Narendra Nayak: ಚುನಾವಣೆಯಲ್ಲಿ ಯಾರು ವಿನ್ ಆಗುತ್ತಾರೆ, ನಿಖರವಾಗಿ ಹೇಳಿದರೆ ಸಿಗಲಿದೆ 10 ಲಕ್ಷ ರೂ ಬಹುಮಾನ.
ಈ ಬಾರಿ ಚುನಾವಣೆಯಲ್ಲಿ ಯಾರು ಗೆಲುವನ್ನು ಸಾಧಿಸುತ್ತಾರೆ, ನಿಖರವಾಗಿ ಹೇಳಿದ ಜ್ಯೋತಿಷಿಗಳಿಗೆ ಬಹುಮಾನ ಘೋಷಿಸಿದ ನರೇಂದ್ರ ನಾಯಕ್.
Narendra Nayak Offer For Astrologers:ರಾಜ್ಯ ವಿಧಾನಸಭಾ ಚುನಾವಣೆಯ ಸಲುವಾಗಿ ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷ ವಿವಿಧ ರೀತಿಯ ಭರವಸೆಗಳನ್ನು ನೀಡಿ ಮತದಾರರನ್ನು ಸೆಳೆಯುತ್ತಿದ್ದಾರೆ. ಕರ್ನಾಟಕಾ ವಿಧಾನಸಭಾ ಚುನಾವಣೆಗೆ (Assembly Election) ಇನ್ನೇನು ಕೇವಲ ಎರಡು ದಿನಗಳು ಮಾತ್ರಾ ಬಾಕಿ ಇದೆ. ಚುನಾವಣಾ ಪ್ರಚಾರ ಕಾರ್ಯ ದಿನದಿಂದ ದಿನಕ್ಕೆ ರಂಗೇರುತ್ತಿದೆ.
ರಾಜಕೀಯ ಮುಖಂಡರು ಮನೆ ಮನೆ ಭೇಟಿ ನೀಡಿ ಮತ ಭೇಟೆ ಪ್ರಾರಂಭಿಸಿದ್ದಾರೆ. ಈ ಬಾರಿ ರಾಜಕೀಯ ಪ್ರಚಾರದಲ್ಲಿ ಸ್ಟಾರ್ ನಟ ನಟಿಯರ ಪ್ರಚಾರ ಜೋರಾಗಿಯೇ ಇದೆ. ಇಂದು ಸಂಜೆಯ ತನಕ ಚುನಾವಣಾ ಪ್ರಚಾರ ಕಾರ್ಯ ಮಾಡಬಹುದು. ಇಂದು ಸಂಜೆಯಿಂದ ಪ್ರಚಾರ ಕಾರ್ಯಕ್ಕೆ ತೆರೆ ಬೀಳಲಿದೆ. ಇದೀಗ ಚುನಾವಣೆಗೆ ಸಂಭಂದಿಸಿದಂತೆ ಹೊಸ ಮಾಹಿತಿಯೊಂದು ಹೊರಬಿದ್ದಿದೆ. ಈ ಬಗ್ಗೆ ಒಂದಿಷ್ಟು ಮಾಹಿತಿ ತಿಳಿಯೋಣ.
ಜ್ಯೋತಿಷಿಗಳಿಗಾಗಿ ಭರ್ಜರಿ ಆಫರ್ ಘೋಷಣೆ
ಈಗಾಗಲೇ ಯಾವ ಪಕ್ಷ ಗೆಲುವು ಸಾಧಿಸುತ್ತದೆ ಎನ್ನುವ ಬಗ್ಗೆ ಸಾಕಷ್ಟು ಚರ್ಚೆಗಳು ನಡೆದಿವೆ. ರಾಜ್ಯದಲ್ಲಿ ಯಾವ ಪಕ್ಷಕ್ಕಾರ್ ಅಧಿಕಾರ ಸಿಗಲಿದೆ ಎನ್ನುವ ಬಗ್ಗೆ ಸಮೀಕ್ಷೆಗಳು ಕೂಡ ನಡೆದಿವೆ. ಇದೀಗ ಭಾರತೀಯ ವಿಚಾರವಾದಿ ಸಂಘಗಳ ಒಕ್ಕೂಟದ ಅಧ್ಯಕ್ಷ ಮಂಗಳೂರಿನ ಡಾ. ನರೇಂದ್ರ ನಾಯಕ್ (Narendra Nayak) ಜ್ಯೋತಿಷಿಗಳಿಗಾಗಿ ಭರ್ಜರಿ ಆಫರ್ ಘೋಷಿಸಿದ್ದಾರೆ.
ಚುನಾವಣೆಯಲ್ಲಿ ಯಾರು ವಿನ್ ಆಗುತ್ತಾರೆ ಎಂದು ನಿಖರವಾಗಿ ಹೇಳಿದರೆ 10 ಲಕ್ಷ ಬಹುಮಾನ ಘೋಷಣೆ
ಈ ಬಾರಿಯ ಚುನಾವಣೆಯಲ್ಲಿ ಯಾರು ಗೆಲುವನ್ನು ಸಾಧಿಸುತ್ತಾರೆ ಎನ್ನುವ 20 ರೀತಿಯ ಪ್ರಶ್ನೆಗಳಿಗೆ ನಿಖರ ಉತ್ತರ ನೀಡಿದ ಜ್ಯೋತಿಷಿಗಳಿಗೆ ಬಹುಮಾನವನ್ನು ಘೋಷಿಸಲಾಗಿದೆ.
ಕರ್ನಾಟಕದಲ್ಲಿ ಈ ಬಾರಿ ಯಾವ ಪಕ್ಷ ಅಧಿಕಾರಕ್ಕೆ ಬರುತ್ತದೆ? ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಎಷ್ಟು ಸೀಟ್ ಗೆಲ್ಲುತ್ತದೆ? ಆಯ್ಕೆಯಾಗುವ ಮಹಿಳಾ ಶಾಸಕರೆಷ್ಟು? ಪಕ್ಷೇತರ ಗೆಲ್ಲುವ ಸ್ಥಾನವೆಷ್ಟು? ಸೇರಿದಂತೆ ಇನ್ನಿತರಾ 20 ಪ್ರಶ್ನೆಗಳಿಗೆ ನಿಖರ ಉತ್ತರ ನೀಡುವ ಜ್ಯೋತಿಷಿಗಳಿಗೆ 10 ಲಕ್ಷ ರೂಪಾಯಿ ಬಹುಮಾನ ನೀಡುವುದಾಗಿ ನರೇಂದ್ರ ನಾಯಕ್ ಅವರು ಘೋಷಣೆ ಹೊರಡಿಸಿದ್ದಾರೆ.