Bele Parihara: ರಾಜ್ಯದ ರೈತರಿಗೆ ಬಿಗ್ ಅಪ್ಡೇಟ್, ಈ ದಿನದಂದು ರೈತರ ಖಾತೆಗೆ ಮೊದಲ ಕಂತಿನ ಹಣ ಜಮಾ.

ಒಂದು ವಾರದಲ್ಲಿ ರೈತರ ಖಾತೆಗೆ ಮೊದಲ ಕಂತಿನ ಹಣ ಜಮಾ ಆಗಲಿದೆ

Crop Compensation Amount Latest Update: ರಾಜ್ಯ ಸರ್ಕಾರ ಬೆಳೆ ನಷ್ಟಕ್ಕೆ ಸಿಲುಕಿರುವ ರೈತರಿಗೆ ಈಗಾಗಲೇ ಮೊದಲ ಕಂತಿನ ಬರ ಪರಿಹಾರ ಮೊತ್ತವನ್ನು ಬಿಡುಗಡೆ ಮಾಡಿದೆ. ರಾಜ್ಯದ ರೈತರು ಮೊದಲ ಕಂತಿನ ಹಣವನ್ನು ಪಡೆದಿದ್ದಾರೆ.

ಸದ್ಯ ಮುಂದಿನ ಕಂತಿನ ಹಣದ ಬಿಡುಗಡೆಗೆ ನಿರ್ಧರಿಸಲಾಗಿದೆ. ಮೊದಲ ಕಂತಿನ ಹಣವನ್ನವು ರಾಜ್ಯ ಸರ್ಕಾರ ನೀಡಿದ್ದು, ಇದೀಗ NDRF ಪರಿಹಾರ ಹಣಲಭ್ಯವಾಗಲಿದೆ. ಈ ಹಣವನ್ನು ನಿಯಮಾನುಸಾರ ರೈತರ ಖಾತೆಗೆ ಜಮಾ ಮಾಡಲು ಕ್ರಮ ಕೈಗೊಳ್ಳಲಾಗಿದೆ.

Crop Compensation Amount Latest Update
Image Credit: Newindianexpress

ರಾಜ್ಯದ ರೈತರಿಗೆ ಬಿಗ್ ಅಪ್ಡೇಟ್
2023 ರಲ್ಲಿ ಮುಂಗಾರು ಬರಗಾಲದ ಹಿನ್ನೆಲೆಯಲ್ಲಿ ರೈತರಿಗೆ ಬೆಳೆ ಹಾನಿ ಪರಿಹಾರದ ಮೊದಲ ಕಂತಾಗಿ ಅಥವಾ SDRF/NDRF ಮಾರ್ಗಸೂಚಿಗಳ ಪ್ರಕಾರ ಬೆಳೆ ಹಾನಿ ಪರಿಹಾರವಾಗಿ ಪ್ರತಿ ರೈತರಿಗೆ ಗರಿಷ್ಠ 2000 ರೂ. ವರೆಗೆ ರೈತರಿಗೆ ಪಾವತಿಸಲು ಸರ್ಕಾರ ಅನುಮತಿ ನೀಡಿದ್ದು, ಮುಂದಿನ ದಿನಗಳಲ್ಲಿ ಕೇಂದ್ರ ಸರ್ಕಾರದಿಂದ ಎನ್‌ಡಿಆರ್‌ಎಫ್ ಅನುದಾನ ಬಿಡುಗಡೆಯಾದ ನಂತರ ಎಸ್‌ಡಿಆರ್‌ಎಫ್ ಮಾರ್ಗಸೂಚಿಯಂತೆ ಹೆಚ್ಚುವರಿ ಮೊತ್ತಕ್ಕೆ ಅರ್ಹರಾಗಿರುವ ರೈತರಿಗೆ ಹೆಚ್ಚುವರಿ ಬೆಳೆ ನಷ್ಟ ಪರಿಹಾರವನ್ನು ಬಿಡುಗಡೆ ಮಾಡಲಾಗುತ್ತದೆ.

ಒಂದು ವಾರದಲ್ಲಿ ರೈತರ ಖಾತೆಗೆ ಮೊದಲ ಕಂತಿನ ಹಣ ಜಮಾ ಆಗಲಿದೆ
ಬರ ಪರಿಸ್ಥಿತಿಯಿಂದ ಶೇ.33ಕ್ಕಿಂತ ಹೆಚ್ಚಿನ ಬರ ಪರಿಸ್ಥಿತಿಯಿಂದ ಉಂಟಾದ ಬೆಳೆ ಹಾನಿಗೆ ಗರಿಷ್ಠ 02 ಹೆಕ್ಟೇರ್‌ ಗೆ ಸೀಮಿತಗೊಳಿಸಿದರೆ, ಮಳೆಯಾಶ್ರಿತ ಬೆಳೆಗೆ ಹೆಕ್ಟೇರ್‌ ಗೆ 8,500 ರೂ., ನೀರಾವರಿ ಬೆಳೆಗೆ ಹೆಕ್ಟೇರ್‌ ಗೆ 17,000 ರೂ. ಮತ್ತು ಬಹುವಾರ್ಷಿಕ ಬೆಳೆಗೆ ಹೆಕ್ಟೇರ್‌ ಗೆ 22,500 ರೂ. ನಿಗದಿಪಡಿಸಲಾಗಿದೆ.

Crop Compensation Amount
Image Credit: Newsmeter

ಡಿಜಿಟಲ್ ಬೆಳೆ ಸಮೀಕ್ಷೆ ಮಾಹಿತಿ ಮತ್ತು ಎಫ್‌ಐಡಿ ಹೊಂದಿರುವ ರೈತರ ಮಾಹಿತಿ ಆಧರಿಸಿ, ಮುಂಗಾರು ಮಳೆಯ ಬರ ಪರಿಸ್ಥಿತಿ ಹಿನ್ನೆಲೆಯಲ್ಲಿ ರಾಮನಗರ ಜಿಲ್ಲೆಯಲ್ಲಿ ಗರಿಷ್ಠ 2000 ರೂ.ಗಳಂತೆ ಮೊದಲ ಹಂತದಲ್ಲಿ 65170 ರೈತರಿಗೆ ಒಟ್ಟು 1161.40 ಲಕ್ಷ ರೂ.ಗಳ ಇನ್‌ ಪುಟ್ ಸಬ್ಸಿಡಿ ಮೊತ್ತವನ್ನು ಠೇವಣಿ ಮಾಡಲಾಗುವುದು. ಎಸ್‌ಡಿಆರ್‌ಎಫ್ ಮಾರ್ಗಸೂಚಿಯಂತೆ ಮೇ 2 ರಂದು ಒಟ್ಟು 40,810 ರೈತರಿಗೆ 2038.91 ಲಕ್ಷ ರೂ.ಗಳ ಇನ್‌ ಪುಟ್ ಸಬ್ಸಿಡಿ ಹೆಚ್ಚುವರಿ ಮೊತ್ತವನ್ನು ಜಮಾ ಮಾಡಲು ಅನುಮೋದನೆ ನೀಡಲಾಯಿತು. ಪರಿಹಾರದ ಹಣವನ್ನು ಸರ್ಕಾರವು ನೇರವಾಗಿ ಆಧಾರ್ ಸಂಖ್ಯೆ ಲಿಂಕ್ ಆಗಿರುವ ರೈತರ ಬ್ಯಾಂಕ್ ಖಾತೆಗಳಿಗೆ ಜಮಾ ಮಾಡಿದೆ.

Join Nadunudi News WhatsApp Group

Crop Compensation Amount Release
Image Credit: Khetivyapar

Join Nadunudi News WhatsApp Group