Actress Shruti: ನಟ ದರ್ಶನ್ ಬಗ್ಗೆ ತಡವಾಗಿ ಮೌನಮುರಿದ ನಟಿ ಶೃತಿ, ಅಷ್ಟಕ್ಕೂ ನಟಿ ಶೃತಿ ಹೇಳಿದ್ದೇನು ನೋಡಿ.

ನಟ ದರ್ಶನ್ ಬಗ್ಗೆ ತಡವಾಗಿ ಮೌನಮುರಿದ ನಟಿ ಶೃತಿ

Actress Shruti About Darshan: ಸ್ಯಾಂಡಲ್ ವುಡ್ ನ ಸ್ಟಾರ್ ನಟ ದರ್ಶನ್ ಸದ್ಯ ಜೈಲಿನಲ್ಲಿದ್ದಾರೆ. ನಟ ದರ್ಶನ್ ಚಿತ್ರದುರ್ಗದ ರೇಣುಕಾಸ್ವಾಮಿ ಪ್ರಕರಣದಲ್ಲಿ ಜೈಲು ಪಾಲಾಗಿರುವ ಬಗ್ಗೆ ಸಾಕಷ್ಟು ಚರ್ಚೆ ನಡೆಯುತ್ತಿದೆ. ಕೋರ್ಟ್ ಜುಲೈ 4 ರವರೆಗೆ ದರ್ಶನ್ ಅವರನ್ನು ನ್ಯಾಯಾಂಗ ಬಂದನದಲ್ಲಿರಿಸಿದೆ.

ರೇಣುಕಾಸ್ವಾಮಿ ಹತ್ಯೆಯ ಪ್ರಕರಣ ಕೊನೆಯ ಹಂತದಲ್ಲಿ ತಪಿತಸ್ಥರಿಗೆ ಶಿಕ್ಷೆಯಾಗಬೇಕು ಎಂದು ಅನೇಕ ಸೆಲೆಬ್ರೆಟಿಗಳು ದ್ವನಿಯೆತ್ತುತ್ತಿದ್ದಾರೆ. ಇನ್ನು ಸ್ಯಾಂಡಲ್ ವುಡ್ ನ ಅನೇಕ ಕಲಾವಿದರು ದರ್ಶನ್ ವಿರುದ್ಧ ಮಾತನಾಡುತ್ತಿದ್ದಾರೆ, ಕೆಲವರು ದರ್ಶನ್ ಮೇಲಿರುವ ಆರೋಪದ ಬಗ್ಗೆ ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಸದ್ಯ ನಟ ದರ್ಶನ್ ಪ್ರಕರಣಕ್ಕೆ ಸಂಬಂಧಿಸಿದಂತೆ ಕನ್ನಡ ಚಿತ್ರರಂಗದ ಹಿರಿಯ ನಟಿ Shruti ಪ್ರತಿಕ್ರಿಯೆ ನೀಡಿದ್ದಾರೆ.

Actress Shruti Latest News
Image Credit: Celebprofile

ನಟ ದರ್ಶನ್ ಬಗ್ಗೆ ತಡವಾಗಿ ಮೌನಮುರಿದ ನಟಿ ಶೃತಿ
ತಪ್ಪು ಮಾಡಿದವರಿಗೆ ಶಿಕ್ಷೆಯಾಗಬೇಕು. ಪ್ರಾಣ ಕಳೆದುಕೊಂಡವರಿಗೆ ಹಾಗೂ ಇನ್ನೂ ಜಗತ್ತನ್ನೇ ಕಾಣದ ಮಗುವಿಗೆ ನ್ಯಾಯ ಸಿಗಬೇಕು ಎಂದು ನಟಿ ಶ್ರುತಿ ದರ್ಶನ್ ಪ್ರಕರಣದ ಬಗ್ಗೆ ಮಾತನಾಡಿದ್ದಾರೆ. ಎಲ್ಲರ ಮನೆ ದೋಸೆ ತೂತು ಸಿನಿಮಾದಲ್ಲಿ ನಾನು ಮತ್ತು ದರ್ಶನ್ ಮೊದಲ ಸಲ ನಟಿಸಿದ್ದೇವೆ. ಸ್ಟಾರ್ ಪಟ್ಟ ಸಿಕ್ಕ ನಂತರ ಕಾಟೇರ ಸಿನಿಮಾದಲ್ಲಿ ಕೆಲಸ ಮಾಡುವ ಅವಕಾಶ ಸಿಕ್ಕಿತು. ಇಷ್ಟೆಲ್ಲಾ ಅಭಿಮಾನಿ ಬಳಗ, ಜನರ ಪ್ರೀತಿ ಪಡೆದ ದೊಡ್ಡ ಸ್ಟಾರ್ ಅದ್ರು ದರ್ಶನ್ ಅವರದ್ದು ಸರಳತೆ. ಕಷ್ಟಪಟ್ಟು ಬೆಳೆದ ನಟ, ಜನ ಕೊಡುವ ದುಡ್ಡಿಗೆ ಮೋಸ ಮಾಡಬಾರದು ಎಂದು ಸದಾ ಸಿನಿಮಾ ಬಗ್ಗೆ ಯೋಚಿಸುತ್ತಿದ್ದರು.

ಈ ಪ್ರಕರಣದಲ್ಲಿ ದರ್ಶನ್ ಬಂಧನವಾಗಿರುವುದು ನೋವಿನ ಸಂಗತಿ. ಪ್ರಕರಣದ ಹಾದಿ ನೋಡಿದರೆ ದರ್ಶನ್ ದುಡುಕಿದ್ರೂ ಅನಿಸುತ್ತೆ. ಈಗ ತನಿಖೆ ನಡೆಯುತ್ತಿದೆ, ಏನಾಗುತ್ತದೆ ಎಂದು ನೋಡೋಣ. ಮಾನಸಿಕವಾಗಿ ಚಿತ್ರರಂಗ ಕುಗ್ಗಿದೆ. ಸಿನಿಮಾ ಒಂದು ಕುಟುಂಬ. ಯಾರಿಗೆ ತೊಂದರೆಯಾದರೂ ಅದರ ಛಾಯೆ ಚಿತ್ರರಂಗದ ಮೇಲೆ ಪರಿಣಾಮ ಬೀರುತ್ತದೆ. ಎಲ್ಲಿಂದಲೋ ಮಾತುಗಳು ಬರುತ್ತಿವೆ. ಈ ಪ್ರಕರಣವು ತಾರ್ಕಿಕ ತೀರ್ಮಾನವನ್ನು ಕಂಡುಕೊಳ್ಳುತ್ತದೆ ಎಂದು ಭಾವಿಸುತ್ತೇವೆ.

Actress Shruti About Darshan
Image Credit: News 18

ಅಷ್ಟಕ್ಕೂ ನಟಿ ಶೃತಿ ಹೇಳಿದ್ದೇನು ನೋಡಿ
ಸೋಷಿಯಲ್ ಮೀಡಿಯಾದಲ್ಲಿ ಹುಡುಗಿಯರ ಬಗ್ಗೆ ಕೆಟ್ಟ ಕಾಮೆಂಟ್‌ ಗಳು ಬಂದರೆ ತುಂಬಾ ನೋವಾಗುತ್ತದೆ. ಕೆಟ್ಟ ಕಾಮೆಂಟ್‌ ಗಳನ್ನು ಸಹಿಸಲಾಗದೆ ಹುಡುಗಿಯರು ಪ್ರಾಣ ಕಳೆದುಕೊಂಡಿದ್ದಾರೆ ಎಂದು ನಾನು ಅನೇಕ ಕಡೆ ಕೇಳಿದ್ದೇನೆ. ಅವರು ಬಳಸುವ ಕಾಮೆಂಟ್‌ ಗಳು ಮತ್ತು ಅವರು ಬಳಸುವ ಪದಗಳಿಂದ ಆಚೆ ಬರುವುದು ತುಂಬಾ ಕಷ್ಟ. ನಾನು ಆ ಪರಿಸ್ಥಿತಿಯನ್ನು ಎದುರಿಸಿದ್ದೇನೆ.

Join Nadunudi News WhatsApp Group

ಫೇಕ್ ಅಕೌಂಟ್ ನಿಂದ ಬರುತ್ತಿರುವ ಮಾತುಗಳನ್ನು ನೋಡಿ ನೋವು ಅನುಭವಿಸಿದ ದಿನಗಳೂ ಇದ್ದವು. ಹುಡುಗಿಯರ ಮೇಲೆ ಅಶ್ಲೀಲ ಪದಗಳನ್ನು ಬಳಸಿ ಕಾಮೆಂಟ್ ಮಾಡುವುದು ಒಳ್ಳೆಯ ಬೆಳವಣಿಗೆಯಲ್ಲ. ಯಾವ ಹುಡುಗಿಯೂ ಅದನ್ನು ಸುಲಭವಾಗಿ ತೆಗೆದುಕೊಳ್ಳುವುದಿಲ್ಲ. ಸಾಮಾಜಿಕ ಜಾಲತಾಣಗಳಲ್ಲೂ ಕೆವೈಸಿ ಮಾಡಬೇಕು ಎಂದು ಸ್ಯಾಂಡಲ್ ವುಡ್ ನ ಹಿರಿಯ ನಟಿ ಶ್ರುತಿ ಹೇಳಿದ್ದಾರೆ.

Actress Shruti on Darshan case
Image Credit: Zee News

Join Nadunudi News WhatsApp Group