ಚಾಲೆಂಜಿಂಗ್ ಸ್ಟಾರ್ ದರ್ಶನ್ ಸ್ಯಾಂಡಲ್ವುಡ್ನ ಬಹುಬೇಡಿಕೆಯ ನಟ. ಇವರ ಅಭಿಮಾನಿಗಳ ಸಂಖ್ಯೆ ಬಹಳ ಜಾಸ್ತಿಯಿದೆ. ಸಿನಿಮಾ, ಸಾಮಾಜಿಕ ಕೆಲಸದ ವಿಚಾರವಾಗಿ ಅವರು ಸದಾ ಸುದ್ದಿಯಲ್ಲಿ ಇರುತ್ತಾರೆ. ಸ್ಟಾರ್ ಗಿರಿ ಇದ್ದರೂ ದಾಂಪತ್ಯ ಜೀವನಕ್ಕೆ ಸಂಬಂಧಿಸಿದಂತೆ ದರ್ಶನ್ ಕೆಲವೊಂದು ಸುದ್ದಿಮಾಡಿ ಜೈಲುವಾಸ ಕೂಡ ಮಾಡಿ ಬಂದಿದ್ದರು. ನಾಲ್ಕೈದು ವರ್ಷಗಳ ಹಿಂದೆ ದರ್ಶನ್ ಮತ್ತು ಅವರ ಪತ್ನಿ ವಿಜಯಲಕ್ಷ್ಮೀ ನಡುವೆ ಮನಸ್ತಾಪ ಇತ್ತು.
ಆದರೆ ಅದೆಲ್ಲ ಈಗ ಹಳೆಯ ಕಥೆ. ಆನಂತರದಲ್ಲಿ ಅವರಿಬ್ಬರು ಒಂದಾಗಿದ್ದಾರೆ. ಕಳೆದವರ್ಷ ದರ್ಶನ್ ಮತ್ತು ವಿಜಯಲಕ್ಷ್ಮೀ ‘ಯಜಮಾನ’ ಸಿನಿಮಾದ ಶೂಟಿಂಗ್ ಸಂದರ್ಭದಲ್ಲಿ ಮಗ ವಿನೀಶ್ ನಟನೆ ನೋಡಿ ಖುಷಿಪಟ್ಟ ವಿಡಿಯೋ ಎಲ್ಲರ ಮೆಚ್ಚುಗೆ ಗಳಿಸಿತ್ತು. ಅಷ್ಟೇ ಅಲ್ಲದೆ ಅವರು ಕೆಲ ಸಮಾರಂಭಕ್ಕೆ ಪತ್ನಿಯನ್ನು ಕರೆದುಕೊಂಡು ಹೋಗುತ್ತಿದ್ದಾರೆ. ಈ ಪತ್ನಿ ಅನ್ಯೂನವಾಗಿದ್ದಾರೆ ಎಂದು ಹೇಳೊ ಹೊತ್ತಿಗೆ ಹೊಸ ಕಾಂಟ್ರವರ್ಸಿ ಮಾಡಿಕೊಂಡಿದ್ದಾರೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಮತ್ತವರ ಪತ್ನಿ ವಿಜಯಲಕ್ಷ್ಮೀ ನಡುವಿನ ವದಂತಿಗಳು ಸ್ಯಾಂಡಲ್ವುಡ್ನಲ್ಲಿ ಮತ್ತೊಮ್ಮೆ ಭಾರಿ ಚರ್ಚೆಗೆ ಗ್ರಾಸವಾಗಿವೆ.
ಮಗ ವಿನೀಶ್ ಜೊತೆ ಮಗನ ವಿದ್ಯಾಭ್ಯಾಸ ಮತ್ತು ಇನ್ನೆಲ್ಲ ಪೋಷಣೆ ಮಾಡುತ್ತಾ ಮಗನ ಜೊತೆ ಇದ್ದಾರೆ. ದರ್ಶನ್ ಅವರು ಪತ್ನಿ ಜೊತೆ ಚೆನ್ನಾಗಿಲ್ಲ ಎನ್ನುವ ಹಲವು ಮಾತುಗಳು ಮತ್ತು ಟೀಕೆಗಳು ಸಾಕಷ್ಟು ಮಾಧ್ಯಮಗಳಲ್ಲಿ ಕೇಳಿ ಬಂದಿದ್ದವು, ಇವುಗಳಿಗೆಲ್ಲ ಈಗ ದರ್ಶನ್ ಅವರು ತಿರುಗೇಟು ನೀಡಿದ್ದಾರೆ. ಒಂದೆರಡು ತಿಂಗಳಿನಿಂದ ದರ್ಶನ್ ಅವರು ಹಲವು ವಿಷಯಗಳಿಂದ ಸುದ್ದಿಯಲ್ಲಿದ್ದಾರೆ. ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಅವರ ಜೊತೆ ಶುರುವಾದ ವಿಷಯ, ಒಂದು ಮಹಿಳೆಯ ಸುತ್ತ ಸುತ್ತಿಕೊಂಡಿತು, ಆದರೆ ಈ ಪ್ರಕರಣಕ್ಕೆ ಇನ್ನು ಸರಿಯಾದ ಅಂತ್ಯ ಸಿಗಲಿಲ್ಲ.
ಇದೆಲ್ಲಕ್ಕಿಂತ ಹೆಚ್ಚಾಗಿ ದರ್ಶನ್ ಅವರು ವಿವಾದಕ್ಕೆ ಸಿಕ್ಕಿಕೊಂಡಿದ್ದು ಪತ್ನಿ ವಿಜಯಲಕ್ಷ್ಮೀ ಅವರ ವಿಚಾರದಿಂದ. ದರ್ಶನ್ ಅವರು ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಇರುವ ಕಾರಣ ಅವರು ಫ್ಯಾಮಿಲಿಗೆ ಹೆಚ್ಚಿನ ಸಮಯ ನೀಡಲು ಸಾಧ್ಯವಾಗುತ್ತಿರಲಿಲ್ಲ. ಇದರಿಂದಾಗಿ ಕೆಲವರು ದರ್ಶನ್ ಅವರು ವಿಜಯಲಕ್ಷ್ಮೀ ಅವರೊಡನೆ ಚೆನ್ನಾಗಿಲ್ಲ, ಇಬ್ಬರ ಫ್ಯಾಮಿಲಿ ಲೈಫ್ ಚೆನ್ನಾಗಿಲ್ಲ ಎಂದು ಹಲವು ಸುದ್ದಿಗಳನ್ನು ಹಬ್ಬಿಸಿ ಟೀಕೆ ಸಹ ಮಾಡಿದ್ದರು. ಆದರೆ ಈ ಎಲ್ಲಾ ಟೀಕೆಗಳಿಗೆ ಈಗ ಡಿಬಾಸ್ ಸರಿಯಾದ ಉತ್ತರ ನೀಡಿದ್ದಾರೆ. ಹೆಂಡತಿ ಜೊತೆ ಚೆನ್ನಾಗಿಲ್ಲ ಎಂದವರಿಗೆ ತಿರುಗೇಟು ನೀಡಿದ್ದಾರೆ.
ಮಗನಿಗಾಗಿ ಈ ಜೋಡಿ ಮತ್ತೆ ಒಂದಾಗಿದ್ದು ಈ ಮೂಲಕ ಸಹ ಬಾಳ್ವೆ ನಡೆಸುತ್ತಿದ್ದಾರೆ. ಡಿಬಾಸ್ ದರ್ಶನ್ ಹಾಗು ಅವರ ಪತ್ನಿ ವಿಜಯಲಕ್ಷ್ಮೀ ಅವರು ಬೆಂಗಳೂರಿನ ರಾಜರಾಜೇಶ್ವರಿ ನಗರದ ಮನೆಯಲ್ಲಿ ಒಟ್ಟಾಗಿ ಜೀವನ ಸಾಗಿಸುತ್ತಿದ್ದಾರೆ. ಈ ಮೂಲಕ ದರ್ಶನ್ ದಂಪತಿಗಳು ಎಲ್ಲಾ ಟೀಕೆಗಳಿಗೂ ಖಡಕ್ ಆಗಿ ಉತ್ತರ ನೀಡಿದ್ದಾರೆ. ಅಷ್ಟು ಮಾತ್ರವಲ್ಲದೆ ಪತ್ನಿ ಜೊತೆ ಕಬಿನಿಗೆ ಪ್ರವಾಸಕ್ಕೆ ಹೋಗಿರುವ ದರ್ಶನ್ ಅವರ ಫೋಟೋಗಳು ಮತ್ತು ವಿಡಿಯೋಗಳು ಸಿಕ್ಕಾಪಟ್ಟೆ ವೈ’ರಲ್ ಆಗಿದೆ.
ದರ್ಶನ್ ಅವರು ಇತ್ತೀಚೆಗೆ ಪತ್ನಿ ವಿಜಯಲಕ್ಷ್ಮಿ ಮತ್ತು ಮಗ ದರ್ಶನ್ ಜೊತೆ ಹೆಚ್.ಡಿ.ಕೋಟೆ ಸಮೀಪದ ಜಾಗಗಳಿಗೆ ಹೋಗಿ ಎoಜಾಯ್ ಮಾಡಿದ್ದಾರೆ. ಕಾರ್ ರೈಡ್ ಫೋಟೋಗಳು ಮತ್ತು ಕಬಿನಿಯ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಬಹಳ ವೈರಲ್ ಆಗಿದೆ. ಈ ಮೂಲಕ ತಾವು ಕುಟುಂಬದ ಜೊತೆ ಚೆನ್ನಾಗಿರುವುದಾಗಿ ದರ್ಶನ್ ಅವರು ಪರೋಕ್ಷವಾಗಿ ಉತ್ತರ ನೀಡಿದ್ದಾರೆ. ಈ ಮೂಲಕ ಸ್ಟಾರ್ ನಟರಿಗೆ ಕಾಂಟ್ರವರ್ಸಿ ಹೊಸ ವಿಚಾರವೇನಲ್ಲ ಆದರೆ ಅದರ ಹೊರತಾಗಿಯೂ ಚಾಲೆಂಜಿಗ್ ಆಗಿ ಬದುಕಲು ಸಾಧ್ಯವಿದೆ ಎಂಬುದಕ್ಕೆ ದರ್ಶನ್ ಒಳ್ಳೆ ನಿದರ್ಶನ ಎನ್ನಬಹುದು.