Sri Ramachandra Guruji: ಅಪ್ಪು ಆತ್ಮದ ಜೊತೆ ಸಂಭಾಷಣೆ ಮಾಡಿದ ಗುರೂಜಿ…! ಗುರೂಜಿ ಕೇಳಿದ ಮೂರು ಪ್ರಶ್ನೆಗೆ ಅಪ್ಪು ಉತ್ತರವೇನು ಗೊತ್ತಾ..?

ಅಪ್ಪು ಆತ್ಮದ ಜೊತೆ ಸಂಭಾಷಣೆ ಮಾಡಿದ ಗುರೂಜಿ...!

Sri Ramachandra Guruji Conversation With Puneeth Soul: ಕರ್ನಾಟಕ ರತ್ನ ಪುನೀತ್ ರಾಜಕುಮಾರ್ ಅಗಲಿಕೆಯ ನೋವು ಇನ್ನು ಅಭಿಮಾನಿಗಳನ್ನು ಕಾಡುತ್ತಿದೆ. ಅಪ್ಪು ಅಗಲಿ ಮೂರು ವರ್ಷಗಳು ಕಳೆಯುತ್ತಾ ಬಂದರು ಅಭಿಮಾನಿಗಳು ಅವರ ನೆನಪಿನೊಂದಿಗೆ ಇಂದಿಗೂ ಕಣ್ಣೀರಿಡುತ್ತಿದ್ದಾರೆ. ಇನ್ನು ಅಭಿಮಾನಿಗಳು ಅಪ್ಪು ಅವರನ್ನು ನೆನಸಿಕೊಳ್ಳದೆ ಇರುವ ದಿನವೇ ಇಲ್ಲ ಎನ್ನಬಹುದು. ಅಪ್ಪು ಅವರ ದಿಢೀರ್ ಮರಣ ಎಲ್ಲರನ್ನು ಬೆಚ್ಚಿಬೀಳಿಸಿತ್ತು. ಅಪ್ಪು ಅಕಾಲಿಕರ ಮರಣದ ಬಗ್ಗೆ ಅಭಿಮಾನಿಗಳಿಗೆ ಇನ್ನು ಗೊಂದಲಗಳಿವೆ.

ಅಂತಾರಾಷ್ಟ್ರೀಯ ಖ್ಯಾತಿಯ ಆಧ್ಯಾತ್ಮಿಕ ಗುರು ಡಾ.ಶ್ರೀರಾಮಚಂದ್ರ ಗುರೂಜಿ ಅವರು ಇತ್ತೀಚೆಗೆ ರಾಜೇಶ್ ಗೌಡ ಅವರ ಯೂಟ್ಯೂಬ್ ಚಾನೆಲ್‌ ಗೆ ಸಂದರ್ಶನ ನೀಡಿದರು. ಈ ಸಂದರ್ಶನದಲ್ಲಿ ಅವರು ಆತ್ಮಗಳ ಬಗ್ಗೆ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಈ ವೇಳೆ ಪವರ್‌ ಸ್ಟಾರ್ ಪುನೀತ್ ರಾಜ್‌ಕುಮಾರ್ ಅವರ ಆತ್ಮ ಜೊತೆ ಮಾತುಕತೆ ನಡೆಸಿರುವುದಾಗಿ ಹೇಳಿಕೊಂಡಿದ್ದಾರೆ. ಅಪ್ಪು ಆತ್ಮದ ಜೊತೆ ಮಾತನಾಡಿ ಮೂರು ವಿಷಯಗಳ ಬಗ್ಗೆ ಮಾಹಿತಿ ರಿವೀಲ್ ಮಾಡಿದ್ದಾರೆ.

Sri Ramachandra Guruji Conversation With Puneeth Soul
Image Credit: Prajatvkannada

ಅಪ್ಪು ಆತ್ಮದ ಜೊತೆ ಸಂಭಾಷಣೆ ಮಾಡಿದ ಡಾ.ಶ್ರೀರಾಮಚಂದ್ರ ಗುರೂಜಿ…!
ಆರ್.ಜೆ.ರಾಜೇಶ್ ನಡೆಸಿದ ಈ ಸಂದರ್ಶನದಲ್ಲಿ ಡಾ.ಶ್ರೀರಾಮಚಂದ್ರ ಗುರೂಜಿ ಹಲವು ಮಾಹಿತಿಗಳನ್ನು ಹಂಚಿಕೊಂಡಿದ್ದಾರೆ. ಅಪ್ಪು ಆತ್ಮಕ್ಕೆ ಕೇಳಿದ ಮೂರು ಪ್ರಶ್ನೆಗಳನ್ನು ಗುರೂಜಿ ಬಹಿರಂಗಪಡಿಸಿದ್ದಾರೆ. ಅಪ್ಪು ಅವರ ಆತ್ಮದಿಂದ ಉತ್ತರ ಸಿಕ್ಕಿದೆ ಎಂದೂ ಹೇಳಿಕೊಂಡಿದ್ದಾರೆ. ಆತ್ಮ ಸಂವಾದ ಸಾಧ್ಯ, ಅದೊಂದು ತಂತ್ರಜ್ಞಾನ. ಅಧ್ಯಾತ್ಮದಲ್ಲಿ ಗತಜೀವನವನ್ನು ಅರಿಯುವ ತಂತ್ರಜ್ಞಾನ ಇರುವಂತೆಯೇ ಸತ್ತವರೊಂದಿಗೂ ಸಂವಾದವಿದೆ. ಸಾರ್ವಜನಿಕ ವೇದಿಕೆಯಲ್ಲಿ ಅಪ್ಪು ಆತ್ಮದೊಂದಿಗೆ ಮಾತುಕತೆ ನಡೆಸಿಲ್ಲ.

ನನ್ನ ವೈಯಕ್ತಿಕ ಮಾಹಿತಿಗಾಗಿ ನಾನು ಅದನ್ನು ಮಾಡಿದ್ದೇನೆ ಏಕೆಂದರೆ ಅವರ ಅಭಿಮಾನಿಗಳು ಕೋಟಿಗಟ್ಟಲೆ ಇದ್ದಾರೆ. ಎಂದು ಡಾ.ಶ್ರೀರಾಮಚಂದ್ರ ಗುರೂಜಿ ಹೇಳಿಕೊಂಡಿದ್ದಾರೆ. ಅವರು ಸತ್ತ ಕೆಲವು ದಿನಗಳ ನಂತರ ನಾನು ಅದನ್ನು ಮಾಡಿದ್ದೇನೆ, ಇದನ್ನು ಸಾರ್ವಜನಿಕ ವೇದಿಕೆಯಲ್ಲಿ ಮಾಡಿದರೆ, ಅದನ್ನು ತಡೆದುಕೊಳ್ಳುವ ಶಕ್ತಿ ನಮಗಿರಲಿಲ್ಲ. ಏನು…? ಹೇಗೆ…? ಹಲವಾರು ಪ್ರಶ್ನೆಗಳಿವೆ. ನಾನು ಮಾತನಾಡಲು ಒಬ್ಬನೇ ಅಲ್ಲ. ಈಗ ನಮಗೆ ಕರೆಂಟ್ ಹರಿಯಲು ಒಂದು ಮಾಧ್ಯಮ ಬೇಕು. ಇಲ್ಲಿ ಮಾಧ್ಯಮ ಯಾವುದು ವೈಯರ್. ಇಲ್ಲಿ ಒಂದು ಮೀಡಿಯಾ ಬೇಕು ಎಂದು ಡಾ.ಶ್ರೀರಾಮಚಂದ್ರ ಗುರೂಜಿ ಮಾತನಾಡಿದರು.

Sri Ramachandra Guruji
Image Credit: Aumholistic

ಗುರೂಜಿ ಕೇಳಿದ ಮೂರು ಪ್ರಶ್ನೆಗೆ ಅಪ್ಪು ಉತ್ತರವೇನು ಗೊತ್ತಾ..?
ನಾನು ಕೇಳಿದ ಪ್ರಶ್ನೆ ಇಷ್ಟು. ಅಪ್ಪು ಅವರೇ ನಿಮ್ಮ ಸಾವಿನ ಬಗ್ಗೆ ಅನೇಕ ತಪ್ಪು ಕಲ್ಪನೆಗಳಿವೆ, ಇದು ನಿಜವೇ..? ಅದಕ್ಕೆ ಅಪ್ಪು ನಾನು ಹೃದಯ ಸಂಬಂಧಿ ಸಮಸ್ಯೆಯಿಂದ ಸತ್ತಿದ್ದೇನೆ ಎಂದು ಅವರು ಸ್ಪಷ್ಟಪಡಿಸಿದರು. ಎರಡನೆಯದು ನೀವು ಈಗ ಎಲ್ಲಿದ್ದೀರಿ…? ನಾನು ಅಪ್ಪ ಅಮ್ಮನ ಹುಡುಕಾಟದಲ್ಲಿದ್ದೇನೆ ಎನ್ನುವುದು ಅವರ ಉತ್ತರವಾಗಿತ್ತು.

Join Nadunudi News WhatsApp Group

ಮೂರನೇ ಪ್ರಶ್ನೆ ಕೇಳಿದೆ, ಮತ್ತೆ ಹುಟ್ಟಿ ಬರುತ್ತೀರಾ…?, ನಾನು ಇನ್ನೂ ಅದರ ಬಗ್ಗೆ ಯೋಚಿಸಿಲ್ಲ, ನಾನು ಮತ್ತೆ ಹುಟ್ಟಿದರೆ, ನನ್ನ ಮಗಳ ಹೊಟ್ಟೆಯಲ್ಲಿ ನಾನು ಹುಟ್ಟುತ್ತೇನೆ ಎಂದಿದ್ದರು ಅಪ್ಪು. ಇದು ನಾವು ಸಂಭಾಷಣೆಯ ಮೂಲಕ ತಿಳಿದಿದ್ದೇವೆ. ಅಪ್ಪು ಅವರ ಸಾವಿನ ಬಗ್ಗೆ ಸಂಶಯ ವ್ಯಕ್ತಪಡಿಸಿದ್ದಕ್ಕೆ, ನಮ್ಮ ಕುತೂಹಲಕ್ಕೆ, ನಮ್ಮ ಸಂಶೋಧನೆಗಾಗಿ ಇದನ್ನು ಮಾಡಿದ್ದೇವೆ. ಇದನ್ನು ನಾವು ಎಲ್ಲಿಯೂ ಹೇಳಿಕೊಂಡಿಲ್ಲ ಎಂದಿದ್ದಾರೆ ಡಾ.ಶ್ರೀರಾಮಚಂದ್ರ ಗುರೂಜಿ.

Sri Ramachandra Guruji Conversation
Image Credit: Original Source

Join Nadunudi News WhatsApp Group