Kodi Mutt Predict: ಶ್ರಾವಣ ಮಾಸದ ಆರಂಭದಲ್ಲೇ ಇನ್ನೊಂದು ಆಘಾತಕಾರಿ ಭವಿಷ್ಯ ನುಡಿದ ಕೊಡಿ ಶ್ರೀಗಳು, ಆತಂಕದಲ್ಲಿ ಜನರು.
ಶ್ರಾವಣ ಮಾಸದ ಮಧ್ಯಂತರದಲ್ಲಿ ಎದುರಾಗುವ ಸಂಕಷ್ಟದ ಬಗ್ಗೆ ಶ್ರೀಗಳು ಭವಿಷ್ಯವಾಣಿ ನುಡಿದಿದ್ದಾರೆ.
Kodi Mutt Swamy Astrology: ಭವಿಷ್ಯವಾಣಿಯಿಂದಲೇ ಸಾಕಷ್ಟು ಖ್ಯಾತಿ ಪಡೆದಿರುವ ಕೊಡಿ ಮಠದ ಶಿವಯೋಗಿ ಶಿವಾನಂದ ರಾಜೇಂದ್ರ (Shivayogi Shivananda Rajendra) ಸ್ವಾಮೀಜಿಯವರು ಸದಾ ಸುದ್ದಿಯಲ್ಲಿರುತ್ತಾರೆ. ಸದ್ಯದಲ್ಲಿ ಸಂಭವಿಸಲಿರುವ ಕೆಲವು ವಿಸ್ಮಯಕಾರಿ ಸಂಗತಿಗಳ ಬಗ್ಗೆ ಆಗಾಗ ಮಾಹಿತಿ ನೀಡುತ್ತಾ ಇರುತ್ತಾರೆ. ಮುಂದೆ ಸಂಭವಿಸಲಿರುವ ಕೆಡುಕುಗಳ ಬಗ್ಗೆ ಶ್ರೀಗಳು ಸೂಚನೆ ನೀಡುತ್ತಾರೆ.
ಕೆಲವು ಸಮಯದ ಹಿಂದೆ ವಿಧಾನಸಭಾ ಚುನಾವಣೆ ಹಾಗೂ ಲೋಕಸಭಾ ಚುನಾವಣೆಯ ಕುರಿತು ಮಹತ್ವದ ಭವಿಷ್ಯವನ್ನು ನುಡಿದಿದ್ದರು. ವಿಧಾನಸಭಾ ಚುನಾವಣೆಯಲ್ಲಿ ಯಾವ ಪಕ್ಷ ಅಧಿಕಾರವನ್ನು ಪಡೆಯುತ್ತದೆ ಎನ್ನುವ ಬಗ್ಗೆ ಸ್ವಾಮೀಜಿಯವರು ಭವಿಷ್ಯವಾಣಿ ನುಡಿದಿದ್ದರು. ಇದೀಗ ಶಿವಯೋಗಿ ಶಿವಾನಂದ ರಾಜೇಂದ್ರ ಸ್ವಾಮೀಜಿಯವರು ಶ್ರಾವಣ ಮಾಸದ ಮಧ್ಯಂತರದಲ್ಲಿ ಎದುರಾಗುವ ಸಂಕಷ್ಟದ ಬಗ್ಗೆ ಶ್ರೀಗಳು ಭವಿಷ್ಯವಾಣಿ ನುಡಿದಿದ್ದಾರೆ.
![Kodi Mutt Shri Astrology](https://nadunudi.in/wp-content/uploads/2023/08/kodi-mutt-swamiji-latest.png)
ಮತ್ತೊಂದು ಭಯಾನಕ ಭವಿಷ್ಯ ನುಡಿದ ಕೊಡಿ ಮಠದ ಶ್ರೀಗಳು
ಬೆಳಗಾವಿಯಲ್ಲಿ ಶ್ರೀಗಳು ಶ್ರಾವಣ ಮಾಸದಲ್ಲಿ ಆಗಲಿರುವ ಘಟನೆಗಳ ಬಗ್ಗೆ ಮಾಹಿತಿ ನೀಡಿದ್ದಾರೆ. ಭೂಕಂಪ ಸುನಾಮಿಯಿಂದ ಹೆಚ್ಚಿನ ಜನರ ಸಾವು ನೋವು ಸಂಭವಿಸುತ್ತದೆ. ವಿಷಾನಿಲ ಬೀಸುವ ಪ್ರಸಂಗವು ಇದೆ ಮತ್ತು ಅದು ಎಲ್ಲ ಕಡೆಯೂ ವ್ಯಾಪಿಸಲಿದೆ. ವಿಪರೀತ ಮಳೆಯಿಂದ ಎರಡು ದೇಶಗಳು ನಾಶ ಆಗುತ್ತದೆ. ಭರದಲ್ಲಿ ಜಲಪ್ರಳಯ ಆಗುವ ಲಕ್ಷಣಗಳಿವೆ. ಚಂದ್ರಯಾನ 3 ಯಶಸ್ವಿಯಾಗಿ ನಡೆಯಲಿದೆ. ಲೋಕಸಭೆ ಚುನಾವಣೆ ಫಲಿತಾಂಶ ಬಗ್ಗೆ ಹೇಳಲು ಇನ್ನು ಸಮಯವಿದೆ.
ಪ್ರಕೃತಿಯ ವಿಕೋಪದ ಬಗ್ಗೆ ಶ್ರೀಗಳ ಸೂಚನೆ
ಪ್ರಕೃತಿ ಕೂಡ ಮುನಿಸಿಕೊಳ್ಳುವ ಸ್ಥಿತಿ ಇದೆ. ಗಿಡಮರಗಳನ್ನು ಮನುಷ್ಯ ನಾಶ ಮಾಡುತ್ತಿದ್ದಾನೆ. ಈ ಪ್ರಕೃತಿಯ ದೋಷ ಮನುಕುಲಕ್ಕೆ ಇದೆ. ಮೊದಲು ಅಂತರ್ಜಲ ಹೆಚ್ಚಿತ್ತು. ಈಗ ಆಳವಾಗಿ ಬೋರವೆಲ್ ಕೊರೆಸಬೇಕು. ಹೀಗಾಗಿ ಪ್ರಳಯ ಜಾಸ್ತಿ ಆಗ್ತಿದೆ. ಮನುಷ್ಯ ಅತಿವೇಗದಲ್ಲಿ ಹಣ ಮಾಡಲು ಹೊರಟಿದ್ದಾನೆ. ಆದರೆ ಮನುಷ್ಯ ಭಗವಂತನನ್ನು ಮರೆತಿದ್ದಾನೆ. ದೈವ ನಂಬಿಕೆ ಮೇಲೆ ಜೀವನ ಮಾಡಬೇಕು. ಇವುಗಳನ್ನು ಕಳೆದುಕೊಂಡ ಪರಿಣಾಮವೇ ಅನಾಹುತ ಆಗುತ್ತಿದೆ.
![Kodi Mutt Shri Astrology](https://nadunudi.in/wp-content/uploads/2023/08/kodi-mutt-shri-latest.png)
ರಾಜ್ಯ ರಾಜಕಾರಣದ ಬಗ್ಗೆ ಶ್ರೀಗಳ ಭವಿಷ್ಯ
ರಾಜಕಾರಣದ ಬಗ್ಗೆ ಏನು ಹೇಳಲ್ಲ, ಆದರೆ ಸರ್ಕಾರಕ್ಕೆ ತೊಂದರೆ ಇಲ್ಲ. ಪಕ್ಷಾಂತರದ ಬಗ್ಗೆಯೂ ಚುನಾವಣೆ ಪೂರ್ವವೆ ಹೇಳಿದ್ದೆ, ರಾಜಕೀಯ ಅಲ್ಲೋಲ ಕಲ್ಲೋಲ ಆಗಲಿದೆ ಎಂದು ಹೇಳಿದ್ದೆ. ಈಗ ಅಸ್ಥಿರತೆ ಉಂಟಾಗುತ್ತಿದೆ. ಈ ರಾಜ್ಯಕ್ಕೆ ಮಹಿಳಾ ಮುಖ್ಯಮ್ನತ್ರಿ ಆಗುವ ಯೋಗ ಇದೆಯೇ ಈ ಪ್ರಶ್ನೆಗೂ ಶ್ರೀಗಳು ಉತ್ತರ ನೀಡಿದ್ದಾರೆ.
ಇವರದ್ದು ಮುಗಿಲಿ, ಎಲ್ಲವನ್ನು ಕಿತ್ತುಕೊಳ್ಳುತ್ತಿದ್ದಾರೆ. ಒಮ್ಮೆ ಮಹಿಳೆಯರಿಗೆ ಸಿಎಂ ಆಗುವ ಯೋಗ ಬರಲಿದೆ, ಅವರಿಗೂ ಅವಕಾಶ ಸಿಗಲಿ. ಹಣದ ಹಿಂದೆ ಮನುಷ್ಯ ಹೋಗದೆ ದೈವದ ಹಿಂದೆ ಹೋಗಬೇಕು ಎಂದು ಶ್ರೀಗಳು ಭವಿಷ್ಯವಾಣಿ ನುಡಿದ್ದಾರೆ.