Yuva Nidhi: ಇಂತಹ ವಿದ್ಯಾವಂತರಿಗೆ ಮಾತ್ರ ಸಿಗಲಿದೆ ಯುವ ನಿಧಿ ಯೋಜನೆಯ ಹಣ, ಅರ್ಹತೆ ಪಟ್ಟಿ ಬಿಡುಗಡೆ

ಯುವ ನಿಧಿ ಯೋಜನೆಗೆ ಅರ್ಹರ ಪಟ್ಟಿ ಬಿಡುಗಡೆ, ಇಂತವರಿಗೆ ಮಾತ್ರ ಸಿಗಲಿದೆ ಯುವ ನಿಧಿ ಹಣ

Yuva Nidhi Eligibility: ಕಾಂಗ್ರೆಸ್ ಸರ್ಕಾರದ ಐದನೇ ಗ್ಯಾರಂಟಿ ಯೋಜನೆಯಾದ Yuva Nidhi ಇದೀಗ ರಾಜ್ಯದಲ್ಲಿ ಬಾರಿ ಚರ್ಚೆಯನ್ನು ಹುಟ್ಟುಹಾಕುತ್ತಿದೆ. ಡಿಪ್ಲೊಮೊ ಹಾಗೂ ಪದವೀಧರರಿಗಾಗಿ ಮೀಸಲಿಟ್ಟ ನಿರುದ್ಯೋಗ ಭತ್ಯೆ ಅರ್ಹರಿಗೆ ತಲುಪಲು ಇನ್ನೇನು ಕೆಲವೇ ದಿನಗಳು ಭಾಕಿ ಇದೆ. ರಾಜ್ಯ ಸರ್ಕಾರದಿಂದ ಯೋಜನೆಯ ಅನುಷ್ಠಾನದ ಆಬಗ್ಗೆ ಮಾಹಿತಿ ಈಗಾಗಲೇ ಲಭಿಸಿದೆ.

ನೀವು ಯುವ ನಿಧಿ ಯೋಜನೆಯ ಲಾಭ ಪಡೆಯಲು ಯೋಜನೆಯ ಅರ್ಹತೆ, ಬೇಕಾಗುವ ದಾಖಲೆ, ನೋಂದಣಿಯ ದಿನಾಂಕ ಅರ್ಜಿ ಸಲ್ಲಿಕೆ ಹೀಗೆ ಮುಂತಾದ ವಿಷಯಗಳ ಬಗೆ ಮಾಹಿತಿ ತಿಳಿಯುವುದು ಅಗತ್ಯ. ಸದ್ಯ ರಾಜ್ಯ ಸರ್ಕಾರದಿಂದ ಯುವ ನಿಧಿ ಯೋಜನೆಗೆ ಯಾರ್ಯಾರು ಅರ್ಹರು ಎನ್ನುವ ಬಗ್ಗೆ ಅಧಿಕೃತ ಮಾಹಿತಿ ಲಭಿಸಿದೆ. ಸರ್ಕಾರ ಯುವ ನಿಧಿ ಯೋಜನೆಯ ಲಾಭ ಯಾರು ಯಾರಿಗೆ ಸಿಗಲಿದೆ ಅನ್ನುವುದರ ಬಗ್ಗೆ ಪಟ್ಟಿ ಬಿಡುಗಡೆ ಮಾಡಿದೆ 

Yuva Nidhi Scheme Latest Updates
Image Credit: Original Source

ಯುವ ನಿಧಿ ಯೋಜನೆ ಯಾವಾಗ ಜಾರಿ..?
ರಾಜ್ಯದಲ್ಲಿ 2022 -23 ನೇ ಸಾಲಿನಲ್ಲಿ ಉತ್ತೀರ್ಣರಾಗಿ 6 ತಿಂಗಳು ಉದ್ಯೋಗ ಇಲ್ಲದವರಿಗೆ ರಾಜ್ಯ ಸರ್ಕಾರದ ಯುವ ನಿಧಿ ಯೋಜನೆಯ ಲಾಭ ದೊರೆಯಲಿದೆ. ಪದವಿ ವಿದ್ಯಾರ್ಥಿಗಳಾಗಿದ್ದರೆ ರೂ. 3000 ಮಾಸಿಕ ಭತ್ಯೆ, ಡಿಪ್ಲೊಮೊ ವಿದ್ಯಾರ್ಥಿಗಳಾಗಿದ್ದರೆ ರೂ. 1500 ಮಾಸಿಕ ಭತ್ಯೆಯನ್ನು ಜನವರಿ 2024 ರಲ್ಲಿ ನೀಡಲಾಗುತ್ತದೆ.

ಯುವ ನಿಧಿ ಯೋಜನೆಯ ನೋಂದಣಿ ಯಾವಾಗ..?
ಸದ್ಯ ಈ ಯುವ ನಿಧಿ ಯೋಜನೆಯ ನೋಂದಣಿಗೆ ಸಂಬಂಧಿಸಿದಂತೆ ಸರ್ಕಾರ ಮಹತ್ವದ ಮಾಹಿತಿ ನೀಡಿದೆ. ನೀವು ಯುವ ನಿಧಿ ಯೋಜನೆಯ ನೋಂದಣಿಯನ್ನು December 21 ರಿಂದ ಮಾಡಲು ಸರ್ಕಾರ ಅನುಮತಿ ನೀಡಿದೆ. ನಿರುದ್ಯೋಗ ಭತ್ಯೆಯನ್ನು ಫಲಾನುಭವಿಗಳ ಖಾತೆಗೆ ನೇರವಾಗಿ ಜಮಾ ಮಾಡಲಾಗುತ್ತದೆ.

Karnataka Yuva Nidhi Scheme
Image Credit: Computergyaan

ಅರ್ಜಿ ಸಲ್ಲಿಕೆಗೆ ಯಾವ ಯಾವ ದಾಖಲೆಗಳು ಅಗತ್ಯ ..?
*ಆಧಾರ್ ಕಾರ್ಡ್
*ಆದಾಯ ಪ್ರಮಾಣಪತ್ರ
*ಶಿಕ್ಷಣ ಸಂಸ್ಥೆಯಿಂದ ಪಡೆದ ಪ್ರಮಾಣ ಪತ್ರ ಹಾಗೂ ಅಂಕಪಟ್ಟಿ
*ಬ್ಯಾಂಕ್ ಖಾತೆಯ ವಿವರ ಇಮೈಲ್ ಐಡಿ
*ಮೊಬೈಲ್ ಸಂಖ್ಯೆ
*ಭಾವಚಿತ್ರ
*ಪದವಿ ಹಾಗೂ ಡಿಪ್ಲೊಮೊ ಮುಗಿಸಿದ ಕೊನೆಯ ವರ್ಷದ ಅಂಕಪಟ್ಟಿ

Join Nadunudi News WhatsApp Group

ಇಂತಹ ವಿದ್ಯಾವಂತರಿಗೆ ಮಾತ್ರ ಸಿಗಲಿದೆ ಯುವ ನಿಧಿ ಯೋಜನೆಯ ಹಣ
•ಅರ್ಜಿದಾರರು ಕರ್ನಾಟಕದ ಖಾಯಂ ನಿವಾಸಿಗಳಾಗಿರಬೇಕು.

•ಅರ್ಜಿದಾರರು ಪದವಿ ಅಥವಾ ಡಿಪ್ಲೊಮಾ ಹೊಂದಿರುವವರಾಗಿರಬೇಕು.

•ಅರ್ಜಿದಾರರು 2022-2023 ರಲ್ಲಿ ಅವನ/ ಅವಳ ಪದವಿ ಅಥವಾ ಡಿಪ್ಲೊಮಾವನ್ನು ಉತ್ತೀರ್ಣರಾಗಿರಬೇಕು.

•ಅರ್ಜಿದಾರರು ಪದವಿ ಅಥವಾ ಡಿಪ್ಲೊಮಾ ದಿನಾಂಕದ ನಂತರ ಕನಿಷ್ಠ 180 ದಿನಗಳವರೆಗೆ ನಿರುದ್ಯೋಗಿಗಳಾಗಿರಬೇಕು.

Yuva Nidhi Eligibility
Image Credit: Govinfo

ಯುವ ನಿಧಿ ಯೋಜನೆಯ ಲಾಭ ಯಾರಿಗೆ ಲಭ್ಯವಿಲ್ಲ..?
~ಪದವಿ ಅಥವಾ ಡಿಪ್ಲೊಮಾ ಉತ್ತೀರ್ಣರಾದ ನಂತರ ಉನ್ನತ ಶಿಕ್ಷಣ ಪಡೆಯುತ್ತಿರುವ ಯುವಕರು.

~ಅಪ್ರೆಂಟಿಸ್ ವೇತನದ ಫಲಾನುಭವಿ.

~ಸರ್ಕಾರಿ ಅಥವಾ ಖಾಸಗಿ ವಲಯದಲ್ಲಿ ಉದ್ಯೋಗದಲ್ಲಿರುವ ಯುವಕರು.

~ಸ್ವಯಂ ಉದ್ಯೋಗದಲ್ಲಿರುವ ಯುವಕರು.

~ಸರ್ಕಾರದ ಇತರ ಆರ್ಥಿಕ ನೆರವು ಯೋಜನೆಯ ಫಲಾನುಭವಿ.

Join Nadunudi News WhatsApp Group