PM Kisan Nidhi: ರಾಜ್ಯ ಸರ್ಕಾರದಿಂದ ಪಿಎಂ ಕಿಸಾನ್ ನಿಧಿ ಹಣ ಬಿಡುಗಡೆ, ರೈತರ ಖಾತೆಗೆ 3000 ರೂ. ಜಮಾ.
ರಾಜ್ಯದ ಈ ರೈತರ ಖಾತೆಗೆ ಜಮಾ ಆಗಲಿದೆ 3000 ರೂ.
Pradhan Mantri Kisan Samman Nidhi: ಲೋಕಸಭಾ ಚುನಾವಣೆಯಲ್ಲಿ BJP ಸರ್ಕಾರ ಹೆಚ್ಚು ಸ್ಥಾನವನ್ನು ಗೆಲ್ಲುವ ಮೂಲಕ ಈ ಬಾರಿ ಕೇಂದ್ರದಲ್ಲಿ ಅಧಿಕಾರವನ್ನು ಪಡೆಯಲು ಅರ್ಹತೆಯನ್ನು ಪಡೆದುಕೊಂಡಿದೆ. NDA ಸಹಭಾಗಿತ್ವದೊಂದಿಗೆ BJP ಸರ್ಕಾರ ರಚನೆಗೊಂಡಿದೆ.
ಜೂನ್ 9 ರಂದು ಸತತ ಮೂರನೇ ಬಾರಿಗೆ ದೇಶದ ಪ್ರಧಾನಿಯಾಗಿ ನರೇಂದ್ರ ಮೋದಿ ಅವರು ಪ್ರಮಾಣವಚನ ಸ್ವೀಕರಿಸಿದ್ದಾರೆ. ಮೋದಿ ಪ್ರಮಾಣವಚನ ಸ್ವೀಕರಿಸಿ ಮೂರನೇ ಬಾರಿಗೆ ಪ್ರಧಾನಿ ಸ್ಥಾನವನ್ನು ಪಡೆದ ಬೆನ್ನಲ್ಲೇ ದೇಶದ ರೈತರಿಗೆ ಸಿಹಿ ಸುದ್ದಿ ನೀಡಿದ್ದಾರೆ. ಮೋದಿ ಸರ್ಕಾರ ಆದೇಶದ ಮೇರೆಗೆ ರಾಜ್ಯ ಸರ್ಕಾರ ರಾಜ್ಯದ ರೈತರಿಗೆ ಈ ಸೌಲಭ್ಯವನ್ನು ನೀಡಲು ಮುಂದಾಗಿದೆ.
![Pradhan Mantri Kisan Samman Nidhi](https://nadunudi.in/wp-content/uploads/2024/06/Pradhan-Mantri-Kisan-Samman-Nidhi.png)
ರಾಜ್ಯ ಸರ್ಕಾರದಿಂದ ಪಿಎಂ ಕಿಸಾನ್ ನಿಧಿ ಹಣ ಬಿಡುಗಡೆ
ಸದ್ಯ ದೇಶದ ಪ್ರಧಾನಿ ನರೇಂದ್ರ ಮೋದಿ ಅವರು ಪ್ರಧಾನಿ ಕಿಸಾನ್ ನಿಧಿ ಕಂತು ಕ್ಲಿಯರ್ ಮಾಡುವ ಕಡಿತಕ್ಕೆ ಸಹಿ ಮಾಡಿದರೆ. ಮೋದಿ ಅವರ ಈ ಒಂದು ಸಹಿ ಸಾಕಷ್ಟು ರೈತರಿಗೆ ಅನುಕೂಲ ಮಾಡಿಕೊಡಲಿದೆ. ಅವರು ಪ್ರಧಾನಿ ಕಿಸಾನ್ ನಿಧಿ ಕಂತು ಕ್ಲಿಯರ್ ಮಾಡುವ ಕಡಿತಕ್ಕೆ ಸಹಿ ಹಾಕಿದ್ದರಿಂದ ಕರ್ನಾಟಕ ಸರ್ಕಾರ ಅತಿ ಸಣ್ಣ ರೈತರಿಗೆ ಹಣ ಬಿಡುಗಡೆ ಮಾಡಿದೆ. ಕರ್ನಾಟಕ ಸರ್ಕಾರ ಸೋಮವಾರ 17.09 ಲಕ್ಷ ಸಣ್ಣ ರೈತರಿಗೆ ತಲಾ 3000 ರೂ. ವಿತರಣೆ ಮಾಡಲು ಮುಂದಾಗಿದೆ. ಸರ್ಕಾರ ಅರ್ಹ ಫಲಾನುಭವಿ ರೈತರ ಪಟ್ಟಿಯನ್ನು ಬಿಡುಗಡೆ ಮಾಡಿದೆ.
ರಾಜ್ಯದ ಈ ರೈತರ ಖಾತೆಗೆ ಜಮಾ ಆಗಲಿದೆ 3000 ರೂ.
ಸರ್ಕಾರ ಬಿಡುಗಡೆ ಮಾಡಿರುವ ಈ ಹಣ ಸಾಕಷ್ಟು ರೈತರಿಗೆ ಪರಿಹಾರವಾಗಲಿದೆ. ಮಳೆಯಾಶ್ರಿತ ರೈತರು ಹಾಗೂ ಕಾಲುವೆಗಳ ಕೊನೆ ಭಾಗದ ನೀರು ಪೂರೈಕೆ ಕಳಪೆಯಾಗಿರುವ ರೈತರಿಗೆ ಪರಿಹಾರ ಸಿಗಲಿದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ತಿಳಿಸಿದ್ದಾರೆ. ”ಎನ್ಡಿಆರ್ಎಫ್ 232 ಕೋಟಿ ಬಿಡುಗಡೆ ಮಾಡಿದ್ದು, ಅದು ಸಾಕಾಗುವುದಿಲ್ಲ. ಹಾಗಾಗಿ ಎಸ್ಡಿಆರ್ಎಫ್ನಿಂದ 232 ಕೋಟಿ ಸೇರಿಸಿದ್ದೇವೆ. ಈ ಪರಿಹಾರದ ಹೊರತಾಗಿ ರೈತರಿಗೆ ಬೆಳೆ ವಿಮೆ ನೀಡಲಾಗುವುದು. ಈವರೆಗೆ 1,654 ಕೋಟಿ ರೂ. ಪಾವತಿಸಲಾಗಿದ್ದು, ಇನ್ನೂ 136 ಕೋಟಿ ರೂ. ಬಿಡುಗಡೆ ಮಾಡಲಾಗುವುದು ಎಂದು ಕೃಷ್ಣ ಬೈರೇಗೌಡ ಮಾಹಿತಿ ತಿಳಿಸಿದ್ದಾರೆ.
![Pradhan Mantri Kisan Samman Nidhi Money](https://nadunudi.in/wp-content/uploads/2024/06/Pradhan-Mantri-Kisan-Samman-Nidhi-Money.png)