Darshan And Yash: ಅಂಬಿ ಪುತ್ರನ ಮದುವೆಯಲ್ಲಿ ದರ್ಶನ್ ಹಾಗೂ ಯಶ್ ಮಸ್ತ್ ಡಾನ್ಸ್, ವಿಡಿಯೋ ವೈರಲ್.
ಅಂಬಿ ಪುತ್ರನ ಸಂಗೀತ ಕಾರ್ಯಕ್ರಮದಲ್ಲಿ ದರ್ಶನ್ ಹಾಗೂ ಯಶ್ ಮಸ್ತ್ ಡಾನ್ಸ್.
Darshan And Yash Dance: ಇದೀಗ ಸೋಶಿಯಲ್ ಮೀಡಿಯಾದಲ್ಲಿ ಅಂಬಿ ಪುತ್ರನ ಮದುವೆಯ ಸದ್ದು ಜೋರಾಗಿದೆ. ಜೂನ್ 5 ರಂದು ಅಭಿಷೇಕ್ ಅವಿವಾ (Abhishek Aviva Marriage) ಮದುವೆ ಬಹಳ ಅದೂರಿಯಾಗಿ ನಡೆದಿದೆ. ಭಾರತೀಯ ಚಿತ್ರರಂಗದ ಸ್ಟಾರ್ ನಟ ನಟಿಯರಿಂದ ಹಿಡಿದು ಸಾಕಷ್ಟು ರಾಜಕೀಯ ಮುಖಂಡರು ಅಭಿ ಅವಿವಾ ಮದುವೆಗೆ ಆಗಮಿಸಿದ್ದರು.
ಅಭಿಷೇಕ್ ಹಾಗೂ ಅವಿವಾ ಮದುವೇ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ವೈರಲ್ ಆಗುತ್ತಿದೆ. ಜೂನ್ 7 ರಂದು ಅಂಬಿ ಪುತ್ರದ ಆರತಕ್ಷತೆ ಕೂಡ ಬಹಳ ಅದ್ದೂರಿಯಾಗಿ ನಡೆದಿದೆ. ಇನ್ನು ಮದುವೆ ಆರತಕ್ಷತೆ ಮುಗಿದ ಬಳಿಕ ನವ ಜೋಡಿಯ ಸಂಗೀತ ಕಾರ್ಯಕ್ರಮ ಕೂಡ ನೆರವೇರಿದೆ. ಈ ಕಾರ್ಯಕ್ರಮದಲ್ಲಿ ಸ್ಯಾಂಡಲ್ ವುಡ್ ನ ಸ್ಟಾರ್ ನಟರಾದ ದರ್ಶನ್ (Darshan) ಮತ್ತು ಯಶ್ (Yash) ಅವರು ಭಾಗಿಯಾಗಿದ್ದಾರೆ.
![Darshan and Yash dance at Ambi's son's wedding](https://nadunudi.in/wp-content/uploads/2023/06/yash-and-darshan-dance.png)
ಅಭಿ ಅವಿವಾ ಅದ್ದೂರಿ ಸಂಗೀತ ಕಾರ್ಯಕ್ರಮ
ಅದ್ದೂರಿ ಮದುವೆ ಆರತಕ್ಷತೆಯ ಬಳಿಕ ಸಂಗೀತ ಪಾರ್ಟಿಯನ್ನು ಸಹ ಹಮ್ಮಿಕೊಂಡಿದ್ದರು. ಈ ಸಂಗೀತ ಕಾರ್ಯಕ್ರಮದಲ್ಲಿ ನಟ ದರ್ಶನ್, ಯಶ್, ನಟಿ ರಮ್ಯಾ ಕೃಷ್ಣ, ನಟಿ ಮಾಲಾಶ್ರೀ ಸೇರಿದಂತೆ ಸಾಕಷ್ಟು ನಟ ನಟಿಯರು ಭಾಗಿಯಾಗಿದಾರೆ.
ಅಲ್ಲದೆ ನಟಿ ಸುಮಲತಾ ಸಹ ಅಭಿಷೇಕ್, ಅವಿವಾ, ಯಶ್ ಹಾಗು ದರ್ಶನ್ ಜೊತೆ ಸೇರಿ ಹೆಜ್ಜೆ ಹಾಕಿದ್ದಲ್ಲದೆ ಸಂಭಂದಿಕರೊಡನೆ ಹಾಗು ಗೆಳೆಯ ಗೆಳತಿಯರೊಂದಿಗೆ ಹೆಜ್ಜೆ ಹಾಕಿದ್ದಾರೆ. ಅಂಬಿ ಪುತ್ರನ ಸಂಗೀತ ಕಾರ್ಯಕ್ರಮ ಬಹಳ ಅದ್ಭುತವಾಗಿ ನೆರವೇರಿದೆ.
![Darshan and Yash dance at Ambi's son's wedding](https://nadunudi.in/wp-content/uploads/2023/06/darshan-and-yash-dance-with-sumalatha.png)
ಅಂಬಿ ಪುತ್ರನ ಮದುವೆಯಲ್ಲಿ ದರ್ಶನ್ ಹಾಗೂ ಯಶ್ ಮಸ್ತ್ ಡಾನ್ಸ್
ದರ್ಶನ್, ಅಭಿಷೇಕ್, ಯಶ್, ನಟಿ ಸುಮಲತಾ, ಹಾಗು ಅವಿವಾ ಜೊತೆಯಾಗಿ ಕೈ ಹಿಡಿದು ಅಂಬರೀಷ್ ಅವರ ಹೇ ಜಲೀಲಾ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ಪ್ರೇಮ ಪ್ರೀತಿ ನನ್ನಸಿರು, ನ್ಯಾಯ ನೀತಿ ನನ್ನುಸಿರು, ಯಶ್ ಅವರ ಹಂಗೋ ಹಿಂಗೋ ಸಾಂಗ್ ಸೇರಿದಂತೆ ಇನ್ನಿತರಾ ಸಾಂಗ್ ಗಳಿಗೆ ದರ್ಶನ್ ಹಾಗೂ ಯಶ್ ಹೆಜ್ಜೆ ಹಾಕಿದ್ದಾರೆ. ದರ್ಶನ್ ಹಾಗೂ ಯಶ್ ಕಾಂಬಿನೇಷನ್ ಡಾನ್ಸ್ ಎಲ್ಲೆಡೆ ವೈರಲ್ ಆಗುತ್ತಿದೆ.
View this post on Instagram
ಸುಮಲತಾ,ಯಶ್,ಅಭಿಷೇಕ್, ಮಾಲಾಶ್ರೀ, ರಮ್ಯಾ ಕೃಷ್ಣಾ ಎಲ್ಲ ಸೆಲೆಬ್ರಿಟಿಗಳು ಸಂಗೀತ ಕಾರ್ಯಕ್ರಮದಲ್ಲಿ ಹೆಜ್ಜೆಹಾಕಿದ್ದಾರೆ. ಇನ್ನು ದರ್ಶನ್ ಹಾಗೂ ಯಶ್ ಅವರ ಡಾನ್ಸ್ ವೇದಿಯೊ ವ್ಯಾಪಕ ಮೆಚ್ಚುಗೆ ಗಳಿಸುತ್ತಿದೆ. ಜೋಡೆತ್ತುಗಳ ಸಮಾಗಮ ಮತ್ತೆ ಆಗಿರುವುದು ಈ ಇಬ್ಬರು ಅಭಿಮಾನಿಗಳಲ್ಲಿ ಖುಷಿ ತಂದಿದೆ. ದರ್ಶನ್ ಹಾಗೂ ಯಶ್ ನಡುವಿನ ಬಾಂಧವ್ಯವನ್ನು ಕನ್ನಡಿಗರು ಮೆಚ್ಚಿಕೊಂಡಿದ್ದಾರೆ.