Abhishek Reception: ದಯವಿಟ್ಟು ನಮ್ಮನ್ನು ಕ್ಷಮಿಸಿ ಎಂದು ಕೈಮುಗಿದು ಕ್ಷಮೆ ಕೇಳಿದ ಸುಮಲತಾ ಮತ್ತು ಅಭಿಷೇಕ್.
ಮಂಡ್ಯ ಜನತೆಗೆ ಕ್ಷಮೆ ಕೇಳಿದ ಸುಮಲತಾ ಮತ್ತು ಅಭಿಷೇಕ್ ಅಂಬರೀಷ್.
Abhishek Ambareesh: ಸ್ಯಾಂಡಲ್ ವುಡ್ ನ ನಟರಾದ ಅಭಿಷೇಕ್ ಅಂಬರೀಷ್ (Abhishek Ambareesh) ಅವರು ತಮ್ಮ ಬಹುಕಾಲದ ಗೆಳತಿಯ ಜೊತೆ ಮೊನ್ನೆಯಷ್ಟೇ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಜೂನ್ 5 ರಂದು ಅಭಿಷೇಕ್ ಅವಿವಾ (Abhishek Aviva Marriage) ಮದುವೆ ಬಹಳ ಅದ್ದೂರಿಯಾಗಿ ನಡೆದಿದೆ.
ಭಾರತೀಯ ಚಿತ್ರರಂಗದ ಸ್ಟಾರ್ ನಟ ನಟಿಯರಿಂದ ಹಿಡಿದು ಸಾಕಷ್ಟು ರಾಜಕೀಯ ಗಣ್ಯರು ಅಭಿ ಅವಿವಾ ಮದುವೆಗೆ ಆಗಮಿಸಿದ್ದರು. ಅಭಿಷೇಕ್ ಹಾಗೂ ಅವಿವಾ ಮದುವೇ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ವೈರಲ್ ಆಗುತ್ತಿದೆ.
![Abhishek Ambarish apologized to the people of Mandya](https://nadunudi.in/wp-content/uploads/2023/06/abhishek.png)
ಮಂಡ್ಯ ಜನತೆಗೆ ಕ್ಷಮೆ ಕೇಳಿದ ಅಭಿಷೇಕ್ ಅಂಬರೀಷ್
ಅಭಿಷೇಕ್ ಹಾಗು ಅವಿವಾ ಮದುವೆ ಸಂಭ್ರಮ ಇನ್ನು ಮುಗಿದಿಲ್ಲ. ನಿನ್ನೆ ಮಂಡ್ಯದಲ್ಲಿ ಎಲ್ಲರಿಗೂ ಬೀಗರೂಟ ಬಡಿಸಲಾಯಿತು. ಆದರೆ ಕೊನೆಯ ಹಲವು ಜನರಿಗೆ ಊಟ ಸಿಕ್ಕಿಲ್ಲ ಎಂದು ಬೇಸರಮಾಡಿಕೊಂಡಿದ್ದರು ಆ ಕಾರಣಕ್ಕೆ ಅಭಿಷೇಕ್ ಅಂಬರೀಷ್ ಕೆಲವು ಮಾತನಾಡಿದ್ದಾರೆ. ನಮ್ಮ ಮಂಡ್ಯ ಜಿಲ್ಲೆಯ ಜನತೆಗೆ ಕೃತಜ್ಞತೆ ಸಲ್ಲಿಸುತ್ತೇನೆ.
ಮಂಡ್ಯ ಜನತೆ ಆಶೀರ್ವಾದ ಮಾಡಿದ್ದಾರೆ. ನಮ್ಮ ತಂದೆ ತಾಯಿ ಆಸೆಯಂತೆ ಮಂಡ್ಯದಲ್ಲಿ ಬೀಗರ ಊಟ ಏರ್ಪಡಿಸಿದ್ದೇವೆ. ತುಂಬಾ ಜನ ಕಷ್ಟಪಟ್ಟು ವ್ಯವಸ್ಥೆ ಮಾಡಿದ್ದಾರೆ. ಬೀಗರ ಊಟದಲ್ಲಿ ಶಾರ್ಟೆಜ್ ಆಗಿಲ್ಲ. ಯಾರಿಗೂ ದುಡ್ಡು ಕೊಟ್ಟು ಕರೆಸಿಲ್ಲ, ಪ್ರೀತಿ ಅಭಿಮಾನದಿಂದ ಬಂದಿದ್ದಾರೆ ಎಂದು ಹೇಳಿದ್ದಾರೆ.
![Abhishek Ambarish apologized to the people of Mandya](https://nadunudi.in/wp-content/uploads/2023/06/abhishek-marriage.png)
ಬೀಗರೂಟದ ಸಮಾರಂಭದಲ್ಲಿ ಮಾತನಾಡಿದ ಅಭಿಷೇಕ್ ಅಂಬರೀಷ್
ಕೆಲವರು ಪ್ರವೋಕ್ ಮಾಡಿದಾಗ ಸಣ್ಣ ಪ್ರವೋಕ್ ಆದಾಗ ಅವ್ಯವಸ್ಥೆ ಆಗಿದೆ. ಅಡುಗೆ ಮನೆಗೆ ಕೆಲವರು ನುಗ್ಗಿದಾಗ ಘಟನೆ ಆಗಿದೆ. ಊಟ ಇಲ್ಲದೆ ಹೋಗಬೇಕು ಅಂತಾ ಕರೆಸಿಲ್ಲ ದಯವಿಟ್ಟು ಕ್ಷಮಿಸಿ ಬಿಡಿ. ಯಾರು ಬೇಜಾರಾಗಬೇಡಿ. ತಂದೆ ಮೇಲೆ ಪ್ರೀತಿ ಇಟ್ಟುಕೊಂಡು ಬಂದಿದ್ದೀರಾ ಎಂದು ಹೇಳಿದ್ದಾರೆ.
ನಾವು ನಿರೀಕ್ಷೆ ಮಾಡಿದ್ದಕ್ಕಿಂತ ಹೆಚ್ಚು ಪ್ರೀತಿ ತೋರಿಸಿದ್ದಾರೆ. ಊಟಕ್ಕಿಂತ ನಿಮ್ಮನ್ನು ನೋಡಲು ಬಂದೆ ಅಂತ ಕೆಲವರು ಹೇಳಿದ್ದಾರೆ. ಊಟ ಮಿಸ್ ಆಗಿದ್ದಕ್ಕೆ ಬೇಜಾರಾಗಿದೆ ರಾಜಕೀಯ ವಿರೋಧಿಗಳು ಇದನ್ನು ಬಳಸಿಕೊಂಡರೆ ಅವರಿಗೂ ಒಳ್ಳೆಯದೇ ಆಗಲಿ. ಊಟ ಶಾರ್ಟೇಜ್ ಅನ್ನೋದು ಸುಳ್ಳು. ನಮ್ಮ ತಂದೆಯ ಆಸೆಯಂತೆ ಮದುವೆಯಾಗಿದ್ದೇನೆ. ಇಲ್ಲದಿದ್ದರೆ ಸಿಂಪಲ್ ಆಗಿ ಮದುವೆಯಾಗ್ತಿದ್ದೆ ಎಂದು ಅಭಿಷೇಕ್ ಅಂಬರೀಷ್ ಹೇಳಿದ್ದಾರೆ.