Ration Card Ban: ಈ 6 ತಪ್ಪು ಮಾಡಿದವರ BPL ರೇಷನ್ ಕಾರ್ಡ್ ಇಂದಿನಿಂದ ರದ್ದು, ಸಿದ್ದರಾಮಯ್ಯ ಮಹತ್ವದ ಘೋಷಣೆ.
ಈ 6 ಮಾನದಂಡಗಳನ್ನ ಪಾಲಿಸದವರ BPL ರೇಷನ್ ಕಾರ್ಡ್ ರದ್ದು ಮಾಡಲು ಈಗ ಕೇಂದ್ರ ಸರ್ಕಾರ ತೀರ್ಮಾನವನ್ನ ಮಾಡಿದೆ.
Ration Card Survey: ದೇಶದಲ್ಲಿ ಸರ್ಕಾರದ ಸೌಲಭ್ಯಗಳನ್ನೂ ಪಡೆಯಲು ರೇಷನ್ ಕಾರ್ಡ್ (Ration Card)ಅತಿ ಮುಖ್ಯವಾಗಿದೆ. ಸರ್ಕಾರ ಬಡತನ ಎದುರಿಸುತ್ತಿರುವ ಕುಟುಂಬಕ್ಕೆ ಅನುಕೂಲವಾಗುವ ನಿಟ್ಟಿನಲ್ಲಿ BPL ಕಾರ್ಡ್ ಅನ್ನು ಬಡತನ ರೇಖೆಗಿಂತ ಕೆಳಗಿರುವವರಿಗೆ ನೀಡುತ್ತಿದ್ದೆ. ವ್ಯಕ್ತಿಯ ವಾರ್ಷಿಕ ಆದಾಯವನ್ನು ಪರಿಗಣನೆಗೆ ತೆಗೆದುಕೊಂಡು BPL ಕಾರ್ಡ್ ಅನ್ನು ನೀಡಲಾಗುತ್ತದೆ. ಪಡಿತರ ಚೀಟಿ ಇದ್ದರೆ ಸುಲಭವಾಗಿ ಎಲ್ಲ ಸವಲತ್ತು ಗಳನ್ನೂ ಪಡೆಯಬಹುದಾಗಿದೆ.
![Big shock for ration card holders](https://nadunudi.in/wp-content/uploads/2023/08/ration-card-survey.png)
ರೇಷನ್ ಕಾರ್ಡ್ ಹೊಂದಿರುವವರಿಗೆ ಬಿಗ್ ಶಾಕ್
ಸದ್ಯ ರಾಜ್ಯ ಸರ್ಕಾರ ಘೋಷಣೆ ಮಾಡಿದಂತೆ BPL ಕಾರ್ಡ್ ಹೊಂದಿರುವ ಕುಟುಂಬಗಳಿಗೆ ಉಚಿತವಾಗಿ ಅಕ್ಕಿ ನೀಡಲಾಗುತ್ತಿದ್ದು ರಾಜ್ಯದಲ್ಲಿ ಲಕ್ಷಾಂತರ ಜನರು ಉಚಿತ ಅಕ್ಕಿ ಪಡೆದುಕೊಳ್ಳುತ್ತಿದ್ದಾರೆ ಎಂದು ಹೇಳಬಹುದು. ಇದೀಗ ಸುಳ್ಳು ಮಾಹಿತಿಯನ್ನ ನೀಡಿ BPL ರೇಷನ್ ಕಾರ್ಡ್ ಪಡೆದುಕೊಂಡವರ ವಿರುದ್ಧ ಸರ್ಕಾರ ಕ್ರಮ ಕೈಗೊಳ್ಳಲು ಮುಂದಾಗಿದೆ.
BPL ಕಾರ್ಡ್ ದಾರರ ಆರ್ಥಿಕ ಸ್ಥಿತಿ ಬಗ್ಗೆ ಸರ್ವೇ ನೆಡೆಸಲು ಚಿಂತನೆ ನೆಡೆಸುತ್ತಿದೆ. ಈ ಸರ್ವೇ ಯನ್ನು ಆರು ಮಾನದಂಡಗಳ ಮೂಲಕ ನೆಡೆಸಲಾಗುತ್ತದೆ. ಸಮೀಕ್ಷೆ ನೆಡೆಸುವಾಗ ಅರ್ಹತೆ ಇಲ್ಲದವರು BPL ಕಾರ್ಡ್ ಪಡೆದಿದ್ದರೆ ಅಂತವರ ರೇಷನ್ ಕಾರ್ಡ್ ಅನ್ನು ರದ್ದು ಮಾಡಿ, ಬಳಕೆದಾರರಿಗೆ ದಂಡ ವನ್ನು ವಿಧಿಸಲಾಗುತ್ತದೆ.
![6 Criteria for Conducting Ration Card Survey](https://nadunudi.in/wp-content/uploads/2023/08/ration-card-latest-updatee.png)
ಪಡಿತರ ಚೀಟಿಯ ಸಮೀಕ್ಷೆ ನೆಡೆಸುವ 6 ಮಾನದಂಡಗಳು
*BPL ಕಾರ್ಡ್ ಪಡೆದವರು ವೈಟ್ ಬೋರ್ಡ್ ಕಾರ್ ಹೊಂದಿರಬಾರದು
*ವಾರ್ಷಿಕ ಆದಾಯ 1 .2 ಲಕ್ಷ ಮೀರಬಾರದು
*3 ಹೆಕ್ಟೇರ್ ಗಿಂತ ಹೆಚ್ಚಿನ ಕೃಷಿ ಭೂಮಿಯನ್ನು ಹೊಂದಿರಬಾರದು
*ನಗರ ಪ್ರದೇಶದಲ್ಲಿ 1000 ಸ್ವೇರ್ ಪೀಟ್ ಒಳಗೆ ಮನೆ ನಿರ್ಮಾಣವಾಗಿರಬೇಕು
*ಸರ್ಕಾರೀ ನೌಕರರು BPL ಕಾರ್ಡ್ ಹೊಂದಿರಬಾರದು
*ಆದಾಯ ತೆರಿಗೆ ಪಾವತಿಸುವವರು ಬಿಪಿಎಲ್ ಕಾರ್ಡ್ ಪಡೆಯುವಂತಿಲ್ಲ
ಈ ಎಲ್ಲ ಮಾನದಂಡಗಳನ್ನು ಮೀರಿ ಪಡೆದವರ BPL ಕಾರ್ಡ್ ಅನ್ನು ನಿಷ್ಕ್ರಿಯಗೊಳಿಸಿ, ದಂಡ ವಿಧಿಸಲಾಗುವವುದು ಎಂದು ಆಹಾರ ಇಲಾಖೆ ಮಾಹಿತಿ ನೀಡಿದೆ.
![Good news for state ration card holders](https://nadunudi.in/wp-content/uploads/2023/08/ration-card-survey-latest.png)
ರಾಜ್ಯದ ಪಡಿತರ ಚೀಟಿದಾರರಿಗೆ ಗುಡ್ ನ್ಯೂಸ್
ಅನ್ನ ಭಾಗ್ಯ ಯೋಜನೆಯ ಕುರಿತು ಸಚಿವ ಕೆ ಹೆಚ್ ಮುನಿಯಪ್ಪ ಅವರು ಆಗಸ್ಟ್ 25 ಅಥವಾ 26 ರೊಳಗೆ ಫಲಾನುಭವಿಗಳ ಖಾತೆಗೆ ಅನ್ನ ಭಾಗ್ಯ ಯೋಜನೆಯ ಹಣ ಜಮಾ ಮಾಡಲಾಗುವುದು ಮಾಹಿತಿ ನೀಡಿದ್ದಾರೆ. ಕಳೆದ ತಿಂಗಳು ಡಿಬಿಟಿ ವಿಚಾರವಾಗಿ ಹಣ ಜಮಾ ಮಾಡುವುದು ತಡವಾಗಿತ್ತು ಆದರೆ ಈ ತಿಂಗಳು 25 ,26 ರೊಳಗೆ ಹೆಚ್ಚುವರಿ 5 ಕೆಜಿ ಅಕ್ಕಿಯ ಹಣ ಜಮಾ ಮಾಡಲಾಗುವುದು ಎಂದಿದ್ದಾರೆ.
ಇದೆ ಸಂದರ್ಭದಲ್ಲಿ ಆಹಾರ ಇಲಾಖೆಯಲ್ಲಿ 2181 ಹುದ್ದೆ ಗಳು ಖಾಲಿ ಇದ್ದು ಶೀಘ್ರವೇ ನೇಮಕಾತಿಗೆ ಅಧಿಸೂಚನೆಯನ್ನು ಹೊರಡಿಸಲಾಗುತ್ತದೆ ಎಂದು ಆಹಾರ ಸಚಿವ ಮುನಿಯಪ್ಪ ಅವರು ತಿಳಿಸಿದ್ದಾರೆ.