Suresh Raina: ಈ ಒಂದು ಕಾರಣಕ್ಕೆ ಧೋನಿಯನ್ನು ಕಂಡು ಗಡಗಡ ನಡುಗಿದ ರೈನಾ, ಆದಿನ ಆಗಿದ್ದೇನು ಗೊತ್ತಾ…?

ಈ ಒಂದು ಕಾರಣಕ್ಕೆ ಧೋನಿಯನ್ನು ಕಂಡು ಗಡಗಡ ನಡುಗಿದ ರೈನಾ

Suresh Raina Statement on Dhoni: ಕ್ರಿಕೆಟ್ ದಿಗ್ಗಜರಲ್ಲಿ ಎಂಎಸ್ ಧೋನಿ ಶಾಂತ ಸ್ವಭಾವಕ್ಕೆ ಹೆಸರುವಾಸಿಯಾದ ಆಟಗಾರ ಎನ್ನಬಹುದು. ಪರಿಸ್ಥಿತಿ ಏನೇ ಇರಲಿ, ಮಹಿ ಯಾವಾಗಲೂ ಪಂದ್ಯದಲ್ಲಿ ತಾಳ್ಮೆಯಿಂದ ಇರುತ್ತಾರೆ. ಆದರೆ ನಾಯಕ ಧೋನಿ ಅಭಿಮಾನಿಗಳಿಗೆ ಕೂಲ್ ಆಗಿದ್ದಾರೆ, ಆದರೆ ತಂಡದ ಕೆಲವು ಆಟಗಾರರು ಅವರ ಕೋಪವನ್ನು ನೋಡಿದ್ದಾರೆ.

ಅವರಲ್ಲಿ ಒಬ್ಬರು ಸುರೇಶ್ ರೈನಾ. ಐಪಿಎಲ್ 2014ರಲ್ಲಿ ಡ್ರೆಸ್ಸಿಂಗ್ ರೂಂನಲ್ಲಿ ಮಹಿ ಕೋಪಗೊಂಡ ಘಟನೆಯ ಬಗ್ಗೆ ಇದೀಗ ಮಾಹಿತಿ ಹೊರಬಿದ್ದಿದೆ. ಈ ವೇಳೆ ದೋನಿ ಅವರ ಕೋಪಕ್ಕೆ ಸುರೇಶ್ ರೈನಾ ನಡುಗಿ ಹೋಗಿದ್ದರಂತೆ. ಈ ಬಗ್ಗೆ ಸುರೇಶ್ ರೈನಾ ಸಂಪೂರ್ಣ ಮಾಹಿತಿ ನೀಡಿದ್ದಾರೆ.

Suresh Raina Statement on Dhoni
Image Credit: Khelnow

ಈ ಒಂದು ಕಾರಣಕ್ಕೆ ಧೋನಿಯನ್ನು ಕಂಡು ಗಡಗಡ ನಡುಗಿದ ರೈನಾ
ಐಪಿಎಲ್ 2014 ರಲ್ಲಿ ಪಂಜಾಬ್ ಕ್ವಾಲಿಫೈಯರ್-2 ರಲ್ಲಿ CSK ಅನ್ನು ಎದುರಿಸಿತು. ನಾಯಕ ಧೋನಿ ಟಾಸ್ ಗೆದ್ದು ಪಂಜಾಬ್ ತಂಡವನ್ನು ಮೊದಲು ಬ್ಯಾಟಿಂಗ್ ಮಾಡಲು ಆಹ್ವಾನಿಸಿದರು. ಸೆಹ್ವಾಗ್ ಅವರ ಶತಕ ಮತ್ತು ಮಿಲ್ಲರ್ ಅವರ ಅಬ್ಬರದ ಇನ್ನಿಂಗ್ಸ್‌ ನಿಂದ ಪಂಜಾಬ್ ಸ್ಕೋರ್ ಬೋರ್ಡ್‌ ನಲ್ಲಿ 226 ರನ್‌ ಗಳ ಬೃಹತ್ ಸ್ಕೋರ್ ಅನ್ನು ದಾಖಲಿಸಿತು. ಇದಕ್ಕೆ ಪ್ರತಿಕಾರವಾಗಿ ಸುರೇಶ್ ರೈನಾ ಕೇವಲ 25 ಎಸೆತಗಳಲ್ಲಿ 87 ರನ್ ಗಳಿಸಿ ಪಂದ್ಯ ಗೆದ್ದರು.

ಆದರೆ ನಿರ್ಣಾಯಕ ಹಂತದಲ್ಲಿ ಅವರು ರನ್ ಔಟ್ ಆದರು. ಸ್ಫೋಟಕ ಬ್ಯಾಟ್ಸ್ ಮನ್ ಮೆಕಲಮ್ ಕೂಡ ರನ್ ಔಟ್ ಗೆ ಬಲಿಯಾದರು. ಧೋನಿ 42 ರನ್‌ ಗಳ ಇನಿಂಗ್ಸ್‌ ಆಡಿದರೂ ತಂಡವನ್ನು ಗೆಲುವಿನತ್ತ ಕೊಂಡೊಯ್ಯಲು ಸಾಧ್ಯವಾಗಲಿಲ್ಲ. ಸೋಲಿನ ನಂತರ ಧೋನಿ ತುಂಬಾ ಕೋಪಗೊಂಡಿದ್ದರು.

Suresh Raina And MS Dhoni
Image Credit: Crictracker

ಧೋನಿ ಬಗ್ಗೆ ಸುರೇಶ್ ರೈನಾ ಹೇಳಿದ್ದೇನು…?
“ಧೋನಿ ಇಷ್ಟು ಕೋಪಗೊಂಡದ್ದನ್ನು ನಾನು ಎಂದಿಗೂ ನೋಡಿಲ್ಲ, ಆ ಪಂದ್ಯದ ನಂತರ ಅವರು ತಮ್ಮ ಕೋಪವನ್ನು ವ್ಯಕ್ತಪಡಿಸಿದರು. ಅವರು ಡ್ರೆಸ್ಸಿಂಗ್ ರೂಮ್‌ ನಲ್ಲಿ ಪ್ಯಾಡ್ ಮತ್ತು ಹೆಲ್ಮೆಟ್ ಅನ್ನು ಎಸೆದರು. ಅವರು ನಾವು ಗೆಲ್ಲಬೇಕಿದ್ದ ಪಂದ್ಯವನ್ನು ಸೋತಿದ್ದೇವೆ ಎಂದು ಕೋಪಗೊಂಡರು. ಇಲ್ಲದಿದ್ದರೆ ಆ ವರ್ಷವೂ ಐಪಿಎಲ್ ಗೆಲ್ಲುತ್ತಿದ್ದೆವು ಎಂದು ಲಾಲಂಟಾಪ್‌ ನಲ್ಲಿ ಧೋನಿ ಬಗ್ಗೆ ರೈನ್ ಮಾಹಿತಿ ಹಂಚಿಕೊಂಡಿದ್ದಾರೆ.

Join Nadunudi News WhatsApp Group

Suresh Raina About Dhoni
Image Credit: Livemint

Join Nadunudi News WhatsApp Group