Aryavardhan Guruji: ದರ್ಶನ್ ಬಗ್ಗೆ ಸ್ಪೋಟಕ ಭವಿಷ್ಯ ನುಡಿದ ಆರ್ಯವರ್ಧನ್ ಗುರೂಜಿ, ಹೀಗಿದೆ ದರ್ಶನ್ ಮುಂದಿನ ಜೀವನ
ದರ್ಶನ್ ಭವಿಷ್ಯದ ಬಗ್ಗೆ ಭವಿಷ್ಯವಾಣಿ ನುಡಿದ ಆರ್ಯವರ್ಧನ್ ಗುರೂಜಿ
Aryavardhan Guruji About Darshan: ರೇಣುಕಾಸ್ವಾಮಿ ಹತ್ಯೆಯ ಪ್ರಕರಣ ಸದ್ಯ ದಿನಕ್ಕೊಂದು ತಿರುವು ಪಡೆಯುತ್ತಿದೆ. ಈ ಪ್ರಕರಣಕ್ಕೆ ಸಂಬಂಧಿಸಿದ ದರ್ಶನ್ ಹಾಗೂ 17 ಜನ ಆರೋಪಿಗಳನ್ನು ವಿಚಾರಣೆ ನಡೆಸಿದ್ದು, ಜೂನ್ 20 ರಂದು ಕೋರ್ಟ್ ಗೆ ಹಾಜರುಪಡಿಸಲಾಗಿದೆ. ಕೋರ್ಟ್ ನಲ್ಲಿ ಪ್ರಕರಣದ ವಿಚಾರಣೆ ನಡೆದು ಇದೀಗ ಮತ್ತೆ ನಾಲ್ಕು ಜನ ಆರೋಪಿಗಳನ್ನು ಎರಡು ದಿನ ಕಸ್ಟಡಿಗೆ ನೀಡಲು ಆದೇಶ ಹೊರಡಿಸಲಾಗಿದೆ.
ಪೊಲೀಸ್ ವಕೀಲರ ಕೋರಿಕೆಯ ಮೇರೆಗೆ ಎ2 ಆರೋಪಿ ದರ್ಶನ್ ಜೊತೆಗೆ ಎ9 ಧನರಾಜ್, ಎ10 ವಿನಯ್ ಮತ್ತು ಎ14 ಪ್ರದೋಶ್ ಅವರನ್ನು ಪೊಲೀಸ್ ಕಸ್ಟಡಿಗೆ ತೆಗೆದುಕೊಂಡು ಹೆಚ್ಚಿನ ವಿಚಾರಣೆಗಾಗಿ ಅನ್ನಪೂರ್ಣೇಶ್ವರಿ ನಗರ ಠಾಣೆಗೆ ಕರೆದೊಯ್ಯಲು ನ್ಯಾಯಾಲಯ ಆದೇಶಿಸಿದೆ. ಇದೆಲ್ಲದರ ನಡುವೆ ಸದ್ಯ ದರ್ಶನ್ ರಾಜಯೋಗದ ಬಗ್ಗೆ ಮಾತುಗಳು ಕೇಳಿಬರುತ್ತಿದೆ. ಅಂದರೆ ಕನ್ನಡ ಬಿಗ್ ಬಾಸ್ ನ ಮಾಜಿ ಸ್ಪರ್ದಿ ಜ್ಯೋತಿಷಿ ಆರ್ಯವರ್ಧನ್ ಗುರೂಜಿ ಇದೀಗ ದರ್ಶನ್ ಮುಂದಿನ ಭವಿಷ್ಯದ ಬಗ್ಗೆ ಭವಿಷ್ಯವಾಣಿ ನುಡಿದ್ದಾರೆ.
![Aryavardhan Predicts About Darshan Future](https://nadunudi.in/wp-content/uploads/2024/06/Aryavardhan-Predicts-About-Darshan-Future.png)
ದರ್ಶನ್ ಬಗ್ಗೆ ಭವಿಷ್ಯವಾಣಿ ನುಡಿದ ಆರ್ಯವರ್ಧನ್ ಗುರೂಜಿ
ಇನ್ನು ದರ್ಶನ್ ಹಾಗು ನಾಲ್ಕು ಮಂದಿ ಆರೋಪಿಗಳನ್ನು ಸದ್ಯ ಹೆಚ್ಚಿನ ವಿಚಾರಣೆಗಾಗಿ ಮತ್ತೆ ಎರಡು ದಿನಗಳು ಕಸ್ಟಡಿಗೆ ನೀಡಲಾಗಿದ್ದು, ದರ್ಶನ್ ಗೆಳತೀ ಪವಿತ್ರ ಗೌಡ ಹಾಗೂ 10 ಜನ ಆರೋಪಿಗಳನ್ನು ನ್ಯಾಯಾಂಗ ಬಂಧನದಲ್ಲಿ ಇರಿಸಲಾಗಿದೆ. ನಟ ದರ್ಶನ್ ಅನ್ನು ಪೊಲೀಸರು ಪ್ರಕರಣಕ್ಕೆ ಸಂಬಂಧಿಸಿದಂತೆ ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ. ಇನ್ನು ದರ್ಶನ್ ಈ ನಡೆಗೆ ರಾಜ್ಯದಾದ್ಯಂತ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ. ಈ ಪ್ರಕಣದ ನಂತರ ದರ್ಶನ್ ಇಡೀ ಕರಿಯರ್ ಸಂಪೂರ್ಣ ಬದಲಾಗಲಿದೆ. ಸದ್ಯ ಪೋಲೀಸರ ಬಂಧನದಲ್ಲಿರುವ ದರ್ಶನ್ ಬಗ್ಗೆ ಬಿಗ್ ಬಾಸ್ ನ ಮಾಜಿ ಸ್ಪರ್ದಿ ಜ್ಯೋತಿಷಿ ಆರ್ಯವರ್ಧನ್ ಗುರೂಜಿ ಮಾತನಾಡಿದ್ದಾರೆ. ಅವರ ಮುಂದಿನ ಜೀವನದ ಬಗ್ಗೆ ಭವಿಷ್ಯವಾಣಿ ನುಡಿದಿದ್ದಾರೆ.
ಜೈಲಿನಿಂದ ಹೊರಬಂದ ಬಳಿಕ ದರ್ಶನ್ ಗೆ ರಾಜಕೀಯದಲ್ಲಿ ಭವಿಷ್ಯವಿದೆ
ನಟ ದರ್ಶನ್ ಬಗ್ಗೆ ಜ್ಯೋತಿಷಿ ಆರ್ಯವರ್ಧನ್ ಅಚ್ಚರಿಯ ಭವಿಷ್ಯ ನುಡಿದಿದ್ದಾರೆ. ನಟ ದರ್ಶನ್ ಅವರ ಹೆಸರು ಮತ್ತು ಜನ್ಮ ದಿನಾಂಕವನ್ನು ಗಣನೆಗೆ ತೆಗೆದುಕೊಳ್ಳುವ ಗುರೂಜಿ ಸಂಖ್ಯಾಶಾಸ್ತ್ರದ ಪ್ರಕಾರ, ದರ್ಶನ್ ಅವರ ಜನ್ಮ ದಿನಾಂಕವನ್ನು ವಿರೋಧಿಸುವ ಸಂಖ್ಯೆ 21 ರೊಂದಿಗೆ ಹೋಲಿಸಿದರೆ ಅವರ ಹೆಸರು ಅಶುಭವಾಗಿದೆ. ಇದರಿಂದ ಜೀವನದಲ್ಲಿ ಹಲವು ಸವಾಲು, ಅಶಾಂತಿ ಎದುರಿಸಬೇಕಾಗುತ್ತದೆ ಎಂದರು. ದರ್ಶನ್ ಅವರ ಆರೋಗ್ಯ, ಸಂಬಂಧ, ರಾಜಕೀಯದ ಬಗ್ಗೆ ಭವಿಷ್ಯ ನುಡಿದಿರುವ ಜ್ಯೋತಿಷಿ ಆರ್ಯವರ್ಧನ್, ಅವರ ಜಾತಕದಲ್ಲಿ ‘ರಾಹು ಭುಕ್ತಿ’ ಸಮಯದಲ್ಲಿ ಹಲವು ಆರೋಗ್ಯ ಸಮಸ್ಯೆ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.
![Aryavardhan Guruji About Darshan](https://nadunudi.in/wp-content/uploads/2024/06/Aryavardhan-Guruji-About-Darshan.png)
ಅವರು ಪಾರ್ಶ್ವವಾಯು ಸಮಸ್ಯೆಯಿಂದ ಒಳಗಾಗಬಹುದು ಎಂದು ಹೇಳಿದರು. ಅಲ್ಲದೆ, ಶುಕ್ರನ ದೆಸೆಯಿಂದಾಗಿ ಜೀವನದಲ್ಲಿ ಮಹಿಳೆಯರಿಗೆ ಸಂಬಂಧಿಸಿದ ಸಮಸ್ಯೆಗಳು ಎದುರಾಗಬಹುದು ಎಂದು ಹೇಳಿದ್ದಾರೆ. ಆದರೆ ದರ್ಶನ್ ಅವರ ಜಾತಕದ ಪ್ರಕಾರ ಶನಿಯು ಉತ್ತಮ ಸ್ಥಾನವನ್ನು ಹೊಂದಿರುವುದರಿಂದ ರಾಜಕೀಯ ಜೀವನದಲ್ಲಿ ಎತ್ತರಕ್ಕೆ ಏರುವ ಗುಣಗಳನ್ನು ಹೊಂದಿದ್ದಾರೆ. ಹೀಗಾಗಿ ಮುಂದೆ ಶಾಸಕ ಅಥವಾ ಸಚಿವರಾಗಬಹುದು ಎಂದು ಸಲಹೆ ನೀಡಿದರು. ಅದೇ ರೀತಿ ದರ್ಶನ ಜಾತಕದಲ್ಲಿ ಶನಿಯು 19 ವರ್ಷಗಳ ಸಂಕ್ರಮಣದೊಂದಿಗೆ ರಾಜಯೋಗವನ್ನು ರೂಪಿಸುತ್ತಾನೆ, ಅದು ಅವರಿಗೆ ರಾಜಕೀಯದಲ್ಲಿ ಯಶಸ್ಸನ್ನು ನೀಡುತ್ತದೆ ಎಂದಿದ್ದಾರೆ ಆರ್ಯವರ್ಧನ್ ಗುರೂಜಿ.
![Bigg Boss Contestant Aryavardhan Guruji](https://nadunudi.in/wp-content/uploads/2024/06/Bigg-Boss-Contestant-Aryavardhan-Guruji.png)