Raita Siri 2024: ಈ ರೈತರ ಖಾತೆಗೆ ನೇರವಾಗಿ ಬರಲಿದೆ 10 ಸಾವಿರ ರೂ, ಸಿದ್ದರಾಮಯ್ಯ ಸರ್ಕಾರದ ಘೋಷಣೆ.

ರಾಜ್ಯದ ರೈತರ ಖಾತೆಗೆ ನೇರವಾಗಿ ಜಮಾ ಆಗಲಿದೆ 10000 ರೂ, ಹೊಸ ಯೋಜನೆ ಜಾರಿ

Raita Siri Yojana Details: ಸದ್ಯ ರಾಜ್ಯದಲ್ಲಿ ರೈತರಿಗಾಗಿ ವಿಶೇಷ ಯೋಜನೆಗಳು ತಲೆಎತ್ತಿಕೊಳ್ಳುತ್ತಿವೆ. ರೈತರಿಗೆ ರಾಜ್ಯ ಮತ್ತು ಕೇಂದ್ರ ಸರ್ಕಾರ ಹೆಚ್ಚಿನ ಮಹತ್ವ ನೀಡುತ್ತಿದೆ ಎನ್ನಬಹುದು. ರೈತರ ಕೃಷಿ ಬೆಳವಣಿಗೆಗೆ ಸಹಾಯವಾಗಲು ಈಗಾಗಲೇ ರಾಜ್ಯದಲ್ಲಿ ನಾನಾ ಯೋಜನೆಗಳು ಜಾರಿಯಾಗಿವೆ.

ಇದೀಗ ಸರ್ಕಾರ ಸಿರಿದಾನ್ಯ ಬೆಳೆಯನ್ನು ಪ್ರೋತ್ಸಾಹಿಸಲು ಹೊಸ ಯೋಜನೆನ್ನು ಜಾರಿಗೊಳಿಸಿದೆ. ಈ ಯೋಜನೆಯಡಿ ರೈತರು ಸಿರಿದಾನ್ಯ ಬೆಳವಣಿಗೆಗೆ ಬೇಕಾಗುವ ಅಗತ್ಯ ವಸ್ತುಗಳ ಪೂರೈಕೆಗೆ ಹಣಕಾಸಿನ ನೆರವನ್ನು ಪಡೆಯಬಹುದು. ಈ ಯೋಜನೆಯ ಬಗ್ಗೆ ಸಂಪೂರ್ಣ ವಿವರ ಇಲ್ಲಿದೆ ನೋಡಿ.

Karnataka Raita Siri Yojana
Image Credit: Vijayaprabha

ಈ ರೈತರ ಖಾತೆಗೆ ನೇರವಾಗಿ ಬರಲಿದೆ 10 ಸಾವಿರ ರೂ
ರಾಜ್ಯ ಸರ್ಕಾರ ಇದೀಗ ರೈತರಿಗಾಗಿ “ರೈತ ಸಿರಿ” ಯೋಜನೆಯನ್ನು ಜಾರಿ ಮಾಡಿದೆ. ರಾಜ್ಯದಲ್ಲಿ ಸಾವಯವ ಕೃಷಿ ಮತ್ತು ರಾಗಿ ಬೆಳೆಯುವವರನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ರಾಜ್ಯ ಸರ್ಕಾರ ರೈತ ಸಿರಿ ಯೋಜನೆಯನ್ನು ಜಾರಿಗೊಳಿಸಿದೆ.

ರಾಗಿ ಬೆಳೆಯುವ ರೈತರ ಪ್ರತಿ ಎಕರೆಗೆ 10,000 ರೂ. ಪ್ರೋತ್ಸಾಹ ಧನ ನೀಡಲು ರಾಜ್ಯ ಸರ್ಕಾರ ಮುಂದಾಗಿದೆ. ಈ ಯೋಜನೆಯನ್ನು ರಾಜ್ಯ ಸರ್ಕಾರ 2019 -20 ರ ಬಜೆಟ್ ನಲ್ಲಿ ಘೋಷಣೆ ಮಾಡಿದೆ. ಆದರೆ ಈ ವೇಳೆ ಅನುಷ್ಠಾನಕ್ಕೆ ತರಲು ಸಾಧ್ಯವಾಗದ ಕಾರಣ 2024 -25 ಬಜೆಟ್ ನಲ್ಲಿ ಘೋಷಿಸಿದೆ. ನಾವೀಗ ಈ ಯೋಜನೆಯಲ್ಲಿ ಲಾಭ ಪಡೆಯಲು ಏನೆಲ್ಲಾ ಅರ್ಹತೆಗಳಿರಬೇಕು ಎನ್ನುವ ಬಗ್ಗೆ ಮಾಹಿತಿ ತಿಳಿಯೋಣ.

Raita Siri Yojana Details
Image Credit: Kannada News

ರೈತ ಸಿರಿ ಯೋಜನೆಯ ಲಾಭ ಪಡೆಯಲು ಯಾರು ಅರ್ಹರು
•ಕರ್ನಾಟಕದ ಖಾಯಂ ನಿವಾಸಿಗಳಾಗಿರಬೇಕು.

Join Nadunudi News WhatsApp Group

•ಮುಖ್ಯವಾಗಿ ಅರ್ಜಿದಾರರು ರೈತರಾಗಿದ್ದು, ಅವರ ಹೆಸರಿನಲ್ಲಿಯೇ ಜಮೀನು ಇರಬೇಕು.

•2 ಹೆಕ್ಟೇರ್‌ಗಿಂತ ಕಡಿಮೆ ಭೂಮಿ ಹೊಂದಿರುವವರು ಈ ಯೋಜನೆಯ ಲಾಭವನ್ನು ಪಡೆಯಬಹುದು.

•ರೈತರು ಕನಿಷ್ಠ ಒಂದು ಹೆಕ್ಟೇರ್ ಭೂಮಿ ಹೊಂದಿರಬೇಕು.

ಅರ್ಜಿ ಸಲ್ಲಿಕೆಗೆ ಬೇಕಾಗುವ ದಾಖಲೆಗಳಾವುವು…?
•ಆಧಾರ್ ಕಾರ್ಡ್

•ಪ್ರಾಪರ್ಟಿ ಡಾಕ್ಯುಮೆಂಟ್

•ಶಾಶ್ವತ ನಿವಾಸ ಪ್ರಮಾಣಪತ್ರ

•ವಿಳಾಸ ಪುರಾವೆ

•ಪಡಿತರ ಚೀಟಿ

•ಬ್ಯಾಂಕ್ ಪಾಸ್ ಬುಕ್

•ಮೊಬೈಲ್ ಸಂಖ್ಯೆ

•ಅರ್ಜಿದಾರರ ಭಾವಚಿತ್ರ

Raita Siri Yojana
Image Credit: PM Modi Yojanaye

Join Nadunudi News WhatsApp Group