Darshan And Pavithra Gowda: ಜೈಲಿ ನಲ್ಲಿ ದರ್ಶನ್ ಭೇಟಿಮಾಡಿದ ಪವಿತ್ರ, ಇಬ್ಬರ ನಡುವೆ ನಡೆದ ಮಾತುಕತೆ ಏನು ಗೊತ್ತಾ…?

ದರ್ಶನ್ ಹಾಗೂ ಪವಿತ್ರ ನಡುವೆ ನಡೆದ ಮಾತುಕತೆ ಏನು...?

Darshan And Pavithra Gowda Meet: ಸದ್ಯ ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣ ದಿನಕೊಂದು ತಿರುವು ಪಡೆದುಕೊಳ್ಳುತ್ತಿದೆ. ತಮ್ಮ ಗೆಳತಿಗೆ ಅಶ್ಲೀಲ ಮೆಸೇಜ್ ಕಳುಹಿಸಿದ್ದಕ್ಕಾಗಿ ಸ್ಯಾಂಡಲ್ ವುಡ್ ನ ಸ್ಟಾರ್ ನಟರಾದ Darshan ಚಿತ್ರದುರ್ಗದ ರೇಣುಕಾಸ್ವಾಮಿ ಅವರನ್ನು ಹತ್ಯೆ ಮಾಡಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇತ್ತು 17 ಆರೋಪಿಗಳನ್ನು ನ್ಯಾಯಾಂಗ ಬಂಧನದಲ್ಲಿ ಇರಿಸಲಾಗಿದೆ.

ಸದ್ಯ 17 ಜನ ಆರೋಪಿಗಳು ಪರಪ್ಪನ ಅಗ್ರಹಾರದಲ್ಲಿದ್ದರೆ. ಜುಲೈ 4 ರವರೆಗೆ 17 ಜನ ಆರೋಪಿಗಳು ನಯಯನಗ ಬಂದಲ್ಲಿದ್ದಾರೆ. ಮತ್ತೆ ದರ್ಶನ್ ಅಂಡ್ ಗ್ಯಾಂಡ್ ವಿಚಾರಣೆ ನಡೆಯಲಿದೆ. ನ್ಯಾಯಾಲಯ ದರ್ಶನ್ ಮತ್ತು ಗ್ಯಾಂಗ್ ಅನ್ನು ಮತ್ತೆ ನ್ಯಾಯಾಂಗ ಬಂಧನದಲ್ಲಿ ಇರಿಸುತ್ತ ಅಥವಾ ಕಸ್ಟಡಿಗೆ ನೀಡುತ್ತಾ ಎನ್ನುವುದು ಸದ್ಯದ ಚರ್ಚೆಯಾಗಿದೆ. ಇವೆಲ್ಲದರ ಮದ್ಯೆ ನಟ ದರ್ಶನ್ ಜೈಲಿನಲ್ಲಿ ತಮ್ಮ ಸ್ನೇಹಿತೆ ಪವಿತ್ರ ಗೌಡ ಅವರ ಜೊತೆ ಮಾತನಾಡಿರುವ ಬಗ್ಗೆ ಮಾಹಿತಿ ಲಭಿಸಿದೆ. ಈ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.

Darshan And Pavitra Gowda Meet
Image Credit: Filmibeat

ಜೈಲಿನಲ್ಲಿ ದರ್ಶನ್ ಹಾಗೂ ಪವಿತ್ರ ಗೌಡ ಭೇಟಿ
ಸದ್ಯ ದರ್ಶನ್ ಹಾಗೂ ಪವಿತ್ರ ಗೌಡ ಭೇಟಿ ಮಾಡಿದ್ದಾರೆ ಎನ್ನುವ ಬಗ್ಗೆ ಮಾಹಿತಿ ಲಭಿಸಿದೆ. ಜೈಲಿನ ಆಸ್ಪತ್ರೆಯಲ್ಲಿ ಪ್ರತಿದಿನ ದರ್ಶನ್ ಅಂಡ್ ಗ್ಯಾಂಗ್ ಗೆ ಇನ್ಸುಲಿನ್ ಕೊಡಿಸಲಾಗುತ್ತದೆ. ದರ್ಶನ್ ಗೆ ಇನ್ಸುಲಿನ್ ಕೊಡಿಸುವ ವೇಳೆಯಲ್ಲಿ ಆಸ್ಪತ್ರೆಯಲ್ಲಿ ದರ್ಶನ್ ಹಾಗೂ ಪವಿತ್ರ ಗೌಡ ಮಾತನಾಡಿದ್ದಾರೆ ಎನ್ನುವ ಬಗ್ಗೆ ಮಾಹಿತಿ ಕೇಳಿಬಂದಿದೆ. ದರ್ಶನ್ ಹಾಗೂ ಪವಿತ್ರ ಗೌಡ ಒಟ್ಟು 10 ನಿಮಿಷಗಳ ಕಾಲ ಮಾತನಾಡಿದ್ದಾರೆ ಎನ್ನಲಾಗುತ್ತಿದೆ. ದರ್ಶನ್ ಹಾಗೂ ಪವಿತ್ರ ಗೌಡ 10 ನಿಮಿಷ ಏನು ಮಾತನಾಡಿದ್ದರು ಎನ್ನುವುದು ಸದ್ಯದ ಚರ್ಚೆಯಾಗಿದೆ.

ದರ್ಶನ್ ಹಾಗೂ ಪವಿತ್ರ ನಡುವೆ ನಡೆದ ಮಾತುಕತೆ ಏನು…?
ದರ್ಶನ್ ಮತ್ತು ಪವಿತ್ರ ಗೌಡ ಭೇಟಿಯಾದ ಸಮಯದಲ್ಲಿ ಜೈಲು ದಿನಗಳ ಬಗ್ಗೆ ಮಾತನಾಡಿದ್ದಾರಂತೆ. ಜೊತೆಗೆ ತಾವಿರುವ ಪರಿಸ್ಥಿಯನ್ನು ಕಂಡು ನೊಂದುಕೊಂಡಿದ್ದಾರೆ. ಈ ವೇಳೆ ದರ್ಶನ್ ಎಲ್ಲ ಸರಿಹೋಗುತ್ತೆ ಎಂದು ಪವಿತ್ರ ಗೌಡ ಅವರನ್ನು ಸಮಾಧಾನ ಮಾಡಿದ್ದಾರೆ ಎನ್ನಲಾಗುತ್ತಿದೆ. ಇನ್ನು ಪವಿತ್ರ ಗೌಡ ಅವರ ಆಪ್ತ ಗೆಳತಿ ಸಮತಾ ದರ್ಶನ್ ಅವರನ್ನು ಭೇಟಿಯಾಗಲು ಜೈಲಿಗೆ ಬಂದಿದ್ದರು ಎನ್ನುವ ಬಗ್ಗೆ ಕೂಡ ಮಾಹಿತಿ ಇದೆ. ಸಮತಾ ಪವಿತ್ರ ಗೌಡ ಕ್ಲೋಸ್ ಫ್ರೆಂಡ್. ಪವಿತ್ರ ಗೌಡ ಭೇಟಿಯ ಬಳಿಕ ಸಮತಾ ದರ್ಶನ್ ಅವರನ್ನು ಭೇಟಿ ಮಾಡಿದ್ದಾರೆ. ಈ ಇಬ್ಬರು ಕೂಡ ಮಾತುಕತೆ ನಡೆಸಿದ್ದಾರೆ ಎನ್ನಲಾಗುತ್ತಿದೆ.

Actor Darshan And Pavitra Gowda
Image Credit: Filmibeat

Join Nadunudi News WhatsApp Group

Join Nadunudi News WhatsApp Group