Anna Bhagya Yojana: ಇಂತಹ ಜನರಿಗೆ ಸಿಗಲ್ಲ ಅನ್ನ ಭಾಗ್ಯದ ಹಣ, ಅನ್ನ ಭಾಗ್ಯದ ಹಣ ಬೇಕಾದರೆ ಬೇಗನೆ ಈ ಕೆಲಸ ಮಾಡಿಕೊಳ್ಳಿ.
ಅನ್ನಭಾಗ್ಯ ಯೋಜನೆಯ ಸೌಲಭ್ಯದಲ್ಲಿ ಬದಲಾವಣೆ ತಂದ ಸರ್ಕಾರ. ಇಂತಹ ಜನರಿಗೆ ಸಿಗಲ್ಲ ಅನ್ನ ಭಾಗ್ಯದ ಹಣ.
Bank Account Aadhar Link: ಕಾಂಗ್ರೆಸ್ ಸರ್ಕಾರ ಘೋಷಿಸಿರುವ ಅನ್ನಭಾಗ್ಯದ (Annabhagya) ಯೋಜನೆಯ ಕುರಿತು ಈಗಾಗಲೇ ಸಾಕಷ್ಟು ಅಪ್ಡೇಟ್ ಗಳು ವೈರಲ್ ಆಗುತ್ತಿದೆ. ಇನ್ನು ರಾಜ್ಯದ ಜನತೆ ಅನ್ನಭಾಗ್ಯದ ಅನುಕೂಲ ಪಡೆಯಲು ಉತ್ಸಾಹಕರಾಗಿದ್ದಾರೆ.
ಇನ್ನು ಬಿಪಿಎಲ್ ಪಡಿತರ ಚೀಟಿ ದಾರರಿಗೆ 10 ಕೆಜಿ ಅಕ್ಕಿ ಉಚಿತವಾಗಿ ನೀಡುವುದಾಗಿ ಘೋಷಿಸಿತ್ತು. ಆದರೆ ಸರ್ಕಾರ ಅನ್ನಭಾಗ್ಯ ಯೋಜನೆಯಡಿ ನೀಡಲಾಗುವ ಸೌಲಭ್ಯದಲ್ಲಿ ಬದಲಾವಣೆಯನ್ನು ತಂದಿದೆ.
ಅಕ್ಕಿಯ ಬದಲಾಗಿ ಖಾತೆಗೆ ಜಮಾ ಆಗಲಿದೆ ಹಣ
ಜನರಿಗೆ 5 ಕೆಜಿ ಅಕ್ಕಿ ಬದಲು 5 ಕೆಜಿ ಅಕ್ಕಿಗೆ ಸರಿದೂಗುವ ಹಣ ನೀಡಲು ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದೆ. ಪ್ರತಿ ಕೆಜಿ ಅಕ್ಕಿಗೆ 34 ರೂಪಾಯಿಯಂತೆ ಬಿಪಿಎಲ್ ಪಡಿತರ ಕಾರ್ಡ್ ದಾರರಿಗೆ ಮಾಸಿಕ ತಲಾ 170 ರೂಪಾಯಿ ನೀಡಲಾಗುತ್ತದೆ.
ಜುಲೈ ತಿಂಗಳಿಂದಲೇ ಪಡಿತದಾರರ ಖಾತೆಗೆ ಹಣ ವರ್ಗಾವಣೆ ಮಾಡಲಾಗುವುದು ಎಂದು ಸರ್ಕಾರ ಘೋಷಿಸಿದೆ. ಇನ್ನು ಐದು ಕೆಜಿ ಅಕ್ಕಿಯ ಬದಲಾಗಿ ನೀವು ಹಣವನ್ನು ಪಡೆಯಲು ಕೆಲವು ಷರತ್ತುಗಳಿವೆ. ಇಂತಹ ಜನರಿಗೆ ಅನ್ನಭಾಗ್ಯದ ಲಾಭ ಸಿಗುವುದಿಲ್ಲ ಎಂದು ಸರ್ಕಾರ ಮಾಹಿತಿ ನೀಡಿದೆ.
ಇಂತಹ ಜನರಿಗೆ ಸಿಗಲ್ಲ ಅನ್ನ ಭಾಗ್ಯದ ಹಣ
ಇನ್ನು ಬಿಪಿಎಲ್ ಪಡಿತರ ಚೀಟಿಯಲ್ಲಿ (BPL Ration Card) ಯಾವುದೇ ತಪ್ಪಾದ ಮಾಹಿತಿ ಇರಬಾರದು. ಇನ್ನು ಪಡಿತರ ಚೀಟಿಯ ಮುಖ್ಯ ವ್ಯಕ್ತಿಯ ಹೆಸರಿನಲ್ಲಿ ಬ್ಯಾಂಕ್ ಖಾತೆ ಇರಬೇಕಾಗುತ್ತದೆ. ಅನ್ನಭಾಗ್ಯದ ಹಣ ನಿಮ್ಮ ಬ್ಯಾಂಕ್ ಖಾತೆಗೆ (Bank Account) ಜಮಾ ಆಗಲು ಬ್ಯಾಂಕ್ ಖಾತೆ ಜೊತೆ ಆಧಾರ್ ಲಿಂಕ್ (Aadhar Link) ಕಡ್ಡಾಯಗೊಳಿಸಲಾಗಿದೆ. ಆಧಾರ್ ಲಿಂಕ್ ಬ್ಯಾಂಕ್ ಖಾತೆ ವಿವರ ಅನ್ನಭಾಗ್ಯ ಯೋಜನೆಯಡಿ ಹಣ ಪಡೆಯಲು ಮುಖ್ಯವಾಗಿದೆ.
ಇನ್ನು ಮನೆಯ ಮುಖ್ಯಸ್ಥರು ಇಲ್ಲದೆ ಇದ್ದ ಸಮಯದಲ್ಲಿ ಮನೆಯ ಯಾವುದಾದರು ಸದಸ್ಯರ ಬ್ಯಾಂಕ್ ಖಾತೆ ಆಧಾರ್ ಗೆ ಲಿಂಕ್ ಆಗಿದ್ದರು ಅನ್ನಭಾಗ್ಯ ಯೋಜನೆಯ ಲಾಭವನ್ನು ಪಡೆಯಬಹುದು. ಪ್ರಸ್ತುತ ಸಾಕಷ್ಟು ಜನರ ಅಕೌಂಟ್ ಗೆ ಆಧಾರ್ ಲಿಂಕ್ ಆಗದೆ ಇರುವ ಕಾರಣ ಜುಲೈ ನಲ್ಲಿ ಕೆಲವರು ಈ ಯೋಜನೆಯಿಂದ ವಂಚಿತರಾಗಬೇಕಾಗುತ್ತದೆ. ಇನ್ನು ನಿಮ್ಮ ಬ್ಯಾಂಕ್ ಖಾತೆಗೆ ಅಕೌಂಟ್ ಲಿಂಕ್ ಆಗದೆ ಇದ್ದರೆ ಈ ಕೂಡಲೇ ಲಿಂಕ್ ಮಾಡುವುದು ಉತ್ತಮ.