Anna Bhagya: ಅನ್ನಭಾಗ್ಯ 11 ಮತ್ತು 12 ನೇ ಕಂತಿನ ಹಣ ಬಿಡುಗಡೆ, ಈ ರೀತಿಯಲ್ಲಿ ಚೆಕ್ ಮಾಡಿಕೊಳ್ಳಿ
ಅನ್ನಭಾಗ್ಯ 11 ಮತ್ತು 12 ನೇ ಕಂತಿನ ಹಣ ಬಿಡುಗಡೆ
Anna Bhagya Scheme Latest Update: ರಾಜ್ಯ ಸರ್ಕಾರ ಪರಿಚಯಿಸಿರುವ ಉಚಿತ ಗ್ಯಾರಂಟಿ ಯೋಜನೆಗಳು ಅರ್ಹರಿಗೆ ತಲುಪುತ್ತಿದೆ. ಉಚಿತ ಗ್ಯಾರಂಟಿ ಯೋಜನಗಳು ಅನುಷ್ಠಾನಗೊಂಡು ವರ್ಷಗಳೇ ಕಳೆಯುತ್ತಿದ್ದರು ಕೂಡ ಸರ್ಕಾರ ಯೋಜನೆಗೆ ಸಂಬಂಧಿಸಿದಂತೆ ಆಗಾಗ ಹೊಸ ಹೊಸ ಅಪ್ಡೇಟ್ ನೀಡುತ್ತಿರುತ್ತದೆ.
ಇನ್ನು ಅರ್ಹರ ದಾಖಲೇಗಳ ಸಮಸ್ಯೆಯಿಂದಾಗಿ ಅಥವಾ ತಾಂತ್ರಿಕ ದೋಷದ ಕಾರಣ ಇನ್ನು ಕೂಡ ಯೋಜನೆಯ ಲಾಭ ಪಡೆಯದ ಅದೆಷ್ಟೋ ಫಲಾನುಭವಿಗಳಿದ್ದರೆ. ಎಲ್ಲ ಅರ್ಹರು ಯೋಜನೆಯ ಲಾಭವನ್ನು ನೀಡಲು ಸರಕಾರ ಅನೇಕ ಕ್ರಮ ಕೈಗೊಳ್ಳುತ್ತಲೇ ಇದೆ. ಇನ್ನು ಯೋಜನೆಯ ಲಾಭ ಯಾರಿಗೆ ಲಭ್ಯವಾಗುತ್ತಿದೆಯೋ ಅಂತವರಿಗೆ ಸರ್ಕಾರ ತಿಂಗಳವಾರು ಯೋಜನೆಯ ಲಾಭವನ್ನು ನೀಡುತ್ತಿರುತ್ತದೆ.
ಅನ್ನಭಾಗ್ಯ 11 ಮತ್ತು 12 ನೇ ಕಂತಿನ ಹಣ ಬಿಡುಗಡೆ
ರಾಜ್ಯ ಸರ್ಕಾರ ಅನ್ನ ಭಾಗ್ಯ ಯೋಜನೆಯ 5KG ಅಕ್ಕಿ ಹಾಗೂ 5KG ಉಚಿತ ಅಕ್ಕಿಯ ಬದಲು ಫಲಾನುಭವಿಗಳ ಖಾತೆಗೆ ಹಣವನ್ನು ವರ್ಗಾವಣೆ ಮಾಡುತ್ತಿದೆ. ಸದ್ಯ ರಾಜ್ಯ ಸರ್ಕಾರ ಜೂನ್ ತಿಂಗಳ ಅನ್ನ ಭಾಗ್ಯ ಹಣವನ್ನು ಕೂಡ ಜಮಾ ಮಾಡಿದೆ. ಅಣ್ಣ ಭಾಗ್ಯ ಯೋಜನೆಯಡಿ ಫಲಾನುಭವಿಗಳ ಖಾತೆಗೆ 11 ಮತ್ತು 12 ನೇ ಕಂತುಗಳ ಹಣ ಜಮಾ ಮಾಡಲಾಗಿದೆ. ಆಧಾರ್ ಕಾರ್ಡ್ ನವೀಕರಣ, KYC ಅಪ್ಡೇಟ್, ಬ್ಯಾಂಕ್ ಅಕೌಂಟ್ KYC, ರೇಷನ್ ಕಾರ್ಡ್ ಅಪ್ಡೇಟ್ ಆಗಿದ್ದರೆ ನಿಮ್ಮ ಖಾತೆಗೆ 11 ಮತ್ತು 12 ನೇ ಕಂತಿನ ಹಣ ಜಮಾ ಆಗಲಿದೆ. ಇನ್ನು ನಿಮ್ಮ ಖಾತೆಗೆ ಹಣ ಬಂದಿದೆಯಾ ಅಥವಾ ಇಲ್ಲವ ಎನ್ನುವುದನ್ನು ತಿಳಿಯಲು ಈ ಕೆಳಗಿನ ಹಣತಗಳನ್ನು ಅನುಸರಿಸಬಹುದು.
ಈ ರೀತಿಯಲ್ಲಿ ಚೆಕ್ ಮಾಡಿಕೊಳ್ಳಿ
•ಕರ್ನಾಟಕ ಸರ್ಕಾರದ ಅಧಿಕೃತ Website https://www.karnataka.gov.in/ ಗೆ ಭೇಟಿ ನೀಡಿ.
•E -Services ಟ್ಯಾಬ್ ಮೇಲೆ ಕ್ಲಿಕ್ ಮಾಡಿ
•DBT Status ಲಿಂಕ್ ಅನ್ನು ಕ್ಲಿಕ್ ಮಾಡಿ
•ನೀವು ರೇಷನ್ ಕಾರ್ಡ್ ನಲ್ಲಿ ಯಾವ ಸಮಯದ ಸ್ಟೇಟಸ್ ತಿಳಿಯಲು ಬಯಸುತ್ತೀರಿ ಎನ್ನುವುದನ್ನು ಆಯ್ಕೆ ಮಾಡಿ.
•ನಿಮ್ಮ ಪಡಿತರ ಚೀಟಿ ಸಂಖ್ಯೆಯನ್ನು ನಮೂದಿಸಿ ನಂತರ Continue ಬಟನ್ ಕ್ಲಿಕ್ ಮಾಡಿ.
•ಈ ಎಲ್ಲ ಪ್ರಕ್ರಿಯೆ ಪೂರ್ಣಗೊಂಡ ನಂತರ ಅನ್ನ ಭಾಗ್ಯ ಯೋಜನೆಯಡಿ ನಿಮಗೆ ಯಾವ ಯಾವ ಕಂತುಗಳ ಹಣ ಜಮಾ ಆಗಿದೆ ಎನ್ನುವುದು ಸ್ಕ್ರೀನ್ ಮೇಲೆ ತೋರುತ್ತದೆ. ಪೂರ್ಣ ಮಾಹಿತಿ ನಿಮಗೆ ಪರದೆಯ ಮೇಲೆ ಕಾಣಸಿಗುತ್ತದೆ.