಿಕ ಮರಣದ ಸಂದರ್ಭದಲ್ಲಿ ಇಡೀ ಕುಟುಂಬಕ್ಕೆ 2 ಲಕ್ಷ ವಿಮೆ ನೀಡಲಾಗುವುದು. ಈಗಲೇ ಈ ಯೋಜನೆಗೆ ಸೇರಿಕೊಳ್ಳಿ. ಯಾವಾಗ ಏನಾಗುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಹಾಗಾಗಿಯೇ ಈ ಪಾಲಿಸಿಯಿಂದ ಕುಟುಂಬಕ್ಕೆ ಆರ್ಥಿಕ ಭದ್ರತೆ ಸಿಗುತ್ತದೆ.