Ration Card: ಇನ್ನುಮುಂದೆ ಈ ದಿನಗಳಲ್ಲಿ ಮಾತ್ರ ಸಿಗಲಿದೆ ರೇಷನ್, ನಿಯಮದಲ್ಲಿ ಬದಲಾವಣೆ.
ಪ್ರತಿ ತಿಂಗಳು 13 ರಿಂದ 24 ತನಕ ಮಾತ್ರ ರೇಷನ್ ಅಂಗಡಿಗಳಲ್ಲಿ ರೇಷನ್ ಧಾನ್ಯಗಳನ್ನ ವಿತರಣೆ ಮಾಡಲು ತೀರ್ಮಾನವನ್ನ ಮಾದಗಲಿದೆ
Ration Card Update: ಜನಸಾಮಾನ್ಯರ ಅನುಕೂಲಕ್ಕಾಗಿ ಸರ್ಕಾರ ಈಗಾಗಲೇ ಸಾಕಷ್ಟು ಸೌಲಭ್ಯವನ್ನು ನೀಡುತ್ತಿದೆ. ಇನ್ನು ಬಡಜನರಿಗಾಗಿ ಸರ್ಕಾರ ಉಚಿತ ಪಡಿತರ (Ration) ವಿತರಣೆ ಮಾಡುತ್ತಿದೆ. ಇದೀಗ ಉಚಿತ ಪಡಿತರ ವಿತರಣೆಯಲ್ಲಿ ಹೊಸ ನಿಯಮ ಜಾರಿಗೆ ಬಂದಿದೆ.
ಪಡಿತರ ವಿತರಣೆಯ ಸಮಯದಲ್ಲಿ ಬದಲಾವಣೆ ಮಾಡಲು ಸರ್ಕಾರ ನಿರ್ಧರಿಸಿದೆ. ಪಡಿತರ ವಿತರಣೆಯ ನಿಯಮದಲ್ಲಿನ ಬದಲಾವಣೆ ಎಲ್ಲಿ ಮಾಡಲಾಗಿದೆ ಎನ್ನುವ ಬಗ್ಗೆ ತಿಳಿಯೋಣ.
ಉಚಿತ ಪಡಿತರ ವಿತರಣೆ
ದೇಶದ ಜನತೆಗೆ ಉಚಿತ ಪಡಿತರನ್ನು ನೀಡಲು ಸರ್ಕಾರ ನಿರ್ಧರಿಸುತ್ತಿದೆ. ಪ್ರತಿ ತಿಂಗಳಿಗೊಮ್ಮೆ ಜನಸಾಮಾನ್ಯರು ಉಚಿತ ಪಡಿತರ ವಿತರಣೆಯ ಸೌಲಭ್ಯವನ್ನು ಪಡೆಯುತ್ತಾರೆ. ಇನ್ನು ಇದೀಗ ಉತ್ತರ ಪ್ರದೇಶದಲ್ಲಿ (Uttar Pradesh) ಪಡಿತರ ವಿತರಣೆಯ ಸಮಯದಲ್ಲಿ ಬಾರಿ ಬದಲಾವಣೆ ತರಲಾಗಿದೆ. ಪಡಿತರ ವಿತರಣೆಯ ನಿಯಮದ ಬದಲಾವಣೆಯ ಬಗ್ಗೆ ಮಾಹಿತಿ ತಿಳಿಯೋಣ.
ಪಡಿತರ ವಿತರಣೆಯ ನಿಯಮದಲ್ಲಿ ಬದಲಾವಣೆ
ಉತ್ತರಪ್ರದೇಶ ಸರ್ಕಾರವು ಪಡಿತರ ನಿಯಮದಲ್ಲಿ ಹೊಸ ಬದಲಾವಣೆಯನ್ನು ತಂದಿದೆ. ಇನ್ನು ಪಡಿತರ ವಿತರಣೆಯಲ್ಲಿ ಮೊದಲು ಬಂದವರಿಗೆ ಆದ್ಯತೆ ನೀಡಲಾಗುತ್ತದೆ. ಹಾಗೆಯೆ ಪ್ರತಿ ತಿಂಗಳು 13 ರಿಂದ 24 ರ ವರೆಗೆ ಮಾತ್ರ ಉತ್ತರಪ್ರದೇಶದಲ್ಲಿ ಪಡಿತರ ವಿತರಣೆ ನಡೆಯಲಿದೆ. ಅಂತ್ಯೋದಯ ಕಾರ್ಡ್ ಹೊಂದಿದ್ವರು 14 ಕೆಜಿ ಗೋಧಿ, 20 ಕೆಜಿ ಅಕ್ಕಿ ಮತ್ತು 1 ಕೆಜಿ ಬಾಜ್ರಾ ಪಡೆಯಬಹುದು.
ಪಡಿತರ ವಿತರಣೆಯ ಸಮಯದಲ್ಲಿ ಬದಲಾವಣೆ
ಇನ್ನು ಉತ್ತರಪ್ರದೇಶದಲ್ಲಿ ಪಡಿತರ ವಿತರಣೆಯ ಸಮಯವನ್ನು ಬದಲಾಯಿಸಲಾಗಿದೆ. ಬೆಳಿಗ್ಗೆ 6 ರಿಂದ ರಾತ್ರಿ 9 ಗಂಟೆಯ ವರೆಗೆ ಪಡಿತರ ವಿತರಣೆ ನಡೆಯಲಿದೆ. ಜನಸಾಮಾನ್ಯರ ಅನುಕೂಲಕ್ಕಾಗಿ ಸಮಯ ಬದಲಾವಣೆಯನ್ನು ತರಲಾಗಿದೆ. ಇನ್ನು ಕರ್ನಾಟಕದಲ್ಲೂ ಕೂಡ ಪಡಿತರ ವಿತರಣೆಯ ಸಮಯ ಬದಲಾವಣೆಯ ಸಾಧ್ಯತೆ ಇದೆ ಎನ್ನಲಾಗುತ್ತಿದೆ.