Ration Card Distribution: ಕೇಂದ್ರ ಸರ್ಕಾರವು ಬಡವರಿಗೆ ಸಹಾಯವಾಗಲು ಪಡಿತರ ಚೀಟಿಯನ್ನು (Ration Card) ನೀಡಿದೆ. ಇದೀಗ ಜನ ಸಾಮಾನ್ಯರು ಪಡಿತರ ಚೀಟಿಯ ಉಪಯೋಗವನ್ನು ಪಡೆದುಕೊಳ್ಳುತ್ತಿದ್ದಾರೆ. ಇದೀಗ ಜನರಿಗೆ ಆದ್ಯತಾ ಪಡಿತರ ಚೀಟಿಯನ್ನು ನೀಡಲಿದ್ದಾರೆ.
ಆದ್ಯತಾ ಪಡಿತರ ಚೀಟಿ ವಿತರಣೆಗೆ ಆದೇಶ
ರಾಜ್ಯದಲ್ಲಿರುವ ಕುಟುಂಬಗಳಿಗೆ ಆದ್ಯತಾ ಪಡಿತರ ಚೀಟಿಯನ್ನು ನೀಡುವ ಆದೇಶವನ್ನು ಹೊರಡಿಸಿದೆ. ರಾಜ್ಯದಲ್ಲಿ 1,55,927 ಕುಟುಂಬಕ್ಕೆ ಪಡಿತರ ಚೀಟಿಯನ್ನು ನೀಡುವ ಆದೇಶವನ್ನು ಹೊರಡಿಸಿದೆ.
ಹಿರಿತನದ ಆದರದ ಮೇಲೆ ಪಡಿತರ ಚೀಟಿ ವಿತರಣೆ
ರಾಜ್ಯದಲ್ಲಿ ಹಲವು ವರ್ಷಗಳಿಂದ ಬಡ ಕುಟುಂಬದವರು ಆದ್ಯತಾ ಪಡಿತರ ಚೀಟಿಯನ್ನು ನೀಡುವಂತೆ ಅರ್ಜಿಯನ್ನು ಕೋರಿದ್ದರು. ಇದೀಗ ಆದ್ಯತಾ ಪಡಿತರ ಚೀಟಿ ವಿತರಣೆಗೆ ರಾಜ್ಯ ಸರ್ಕಾರ ಒಪ್ಪಿಗೆ ನೀಡಿದೆ.
ರಾಜ್ಯದಲ್ಲಿ ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ ಅನ್ವಯ 2022 ಆಗಸ್ಟ್ 25 ರ ವರೆಗೂ ಆದ್ಯತಾ ಪಡಿತರ ಚೀಟಿಗಾಗಿ ರಾಜ್ಯದಾದ್ಯಂತ ಅರ್ಜಿ ಸಲ್ಲಿಸಿರುವ ಬರೋಬ್ಬರಿ 2,73,662 ಅರ್ಜಿಗಳ ಪೈಕಿ ವಿಲೇವಾರಿಗೆ ಅರ್ಹ ಇರುವ ಒಟ್ಟು 1,55,927 ಮಂದಿ ಅರ್ಜಿದಾರರಿಗೆ ಹೊಸದಾಗಿ ಆದ್ಯತಾ ಪಡಿತರ ಚೀಟಿ ವಿತರಿಸಲು ಸರ್ಕಾರ ಎಲ್ಲ ಜಿಲ್ಲೆಗಳಿಗೆ ಆದೇಶಿಸಿದೆ.
ಯಾರಿಗೆ ಸಿಗಲಿದೆ ಆದ್ಯತಾ ಪಡಿತರ ಚೀಟಿ
ಅರ್ಜಿಗಳ ವಿಲೇವಾರಿ ಸಂದರ್ಭದಲ್ಲಿ ಹಿರಿತನದ ಆದರದ ಮೇಲೆ 2017-18 ಸಾಲಿನಲ್ಲಿ ಸಲ್ಲಿಕೆ ಆಗಿರುವ ಅರ್ಜಿಗಳ ವಿಲೇವಾಗಿಕೆಗೆ ಮೊದಲ ಆದ್ಯತೆ ನೀಡುವಂನಂತೆ ಸರ್ಕಾರ ಸೂಚಿಸಿದೆ. ಅದರ ಜೊತೆಗೆ ಅನರ್ಹರಿಗೆ ಯಾವುದೇ ರೀತಿಯಲ್ಲು ಆದ್ಯತಾ ಕಾರ್ಡ್ ವಿತರಿಸಬಾರದೆಂದು ಆದೇಶ ನೀಡಿದೆ.
ಪ್ರಥಮ ಆದ್ಯತೆಯಾಗಿ ತೀವ್ರ ಆಹಾರ ಅಭದ್ರತೆಗೆ ಒಳಗಾಗಿರುವ ಕುಟುಂಬಗಳು ಹಾಗೂ ಇದುವರೆಗೆ ಯಾವುದೇ ಪಡಿತರ ಚೀಟಿಯನ್ನು ಹೊಂದಿಲ್ಲದ ಕುಟುಂಬದವರಿಗೆ ಆದ್ಯತಾ ಕಾರ್ಡ್ ನೀಡುವಂತೆ ಸೂಚಿಸಿದೆ.
ಎರಡನೇ ಆದ್ಯತೆಯಾಗಿ ಮೂಲ ಬುಡಕಟ್ಟು, ಅಲೆಮಾದರಿ ಕುಟುಂಬಗಳು, ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ವರ್ಗಗಳ ಹಾಗೂ ಕಾಡಿನಲ್ಲಿ ವಾಸ ಮಾಡುವ ಕುಟುಂಬಗಳಿಗೆ ಆದ್ಯತಾ ಪಡಿತರ ಚೀಟಿ ವಿರತರಿಸುವಂತೆ ಸರ್ಕಾರದ ಆಹಾರ ನಾಗರೀಕ ಸರಬರಾಜು ಹಾಗೂ ಗ್ರಾಹಕ ವ್ಯವಹಾರಗಳ ಇಲಾಖೆ ಆಯುಕ್ತರು ಆದೇಶಿಸಿದ್ದಾರೆ.
ಈಗಾಗಲೇ ಆದ್ಯತೆತರ ಪಡಿತರ ಚೀಟಿಯನ್ನು ಹೊಂದಿದ್ದು, ಅದ್ಯಾತಹ ಪಡಿತರ ಚೀಟಿಗೆ ಅರ್ಜಿ ಹಾಕಿರುವ ಅರ್ಜಿಗಳನ್ನು ಪರಿಗಣಿಸ ಬಾರದೆಂದು ಆದೇಶಿಸಿದೆ.
ಯಾವ ಜಿಲ್ಲೆಗಳಿಗೆ ಆದ್ಯತಾ ಪಡಿತರ ಚೀಟಿ ಸಿಗಲಿದೆ
ಕಲಬುರಗಿ ಜಿಲ್ಲೆಯಲ್ಲಿ 15,432 , ಬೆಂಗಳೂರು ನಗರದಲ್ಲಿ 13,532 , ವಿಜಯಪುರದಲ್ಲಿ 10,980 ಬೆಳಗಾವಿಯಲ್ಲಿ 10,874 ಅರ್ಜಿದಾರರಿಗೆ ಆದ್ಯತಾ ಪಡಿತರ ಚೀಟಿ ಸಿಗಲಿದೆ.
ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಇಲ್ಲಿಯವರೆಗೂ ಒಟ್ಟು 4,060 ಅರ್ಜಿಗಳು ಆದ್ಯತಾ ಪಡಿತರ ಚೀಟಿಗಾಗಿ ಅರ್ಜಿ ಸಲ್ಲಿಸಿದು ಆ ಪೈಕಿ 2,042 ಅರ್ಜಿಗಳ ಸ್ಥಳ ಪರಿಶೀಲಿಸಲು ಆಹಾರ ಇಲಾಖೆ ಅಧಿಕಾರಿಗಳು, ಒಟ್ಟು 1,623 ಅರ್ಜಿಗಳು ಆದ್ಯತಾ ಪಡಿತರ ಚೀಟಿ ವಿತರಿಸಲು ಅರ್ಹ ಎಂದು ಗುರುತಿಸಿವೆ.